Home / ಕವನ / ಕವಿತೆ / ಸ್ವಗತ

ಸ್ವಗತ

ಹೆಜ್ಜೆಗಳು ಸೋತು ದಿನದ ಸೂರ್ಯ
ಕಂತಿದ್ದಾನೆ ನಾಳೆಯ ಕಾಲವ ನಡೆಸುವ
ರಾತ್ರಿಯಲಿ ಚೆಲ್ಲಿವೆ ನಕ್ಷತ್ರಗಳು ಬಾನತುಂಬ
ಮನದ ಭಾವಕೆ ವಿದಾಯವಲ್ಲ ಇದು
ಹೊಸಹುಟ್ಟು ತೆರೆದುಕೊಳ್ಳುವ ಬಸಿರು
ಬಾಹು ಬಂಧನಗಳು ಹರಡಿವೆ ಇಳೆಯಲಿ.

ಸಿದ್ಧಾರ್ಥನ ಹುಡುಕಾಟದ ಕಳವಳ
ಎತ್ತಿ ಕುಡಿದ ಬಾಹುಬಲಿ ಯಾವುದು
ಸತ್ಯ ಈ ತಿಳಿಗೇಡಿ ವಿಸ್ಮಯ ಲೋಕದಲಿ
ನಿದ್ರೆಗೆ ಅಮಲು ಬರಿಸುವ ಸಂಜೆಯಲಿ
ಹಕ್ಕಿಗಳು ಹಾರಿವೆ ಹಿಂಡು ಹಿಂಡಾಗಿ
ಗೂಡು ಅರಸುತ್ತ ಅಲೆದಿವೆ ನಿರಂತರ ಸನ್ನೆಗಳಲಿ.

ಹತ್ತಿರ ಸುಳಿದಾಡಿದ ಸ್ತರಗಳು
ಸೋಕಲಿಲ್ಲ ಹೃದಯದ ಬಾಗಿಲುಗಳಲಿ
ಕೈ ತಟ್ಟಿ ತಪ್ಪಾಳೆ ತಟ್ಟದವರು ಹೀಗೆ
ಸರಳವಾಗಿ ಒಳ ಬಂದು ನಗಲಿಲ್ಲ ಒಂದು ತಿಳಿನಗೆ,
ಜ್ಞಾಪಕವಿಲ್ಲದೆ ಹಾಡುಗಳು ಒಮ್ಮೆಲೇ
ಒಲಿದು ರಾಗಗಳಾಗುವುದಿಲ್ಲ ರೀತಿ ರಿವಾಜಗಳು.

ನದಿಯಲಿ ರಮಿಸುತ್ತ ಸಾಗಿವೆ
ಬೆಳಕಿನ ಬೀಜಗಳು ಸಂತೆಯಲಿ
ಸಂತನೊಬ್ಬ ಸರಿದ್ದಾನೆ ಯಾರಿಗೂ ತಿಳಿಯದಂತೆ,
ಕಂದೀಲು ಒರೆಸುವ ಕೈಗಳು ಅಲುಗಾಡಿವೆ
ಪಾರಿವಾಳಗಳು ಸತ್ತಿವೆ ಗೇಟವೇ ಆಫ್ ಇಂಡಿಯಾದಲಿ,
ಉಲ್ಕಾಪಾತದ ಕತ್ತಲೆಯಲಿ ಹೊಸದಾರಿಗಳು
ತೆರೆದುಕೊಂಡಿವೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...