Home / ಕವನ / ಕವಿತೆ / ಹೊಸ ಸೂರ್ಯನುದಯಕೆ

ಹೊಸ ಸೂರ್ಯನುದಯಕೆ

ತುಂಬಿದೊಡಲ ಅಬಲೆ ಮೇಲೆ
ಕಾಮಾಂಧರ ನರ್ತನ
ತಾಯೆ ನಿನ್ನ ಒಡಲ ಮೇಲೆ
ನಿತ್ಯ ರಕ್ತ ತರ್ಪಣ
ಅರಳಲಿಲ್ಲಿ ತಾವು ಎಲ್ಲಿ
ಫಲಪುಷ್ಪದ ನಂದನ?

ಅತ್ತು ಅತ್ತು ಸತ್ತ ಭ್ರೂಣ
ಬಿಕ್ಕಿ ಬಿಕ್ಕಿ ಅತ್ತ ’ಬಾನು’
ಜೀವ ಜೀವದಾರ್ತನಾದ
ಕಾಣಲಿಲ್ಲ ಕುರುಡು ಜನಕೆ
ಕೇಳಲಿಲ್ಲ ಕಿವುಡು ಮನಕೆ

ಖಾಕಿಬೂಟಿನಟ್ಪಹಾಸ
ಖಾದಿ ಖದರ ಜಯದ ಘೋಷ
ಹಾಡುಹಗಲೆ ಮೃತ್ಯುಪಾಶ
ಹೆಣ್ಣೆ ನಿನಗೆ ಜೀವಶಿಕ್ಷೆ
ಹೆಜ್ಜೆ ಹೆಜ್ಜೆಗಿರಲು ಎಲ್ಲಿರಕ್ಷೆ?

ಹಿಂದು ಮುಸ್ಲಿಂ ಹೆಸರಿನಲ್ಲಿ
‘ಬಲ್ಕೀಸ’ಳಾ ಉಸಿರು ಎಲ್ಲಿ
ಅಂಧ ಮತಕೆ ಬಂಧವೆಲ್ಲಿ
ತಂದೆ ತಾಯಿ ಬಂಧುವೆಲ್ಲಿ
ಎಲ್ಲಿ ಎಲ್ಲಿ ಎಲ್ಲೆ ಎಲ್ಲಿ
ಉರಿಯ ಸುರಿವ ಜ್ವಾಲೆಗೆ?

ಪ್ರೇತದಂತೆ ನರ್ತನ
ಭೂತದಂತೆ ಕೀರ್ತನ
ಹೆಣ್ಣ ದಾಹ ಹೊನ್ನ ದಾಹ ಮಣ್ಣ ದಾಹ
ದಾಹ ದಾಹ ದಾಹ ದಾಹ…
ದಾಸನಾಗಿ ಮರೆತೆಯಲ್ಲೋ
ಮನುಜನೆಂಬುದ

ಕಮರಿಹೋಯ್ತೆ ಮೊಗ್ಗೆ ನಿನ್ನ
ಹೂವಾಗುವ ಕನಸು?
ಕಸವಾಯಿತೆ ಕಾಲಡಿಯಲ್ಲಿ
ಕಂದ ನಿನ್ನ ಮನಸು?
ಕಣ್ಣು ತೆಗೆವ ಮುನ್ನ ಕೊಂದರಲ್ಲ ನಿನ್ನ
ಥೂ… ಎಂಥ ಹೊಲಸು

ಅಲ್ಲಿ ’ಬಾನು’ ಇಲ್ಲಿ ನಾನು
ನಿತ್ಯ ನರಕಯಾತನೆ
ಎಲ್ಲೆ ಇರಲಿ ಹೇಗೆ ಇರಲಿ
ತಪ್ಪಲಿಲ್ಲ ಯೋಚನೆ
ಹೆಣ್ಣಿಗಿರುವ ಸ್ವಾತಂತ್ರ್ಯ
ಬರಿಯ ಹುಚ್ಚು ಕಲ್ಪನೆ

ತಾಯಿ ತಂಗಿ ಮಾತೃದೈವ
ಎನುವದೆಲ್ಲ ಬೊಗಳೆ
ಸಂತೈಸಲಿ ಹೇಗೆ ಮಗಳೆ
ಇರಲು ದಿನವೂ ರಗಳೆ?
ನಿನ್ನ ನೋವು ನಿನ್ನ ಸಾವು
ತಿಳಿವುದೆಂತು ತಾಯ್ಗಂಡರ ಎದೆಗೆ?

ನ್ಯಾಯವಿಲ್ಲಿ ಕಣ್ಣು ಕುರುಡು
ಕೂಗಿಗಿಲ್ಲಿ ಕಿವಿಯೆ ಕೊರಡು
ಹೃದಯವದು ಬರಿದೆ ಬರಡು
ಇರುವ ಜನರ ಮಾತಿಗಿಲ್ಲ ಎರಡು
ಎನಿತು ಕಾಲ ನೂಕಬೇಕೋ
ನಾಕ ಬೆಳಗಲು?

ನೋವಿಗಿಲ್ಲ ಜಾತಿ ಧರ್ಮ
ಜೀವಕೇಕೆ ಮತದ ಕರ್ಮ
ಬಸವ ಬುದ್ಧ ಏಸು ಬಿದ್ದ
ರಾಮ ರಹಿಮ ಎಲ್ಲಿ ಗೆದ್ದ?
ಕಡಿ ಬಡಿ ಮಂತ್ರವಾಯ್ತೆ ಭಾರತಾಂಬೆಗೆ?
*
ಕಾಯತಿರುವೆ ಕಣ್ಣು ತೆರೆದು
ಹೊಸ ಸೂರ್ಯನ ಉದಯಕೆ!

(ಬಲ್ಕಿಶ್ ಬಾನು ಹೃದಯ ವಿದ್ರಾವಕ ಸಾವಿನ ನೋವಿನಲಿ)
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...