Home / ಕವನ / ಕವಿತೆ / ಪಂಚ ಕನ್ಯೆಯರು

ಪಂಚ ಕನ್ಯೆಯರು

ಬ್ರಿಟೀಷ್ ಏರ್‌ವೇಸ್ ಪಯಣ
ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ;
ಇವರು ಪಂಚಕನ್ಯೆಯರೆ…..
ಹಾಗೆಂದೇ ಕರೆಯುತ್ತಿದ್ದಾರೆ ಸಹ
ಭಾರತೀಯ ಪಯಣಿಗರು. ಜೊತೆಗೆ
ಹಸಿರು ಕಣ್ಣಿನ ಕೆಂಪು ತುಟಿಯ
ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು.

ತೂಗುಬಿಟ್ಟ ಗೊಂಡೆಜಡೆ, ಎತ್ತಿ ಕಟ್ಟಿದ
ಕೂದಲಗಂಟು ಸುತ್ತಲೂ ಮಲ್ಲಿಗೆ ಮಾಲೆ
ಶಂಕಚಕ್ರ ಚಿಪ್ಪು ಮಣಿ ಹವಳ
ರುದ್ರಾಕ್ಷಿ ತಾಯಿತ ಕರಿಮಣಿಗಳ ಸರಗಳು
ಕತ್ತಿಗೆ ಭಾರವಾದರೂ ಸಂತೋಷಿಸುವ ರೀತಿ

ಕೊಲ್ಹಾಪೂರಿ ಚಪ್ಪಲಿ, ಬಣ್ಣಬಣ್ಣದ
ಹಾವು ಚೇಳಿನ ಅಂದದ ಕುಂಕುಮ ಬಿಂದಿಗಳು
ಕೈತುಂಬಾ ಗಾಜಿನ ಬಳೆ, ಕಾಲಿಗೆ ಗೆಜ್ಜೆ, ಮೂಗಿಗೆ ನತ್ತು
ಚೂಡಿದಾರ್‍, ಗಾಗರಾಚೋಲಿ, ಮಿಂಚು ಮಿಂಚಿನ
ಟೀಶರ್ಟ್, ಲಾಲ್ ದುಪ್ಪಟ್ಟಾ
ಹತ್ತಾರು ಹಿಂದಿ ಮಾತು ಕಥೆ ಹಾಡು
(ಹವಾಮೆ ಉಡತೆ ಜಾಯೆ ಮೇರೆ ಲಾಲದುಪಟ್ಟಾ
ಮಲ್ ಮಲ್ ಜಿಹೋ ಜೀ….)

ಇತಿಹಾಸ ಓದಿ ಕೇಳಿ ಬಂದ
ಇಂಗ್ಲೆಂಡ್ ಹುಡುಗಿಯರ ಭಾರತ ಪ್ರವಾಸ
ಕಂಡದ್ದೆಲ್ಲಾ ಕೊಂಡು ನೋಡಿದ ಪ್ರೀತಿ

ಇಡೀ ದೇಶಸುತ್ತಿ ಮೋಜು ಮಜ
ಮಾಡಿದಿರಾ? ಕುಟುಕಿದ್ದಕ್ಕೆ
ಸಂಶೋಧನಾ ವಿದ್ಯಾರ್ಥಿನಿಯರ
“ಸಂಸ್ಕೃತಿ ಅಧ್ಯಯನ” ಪರಿ ಬಿಡಿಬಿಡಿಸಿ
ಹೇಳಿದಂತೆ
ಕುತೂಹಲದ ಬಿಳಿಯ ಬ್ರಿಟೀಷರು
ಸುತ್ತಿ ಸುತ್ತಿ ಕಪ್ಪಾಗಿ ಮುಖತುಂಬ ಬೊಬ್ಬೆದ್ದ
ಪಂಚಕನ್ಯೆಯರನು ತಬ್ಬಿ
“ನಮ್ಮ ಹುಡುಗಿಯರ ಸಾಧನೆ” ಎಂದಾಗ
ಪೆಚ್ಚಾದ ಭಾರತೀಯ ಪಯಣಿಗರ ಮುಖ
ಮಂಗನಂತಾಗಿದ್ದೊಂದು ಬಗೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...