ಹೋದಳುಷೆ-ಬಂತು ನಿಶೆ

ದೇವರಲ್ಲಿ ಹಸಿದನಂತೆ,
ಎನಿತಿತ್ತರು ಸಾಲದಂತೆ,
ಹಾಳುಹೊಟ್ಟೆ ಹಿಂಗದಂತೆ,
ಅದಕೆ ಜೀವ ಬಲಿಗಳಂತೆ,
ಹೋದಳುಷೆ – ಬಂತು ನಿಶೆ!

ನಾವಿಬ್ಬರು ಕೂಡಿದಾಗ,
ಎರಡು ಹೃದಯದೊಂದು ರಾಗ
ಮೋಡಿಯಿಡಲು, ಕಾಲನಾಗ
ಹರಿದು ಕಚ್ಚಿತವಳ ಬೇಗ.
ಹೋದಳುಷೆ – ಬಂತು ನಿಶೆ!

ಜೀವ ಜೀವವೊಂದುಗೂಡಿ,
ಒಲವು ನಲವು ಬೆಸೆಯೆ ಜೋಡಿ,
ಸುಖ ನಗೆಗಳ ಆಟ ಹೂಡಿ,
ಕುಣಿವೆವೆನಲು- ಕಾಲ ಕಾಡಿ,
ಹೋದಳುಷೆ – ಬಂತು ನಿಶೆ!

ಒಲವ ರಾಸಿ, ರೂಪ ಬಲುಮೆ,
ನನ್ನ ಹೃದಯದಲ್ಲ ಹಿರಿಮೆ,
ನಾಡಿ ನಾಡಿಯೊಳಗ ನುಡಿಮೆ
ನಲ್ಮೆ ನವಿಲು, ಚೆಲುವ ಚಿಲುಮೆ
ಹೋದಳುಷೆ – ಬಂತು ನಿಶೆ!

ಹೊಸ ಹರಯದ ಹೊಸಲಿನ ದೆಸೆ
ನಾಳೆ ನಲಿವ ಜೀವದಾಸೆ
ಮೊಗ್ಗಿನಲ್ಲಿ ಮುಕ್ಕಾಗಿಸೆ
ನನ್ನುಷೆಗಿನ್ನೆಲ್ಲಿ ಉಷೆ ?
ಹೋದಳುಷೆ – ಬಂತು ನಿಶೆ!

ಸೂರೆಗೊಂಡರೆದೆಯ ಸಂತೆ !
ಉಳಿದುದಲ್ಲಿ ಶೂನ್ಯ ಬೊಂತೆ.
ನಾಳೆ ಬಾಳು ಅಂತೆ ಕಂತೆ.
ನಾನುಳಿಯುವ ಜಗವಿದಂತೆ !
ಕತ್ತಲೆಲ್ಲ,
ಕಿರಣವಿಲ್ಲ;
ಇದೆ ಒಲವಿನ ಹಾದಿಯಂತೆ !
ಹೋದಳುಷೆ – ಬಂತು ನಿಶೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮನಗರಿಯಲ್ಲಿ ಮದುವೆ
Next post ಹಳದಿ ಹೂ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…