ಹಗಲಿದೊ ಮುಗಿಯುತ ಬಂತು

ಸಂಧ್ಯಾ ರಾಣಿಯು ಸುಂದರ ಸ್ವಾಗತ
ನೀಡಿರಲದ ಕೈಕೊಳ್ಳಲು ಸರಿಯುತ
ಉರಿಗಣ್ಣಿನ ರವಿ ಪಶ್ಚಿಮವರಸುತ
ಕಾತರದಾತುರದಲಿ ಮುನ್ನಡೆದಿರೆ
ಹಗಲಿದೊ ಮುಗಿಯುತ ಬಂತು!

ಮನೆಯಲಿ ಮಡದಿಯು ಕಾದಿಹ ಕಾತರ
ತೊದಲು ಕಂದರಾಲಿಂಗನದಾತುರ
ಜನರೆದೆ ತುಂಬಿರೆ ದಾರಿಯ ಸರಸರ
ತುಳಿದಿವೆ ಕಾಲುಗಳವಸರದಿಂದಲಿ
ಹಗಲಿದೊ ಮುಗಿಯುತ ಬಂತು!

ಹಗಲೆಲ್ಲವು ಎದೆರಕ್ತವ ಬಸಿದಿಹ
ಬಾಳಿಗೆ ದುಡಿವವ, ಅದೋ ನಡೆಯುತಲಿಹ
ಒಲವಿನ ಬಿಸಿಯೂಟವ ಕನವರಿಸಿಹ
ಕಾಲಿನ ಚಟಪಟ ವೇಗವೇರುತಿದೆ
ಹಗಲಿದೊ ಮುಗಿಯುತ ಬಂತು!

ಜಗ ಜವದಲಿ ನಡೆದಿದೆ ಮನೆಯೆಡೆ
ಕಂಡ ಕನಸು ನೀಡುವ ಒಲವಿನ ಎಡೆ
ಉಂಡು ನಿದ್ರಿಸುತೆ, ಸಂತಸವನು ಪಡೆ-
ವಾಸೆಯ ಸಿಡಿತದಿ ರಾಗವೇಗದಲಿ
ಹಗಲಿದೊ ಮುಗಿಯುತ ಬಂತು!

ಹೃದಯದ ನೋವಿದೋ ಕಾಲನಡಿಗೆಯನು
ತಡೆದಿದೆ, ಏತಕೆ ಸಾಗುವೆ ನೀನು ?
ನಿನ್ನುಷೆಯಿಲ್ಲದೊಡೆಂತಿರಲೇನು ?
ಇರುಳು ಮುತ್ತಿದರು, ನಡೆ, ಮೆಲ್ಲನೆ ನಡೆ
ಎನುತಿರೆ-
ಹಗಲಿದೊ ಮುಗಿಯುತ ಬಂತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೂಬೂನ ಬಾಳು
Next post ಸ್ವಗತ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…