Home / ಲೇಖನ / ವಿಜ್ಞಾನ / ಜೈವಿಕ ಬಾಂಬ್! ಭೂ ಪ್ರಳಯ!!

ಜೈವಿಕ ಬಾಂಬ್! ಭೂ ಪ್ರಳಯ!!

ಚಿತ್ರ: ಗರ್‍ಡ್ ಆಲ್ಟ್ ಮನ್

ಜೀವ ವಿಜ್ಞಾನದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆಗಳ ದುಷ್ಪಲವಾಗಿದೆ ಎಂದು ಅಸಂಖ್ಯ ಮಾನವೀಯ ಹೃದಯಿಗಳು ಭಯವನ್ನು ವ್ಯಕ್ತಪಡಿಸಿವೆ. ಈ ಮಾತು ಸತ್ಯ ಜೈವಿಕ ಬಾಂಬಿನಿಂದ ಅಸಂಖ್ಯಾತ ಪಿಡುಗುಗಳು ಆಕ್ರಮಿಸಿ ಜಗತ್ತಿನ ಜೀವಿಗಳ ಮಾರಣ ಹೋಮವಾಗುತ್ತಿರುವುದು ವಾಸ್ತವದ ಸಂಗತಿಯಾಗಿದೆ.

ವಿಶ್ವದ ಎರಡನೆ ಮಹಾಯುದ್ಧದಲ್ಲಿಯೂ ಕೂಡ ಭಾಗಿಯಾಗಿದ್ದ ದೇಶಗಳು ಜೈವಿಕ ಸಮರಾಸ್ತ್ರಗಳನ್ನು ಬಳಸಿದ್ದವು. ಇವುಗಳಲ್ಲಿ ಖ್ಯಾತವಾದದ್ದೆಂದರೆ ಜಪಾನಿ ರಾಜಸೇನೆಯ ‘ಯುನಿಟ್ ೭೩೧’ ಈ ಅಸ್ತ್ರವನ್ನು ಅಂದಿನ ಸಮರದಲ್ಲಿ ಸಿಡಿಸಿದ ಪರಿಣಾಮವಾಗಿ ಪ್ಲೇಗು, ನೆಗಡಿರೋಗ, ಕಾಲರಾ ಮುಂತಾದ ಡಜನ್‌ಗಟ್ಟಲೆ ಭೀಕರ ರೋಗಾಣುಗಳನ್ನು ಉತ್ಪಾದಿಸಿತು. ಈ ಕಾಯಿಲೆಗಳನ್ನು ಶತ್ರುದೇಶಗಳಲ್ಲಿ ಹರಡಿಸಿದ ಯೋಜನೆ ಕೂಡ ಅದಾಗಿತ್ತು. ಜಿನೇವ -ಪ್ರೊಟೋಕಾಲ್ ೧೯೨೫ರ ಅನ್ವಯ ಇಂಥಹ ಅಸ್ತ್ರಗಳನ್ನು ಬಳೆಸುವಂತಿಲ್ಲವೆಂಬ ನಿಯಮವನ್ನೇ ಮಾಡಲಾಗಿತ್ತು ವಿಯಟ್ನಾಂ ಯುದ್ಧದಲ್ಲಿ ಜೈವಿಕ ಸಮರಾಸ್ತ್ರಗಳನ್ನು ಬಳಸಿತ್ತು ಎಂಬ ಬಗ್ಗೆ ಆಧಾರಗಳಿದ್ದವೆಂದು ಅಂದಿನ ಸಂಶೋಧಕ ತಂಡ ಹೇಳಿತ್ತು. ಇಂತಹ ಜೈವಿಕ ಸಮರಾಸ್ತ್ರಗಳನ್ನು ಬಹುತೇಕ ರಾಷ್ಟ್ರಗಳು ಇಂದು ಹೊಂದಿವೆ ಎಂಬುವುದು ಗುಪ್ತಗಾಮಿನಿಯ ಸತ್ಯ. ಈ ಜೈವಿಕ ಸಮರಾಸ್ತ್ರದಲ್ಲಿ ಇರುವುದರಿಂದ, ಇವು ಸ್ಫೋಟಗೊಂಡ ಸ್ಥಳದಲ್ಲಿ ಮುಂದೆಂದೂ ಜೀವಸಂಕುಲದ ವಾಸನೆ ಇರಲಾರದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಮರಾಸ್ತ್ರದ ಪರಿಣಾಮವಾಗಿ ಹುಟ್ಟಿಕೊಳ್ಳುವ ಪಿಡುಗುಗಳು ಅಸಂಖ್ಯ! ಕಳೆದ ಎರಡು ದಶಕಗಳಲ್ಲಿ ಸು. ೩೦ ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್ ಪಿಡುಗುಗಳು ಈ ಭೂಮಿಯ ಮೇಲೆ ಅವತರಿಸಿವೆ. ‘ಇಬೋಲ’ ಮತ್ತು ‘ಏಡ್ಸ್’ ಇವು ಪ್ರಮುಖವಾದ ಜೈವಿಕಾಸ್ತ್ರದ ಮೂಲಕೊಡುಗೆಗಳಾಗಿವೆ. ೧೯೯೫ ರಲ್ಲಿ ‘ಇಬೋಲ’ ಸೊಂಕು ಜೈರ್ ಸುತ್ತ ಮುತ್ತಲೂ ಕಾಣಿಸಿಕೊಂಡು ೧೫೦ ಜನರನ್ನು ಕೊಂದಿತು. ಈ ಸೊಂಕು ತಗುಲಿದ ೨೪ ಗಂಟೆಗಳ ಒಳಗೆ ಸಾವು ಖಚಿತ. ಇದಕ್ಕೆ ನಿಖರವಾದ ಚಿಕಿತ್ಸಯೇ ಇಲ್ಲ. ‘ಏಡ್ಸ್’ ಗೆ ಕಾರಣವಾಗುವ ಈಗ ಜಾಗತಿಕ ಮಟ್ಟದ ಕಾಡುವ ರೋಗ, ಇದರ ಜತೆಗೆ ಹಳೆಯ ರೋಗಗಳು ಪುನರಾವರ್ತನೆಗೊಳ್ಳುತ್ತಲಿವೆ. ‘ಪ್ಲೇಗು’ ಇದು ಕೂಡ ಭಯಂಕರ ರೋಗ. ಗುಜರಾತಿನಲ್ಲಿ ೧೯೯೪ ರಲ್ಲಿ ಕಾಣಿಸಿಕೊಂಡಿತು. ಇದು ಜೈವಿಕ ಸಮರಾಸ್ತ್ರದ ಪ್ರಯೋಗ ಎಂಬ ವಾದವಿದೆ. ೯೦ ರ ದಶಕದಲ್ಲಿ ಪ್ಲೇಗು ಜಗತ್ತಿನ ವಿವಿಧ ಭಾಗಗಳಲ್ಲಿ ಮರುಕಳಿಸುತ್ತಿರುವುದಂತು ಸತ್ಯ. ಭಾರತದಲ್ಲಿ ೩೦ ವರ್ಷಗಳ ನಂತರದಲ್ಲಿ ಕಾಣಿಸಿಕೊಂಡಿದ್ದರೆ ‘ಮಾಲವಿ’ ಮತ್ತು ‘ಜಿಂಬಾಬ್ವೆ’ ಯಲ್ಲಿ ೧೫ ವರ್ಷಗಳ ನಂತರ ಕಾಣಿಸಿಕೊಂಡಿತು. ಜಾಂಬಿಯಾದಲ್ಲಿ ೭೦ ವರ್ಷಗಳ ನಂತರ ಮರುಕಳಿಸಿತು. ಇದರ ಜೊತೆಗೆ ಮಲೇರಿಯಾ ಇದು ಕೂಡ ಒಂದು ವಿಲಕ್ಷಣ ರೋಗ, ಕ್ಲೋರೋಕ್ಟಿನ್ ರೋಧಕ ಮಲೇರಿಯಾ ಕ್ರಿಮಿಗಳು ವ್ಯಾಪಕವಾಗಿ ಹರಡುತ್ತವೆ. ಮಲೇರಿಯಾಕ್ಕೊಂದು ಪರಿಣಾಮಕಾರಿಯಾದ ಲಸಿಕೆಯನ್ನು ನಿರ್ಮಿಸಬೇಕೆಂಬ ಪ್ರಯತ್ನ ಇಂದಿಗೂ ಯಶಸ್ವಿಯಾಗಿಲ್ಲ. ಇದರಂತೆ ‘ಕ್ಷಯ’ ರೋಗವೂ ಒಂದು. ಪ್ರತಿವರ್ಷವೂ ಜಗತ್ತಿನ ಬಹುಭಾಗಗಳಲ್ಲಿರುವ ಹಲವು ರೋಗಗಳು ಸಣ್ಣ ಪುಟ್ಟ ಪಿಡುಗುಗಳ ರೀತಿಯಲ್ಲಿ ಮರುಕಳಿಸುತ್ತಿರುವ ಸುದ್ದಿಗಳು ಬರುತ್ತಿವೆ. ಕಾಲರಾ, ಕರಳುಬೇನೆ, ಜಾಪನೀಸ್, ಮಿದುಳು, ಜ್ವರ, ಡೆಂಗ್ಯೂಜ್ವರ ಮುಂತಾದವುಗಳು ಮನುಷ್ಯರನ್ನು ಆಗಾಗ ಆಕ್ರಮಿಸುತ್ತಲೇ ಇರುತ್ತವೆ.

ಈ ಹಿನ್ನಲೆಯಾಗಿ ಜೈವಿಕ ಸಮರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿ ಜಗತ್ತಿನಲ್ಲಿ ಶಾಂತಿ ಕಾಪಾಡಬೇಕಿದೆ. ಹಲವು ಶತೃರಾಷ್ಟ್ರಗಳಲ್ಲಿ ಇಂಥಹ ಜೈವಿಕ ಸಮರಾಸ್ತ್ರಗಳು ಆಂತರ್ಯದಲ್ಲಿಯೇ ತಯಾರಿಸಲಾಗುತ್ತದೆ, ಎಂಬ ಭಯಾನಕ ಸುದ್ದಿ ಇದೆ. ಮಾನವ ಕುಲವೆಲ್ಲ ಒಂದೇ ಶಾಂತಿ, ನೆಮ್ಮದಿ ನಮ್ಮೆಲ್ಲರ ಉಸಿರು ಎನ್ನುವುದು ಮುಖ್ಯವಾಗಬೇಕಿದೆ. ಇಲ್ಲದೇ ಹೋದರೆ ಈ ಅಸ್ತ್ರಗಳ ಪ್ರಯೋಗಗಳಿಂದ ಶಾಶ್ವತವಾಗಿ ಭೂಮಿ ಬಂಜರುವಾಗುವುದರಲ್ಲಿ ಸಂದೇಹವೇ ಇಲ್ಲ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...