Home / ಕವನ / ಕವಿತೆ / ವಿಶ್ವ ಸಂಚಾರಿ

ವಿಶ್ವ ಸಂಚಾರಿ

ನಿನ್ನದೀ ಜಗ ನಿನಗೆ
ಬಲು ಸುಂದರ,
ಎದೆಯೊಲವವರಳಿಸೋ
ನೀ ಸಿರಿ ನೇಸರ ||ಪ||

ಅಂಬೆಗಾಲಿಗೆ ಮುನ್ನ
ಜಗದೊಡೆಯಯೊಡತಿಯಽ ಸೊಗಸು,
ಉರುಳು ಉರುಳತಲಲೆವ
ಕುಸ್ತಿ ಪಟ್ಟುಗಳಽ ಬಿರಿಸು ||೧||

ಕೈ ಕಾಲ ಬಡಿದಾಟ
ಚೆಲ್ವ ಚೆಲ್ಲಾಟವು,
ಅಸಮತೆಯನಳಿಸುವಽ
ಛಲದೊಲವಿನಾ ಠರಾವು ||೨||

ತೊದಲ್ನುಡಿಯ ಮಂಜುಳವು
ಕ್ಷೀರದಾ ನವನೀತ
ರವರವದಽ ಕಲವರವವು
ಸರಿಗಮದ ಗೀತ, ||೩||

ನಿನ್ನೊಡಲ ಹಸಿವೆಯದು
ಸ್ಪುರಿಸೆ ಕಣ್ಣೀರ ಮಾಲೆ,
ತುಂಬಿರೆ ತಾನೊಡಲು
ಗುಡಿಸಲೆದೆ ಸಂತಸದ ಲೀಲೆ ||೪||

ಕಿಂಕಿಣಿಯ ಧಿಮಿ ಧಿಮಿತ
ನಾಟ್ಯರಂಗೋಪರಂಗ,
ನುಡಿ ನುಡಿಯು ಗಿರಿ
ಶಿಖರ ಧಾರಾ ತರಂಗ ||೫||

ನೀ ನಡೆವ ಹಾದಿಯಲಿ
ಭಯವಿಲ್ಲ ನಿನಗೆ,
ನಿನ್ನ ಕಣ್ಣ ನೋಟದಲಿ
ನೇಹದಽ ಬೆಸುಗೆ ||೬||

ಅವರಿವರು ಇವರವರು
ಎಲ್ಲಾರು, ಒಂದೆ,
ಬುವಿ-ಬಾಂದಳದೆದೆಯ ಸತ್ಯತೆಗೆ
ನಿನ್ನಯಽ ಮುಂದೆ ||೭||

ಮನೆ ಮನೆಯ ಮನ ಮನದ
ಶ್ರೀಸೌಗಂಧ ನೀನು,
ಮತ ಮತದ ಪಥ ಹಿತಕೆಲ್ಲ
ನಿಜ ದೈವ ನೀನು ||೮||

ನಿನ್ನೀ ಚೈತನ್ಯದಲಿ
ನೀ ವಿಶ್ವಸಂಚಾರಿ,
ನಿನ್ನರಿವೆ ನನಗೆ ಗುರು
ಬಾಳ ಸಮರಸಕೆ ದಾರಿ ||೯||
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...