Home / ಕವನ / ಕವಿತೆ / ಆಚೆಗಿನ ಕೂಗು !

ಆಚೆಗಿನ ಕೂಗು !

ಸಾಗರದ ಆಚೆಗಿನ ಕೂಗೊಂದು ಕೇಳುತಿದೆ
ಆರದೋ ಏನೊ? ಯಾರಕರೆಯುತಿಹುದೇನೊ ?
ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ
ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ?

ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ?
ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳೂ ಇಲ್ಲ !
ನನಗಾಗಿಯೊ ಇನ್ನಾರಿಗೋ ಯಾರ ಇಚ್ಚೆಯಲಿ ?
ಈಗೇಕೆ ಈ ಮಧ್ಯ; ಮೌನವಾವರಿಸಿಹುದಲ್ಲ !

ಹಕ್ಕಿ ಹೊರಗಿಲ್ಲ; ನಿಶೆಯು ಹೆದರಿಲ್ಲ; ನಿಶ್ಯಬ್ದ !
ನೆಲದ ಮೇಲಲ್ಲಿ; ಬಾನಬಯಲಲ್ಲಿ; ಸಾಗರದ ಜಲದಲ್ಲಿ
ಮಸಣ ಶಾಂತಿಯ ಕುರುಡು ಕುರುಹಾದ ನಿಶ್ಯಬ್ದ !
ಧರೆ ಹಿರಿದು ಇರುವಾಗ ಕುರುಡಿನಲಿ ಕಿರಿದಾಗಿಹುದಿಲ್ಲಿ

ನನ್ನ ಕಂಡಿತೋ ಏನೊ ಕಾರಿರುಳ ಕತ್ತಲೆಯ ಕಣ್ಣು
ಅಲ್ಲ ನಿಜವಲ್ಲ; ಇರಬಹುದು ಆಂತರ್ಯ ಅವ್ಯಕ್ತ ಜ್ಯೋತಿ
ಸನಿಯದಲ್ಲಿಲ್ಲ; ಬಹುದೂರ. ಕಾಣದಾಗಿವೆ ಕಣ್ಣು
ಕರುಣೆ ಕರೆಯುವ ಅಕ್ಕರೆಯ ತಾಯಕರುಳ ಆತುರ ದ್ಯೋತಿ

ಎಲ್ಲಿಗೋ ಮುಳುಗಿಹೆನು; ಇರುವ ಅರುವಿಲ್ಲ
ಮನ ವಿಶ್ವದಲ್ಲಿ ಕಾರಿರುಳ ಸಾಗರದ ಆಳದಲಿ ಮುಳುಗಿಹೆನು
ಆ ಕೂಗು ಕೂಗಲ್ಲ; ಭಾಗ್ಯ ಕರೆ ಇರಬಹುದಲ್ಲ?
ದಾರಿ ತೋರುವ ಕೂಗು; ನನ್ನಿರವಿನ ಸತ್ಯ ಕೂಗು! ಓಗೊಡಲೇನು?

ನಂಬುವೆನು ನನಗಿರುವ ನನ್ನ ತಾಯ ಕರುಳು
ಅಜ್ಞಾತ; ಅರಿವಿಲ್ಲ! ಧ್ವನಿಯತ್ತ ನಡೆದು ಕೂಡುವೆ ಮೊದಲು
ಹಸಿದೊಡಲಿಗದೋ ಮೃಷ್ಟಾನ್ನ! ಮರೆದರೆ ಮರುಳು
ನಿಜಕು ಆ ಮಾತೆ ಜಗನ್ಮಾತೆ ದಿವ್ಯಮಾತೆ; ನಡೆ ಮೊದಲು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...