Home / ಕವನ / ಕವಿತೆ / ವಿಶ್ವ ಸಂಚಾರಿ

ವಿಶ್ವ ಸಂಚಾರಿ

ನಿನ್ನದೀ ಜಗ ನಿನಗೆ
ಬಲು ಸುಂದರ,
ಎದೆಯೊಲವವರಳಿಸೋ
ನೀ ಸಿರಿ ನೇಸರ ||ಪ||

ಅಂಬೆಗಾಲಿಗೆ ಮುನ್ನ
ಜಗದೊಡೆಯಯೊಡತಿಯಽ ಸೊಗಸು,
ಉರುಳು ಉರುಳತಲಲೆವ
ಕುಸ್ತಿ ಪಟ್ಟುಗಳಽ ಬಿರಿಸು ||೧||

ಕೈ ಕಾಲ ಬಡಿದಾಟ
ಚೆಲ್ವ ಚೆಲ್ಲಾಟವು,
ಅಸಮತೆಯನಳಿಸುವಽ
ಛಲದೊಲವಿನಾ ಠರಾವು ||೨||

ತೊದಲ್ನುಡಿಯ ಮಂಜುಳವು
ಕ್ಷೀರದಾ ನವನೀತ
ರವರವದಽ ಕಲವರವವು
ಸರಿಗಮದ ಗೀತ, ||೩||

ನಿನ್ನೊಡಲ ಹಸಿವೆಯದು
ಸ್ಪುರಿಸೆ ಕಣ್ಣೀರ ಮಾಲೆ,
ತುಂಬಿರೆ ತಾನೊಡಲು
ಗುಡಿಸಲೆದೆ ಸಂತಸದ ಲೀಲೆ ||೪||

ಕಿಂಕಿಣಿಯ ಧಿಮಿ ಧಿಮಿತ
ನಾಟ್ಯರಂಗೋಪರಂಗ,
ನುಡಿ ನುಡಿಯು ಗಿರಿ
ಶಿಖರ ಧಾರಾ ತರಂಗ ||೫||

ನೀ ನಡೆವ ಹಾದಿಯಲಿ
ಭಯವಿಲ್ಲ ನಿನಗೆ,
ನಿನ್ನ ಕಣ್ಣ ನೋಟದಲಿ
ನೇಹದಽ ಬೆಸುಗೆ ||೬||

ಅವರಿವರು ಇವರವರು
ಎಲ್ಲಾರು, ಒಂದೆ,
ಬುವಿ-ಬಾಂದಳದೆದೆಯ ಸತ್ಯತೆಗೆ
ನಿನ್ನಯಽ ಮುಂದೆ ||೭||

ಮನೆ ಮನೆಯ ಮನ ಮನದ
ಶ್ರೀಸೌಗಂಧ ನೀನು,
ಮತ ಮತದ ಪಥ ಹಿತಕೆಲ್ಲ
ನಿಜ ದೈವ ನೀನು ||೮||

ನಿನ್ನೀ ಚೈತನ್ಯದಲಿ
ನೀ ವಿಶ್ವಸಂಚಾರಿ,
ನಿನ್ನರಿವೆ ನನಗೆ ಗುರು
ಬಾಳ ಸಮರಸಕೆ ದಾರಿ ||೯||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...