Home / ಕವನ / ಕವಿತೆ / ಡಾಲರ್ ಬಿರುಗಾಳಿ

ಡಾಲರ್ ಬಿರುಗಾಳಿ

ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ
ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ
ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು
ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ
ಋತವ ಸಾರಿದ ವೇದ ಉಷನಿಷತ್ತುಗಳು
ಕಣ್ಮರೆಯಾದವು ಸದ್ದುಗದ್ದಲದಲ್ಲಿ
ಏಕಪತ್ನೀವ್ರತಸ್ಥ ಬೆಡಗಿಯರ ಬೆಂಬತ್ತಿದ್ದಾನೆ
ಸಹನೆ ತಾಳ್ಮೆ ಎಂದು ಕನವರಿಸಿದ ಧರ್ಮ
ಯಾರಿಗೂ ಬೇಡವಾದ ಜಡ ಕರ್ಮ
ಅಹಿಂಸೆ ಪರಧರ್ಮ ಎಂದ ಸಿದ್ಧಾಂತಗಳು
ಕಾಲು ಕಸ ಕೊಳೆತ ತಿಪ್ಪೆಗಳು
ಆಧ್ಯಾತ್ಮ ವೈರಾಗ್ಯ ತ್ಯಾಗ ಭಕ್ತಿ
ಜಪ ತಪಾದಿಗಳು ಪಾಚಿ ಗಟ್ಟಿಹೋಗಿವೆ
ಪಾತಿವ್ರತ್ಯ ಸೋದರ ಪ್ರೇಮ ಸ್ನೇಹ ವಾತ್ಸಲ್ಯ
ಮಾತಾಪಿತೃ ಗುರು ಭಕ್ತಿಗಳು
ಮಾನವೀಯ ಸಂಬಂಧಗಳು
ಅಂತರಂಗ ಶುದ್ದಿ ಆಚಾರ ವಿಚಾರ
ಎಲ್ಲಾ ಎಲ್ಲಾ ಈ ಬಿರುಗಾಳಿಯಲ್ಲಿ
ತೂರಿ ಹೋಗಿವೆ
ಬಣ್ಣ ಬಣ್ಣದ ಗರಿಗಳ ಜಾನಪದ ಹಕ್ಕಿಗಳು
ಅನಾದಿ ಕಾಲದಿಂದ ನಮ್ಮಂಗಳದಲ್ಲಿ
ಆಡಿಕೊಂಡಿದ್ದವು
ಅವು ಬೆದರಿ ಕಂಗಾಲಾಗಿ
ಆಕಾಶಕ್ಕೆ ಹಾರಿದವು
ನೀತಿ ನಿಯಮ ಸಂಯಮ ಸೌಜನ್ಯಗಳ
ದಾರಗಳು ಫಟ್ ಫಟ್ಟೆಂದು ಕಿತ್ತಿ ಹೋದವು
ದೇಶೀ ಊಟ ಪಾಟ ಉಡಿಗೆ ತೊಡಿಗೆಗಳು
ಅಯ್ಯೋ ಪರದೇಶಿಯಾದವು
ರೋಡ್ ರೋಲರ್ ಡಾಲರ್ ದಾಳಿಯಡಿ
ಕೋಮಲಭಾವಗಳ ಹಸುಗೂಸು ಕಂದಮ್ಮಗಳು
ಪುಟಾಣಿ ಹೂಗಿಡಗಳು ಮೊಳಕೆಗಳು
ಅಪ್ಪಚ್ಚಿಯಾಗಿ ಹೋದವು
ನಮ್ಮದೆಯು ಹೆಮ್ಮೆಯಿಂದ ಬೀಗುತ್ತಿದ್ದ
ಇತಿಹಾಸ ಪುರುಷರು ಅವರ ಆದರ್ಶಗಳು
ತ್ಯಾಗ ಬಲಿದಾನ ಸೇವೆಗಳ ಕತೆಗಳು
ವೀರ ವಿದ್ಯುನ್ಮಣಿಗಳು ಧೀರ ವಿದ್ವನ್ಮಣಿಗಳು
ದಾಸರು ಶರಣರು ಸಂತರು
ಕವಿವರೇಣ್ಯರ ದಿವ್ಯವಾಣಿಗಳು
ಶಿಲ್ಪ ಚಿತ್ರ ನಾಟ್ಯಾದಿ ಕಲಾಕುಸುಮಗಳು
ನೆಮ್ಮದಿಯ ಗೂಡಿನಲ್ಲಿ ಬೆಚ್ಚಗಿದ್ದ
ಹಕ್ಕಿಗಳು ಎಲ್ಲ ಎಲ್ಲ ಮನದ ಪರದೆಯಿಂದ ಮಾಯವಾಗಿವೆ
ಎಂಥೆಂಥ ಚಂಡಮಾರುತಗಳಿಗೂ
ಅಲ್ಲಾಡದ ಗಾಜಿನ ಬುರುಡೆಯೊಳಗಿನ
ನಂದಾ ದೀಪದಂತಿದ್ದ ಆತ್ಮ ಚಿಂತನ
ಪರಲೋಕ ಧ್ಯಾನದ ಹಣತೆ
ನೆಲಕ್ಕುರುಳಿ ಹೋಗಿ
ಕಮಟು ಹೊಗೆ ವಾಸನೆ ಮಾತ್ರ
ಗಾಳಿಯಲ್ಲಿ ಹರಡಿ ಕರಗಿ ಹೋಗಿದೆ
ಮಾನವರೆಲ್ಲ ಬುರುಗು ಭೋಗದ
ಮೆರಗು ಮಾಯೆಯ ನೋಟು ಗಿಲೀಟಿನ
ಷೋಕಿ ಸುಖಲೋಲುಪ್ತಿಯ ದಟ್ಟ
ಪಡುವಲ ಬಿರುಗಾಳಿಗೆ ಸಿಕ್ಕು
ತರಗೆಲೆಗಳಾಗಿದ್ದಾರೆ….
ಓಡಾಡುವ ಬೆಂತರಗಳಾಗಿದ್ದಾರೆ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...