Home / ಕವನ / ಕವಿತೆ / ಉದ್ಧಾರ

ಉದ್ಧಾರ

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು?
ಯಾವ ಓದಿನಿಂದಿವನು ವಾದಾತೀತನಾದಾನು?
ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು?
ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು?
ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು?
ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತು?
ಯಾವ ದುಡಿತದಿಂದ ಇವನ ದುಗುಡ ದೂರಾದೀತು?
ಯಾವ ಏಕಾಂತದಲ್ಲಿ ಇವನ ಮಂಗ ಸಂಗ ಕಳೆದೀತು?
ಯಾವ ಎಳೆಯಿಂದ ಇವನ ಹಗ್ಗ ಬಿಗಿಯಾದೀತು?
ಯಾವ ಕಳೆಯಿಂದ ಇವನ ಮರ ಅಮರವಾದೀತು?
ಯಾವ ಬೆಳೆಯಿಂದ ಇವನ ಮನೆ ತುಂಬೀತು?
ಯಾವ ಕರ್ಮದಿಂದ ಇವನ ಧರ್ಮ ರೂಪು ತೋರೀತು?
ಯಾವ ಮರ್ಮದಿಂದ ಇವನ ಮಾನ ಉಳಿದೀತು?
ಯಾವ ಗುರುವಿನಿಂದ ಇವನ ಗೌರವ ಮೆರೆದೀತು?
ಯಾವ ಕೈಯಿಂದ ಇವನ ಕಾಲು ನಡೆದಾವು?
ಯಾವ ಬೆಂಕಿಯಲ್ಲಿ ಇವನ ಕಾವು ಕುದಿದು ಪಕ್ವವಾದೀತು?
ಯಾವ ಬೇವಿಂದ ಇವನ ಬದುಕು ಸಮರಸವಾದೀತು?
ಯಾವ ವಿಷದಿಂದ ಇವನ ವಿಷಯ ತೀರೀತು?
ಯಾವ ಚಿಕ್ಕೆಯಿಂದ ಇವನ ಚೊಕ್ಕತನ ಮಿನುಗೀತು?
ಯಾವ ಬಿಕ್ಕೆಯಿಂದ ಇವನ ಜೋಳಿಗೆ ತುಂಬೀತು?
ಯಾವ ಹಂಗಿನಿಂದ ಇವನ ಹಗರಣ ಹಗುರಾದೀತು?
ಯಾವ ಪರೀಕ್ಷೆಯಲ್ಲಿ ಇವನ ಪರುಷ ದೊರೆತೀತು?
ಯಾವ ಹೊತ್ತಿಗೆಯಲ್ಲಿ ಇವನ ಗೊತ್ತುಗುರಿ ಸಿಕ್ಕೀತು?
ಯಾವ ಹೂವಿಂದ ಇವನ ಹೃದಯವರಳೀತು?
ಯಾವ ಭಾವದಿಂದ ಇವನ ಬೇರು ಬಲಿತೀತು?
ಯಾವ ಸೂಜಿಯಿಂದ ಇವನ ಗುಳ್ಳೆ ಒಡೆದೀತು?
ಯಾವ ಸಂದಿನಿಂದ ಇವನ ಬಂಧಿತ ಸತ್ವ ಚಿಮ್ಮೀತು?
ಯಾವ ಅನ್ನ ನೀರಿನಿಂದ ಇವನ ಒಡಲುರಿಯಾರೀತು?
ಯಾವ ಚುಚ್ಚಿನಿಂದ ಇವನ ರೊಚ್ಚು ಉರಿದೆದ್ದೀತು?
ಯಾವ ಶಸ್ತ್ರದಿಂದ ಇವನ ಸಂಶಯ ಛಿನ್ನವಾದೀತು?
ಯಾವ ಶಾಸ್ತ್ರದಿಂದ ಇವನ ಸ್ತರವು ವಿಸ್ತಾರವಾದೀತು?

ಇವನೊಳಗು ಮೊಳೆತು ಮೊಳಗದೆ
ತಿಳಿದು ತೊಳಗದೆ
ಗುಟ್ಟು ಗಟ್ಟಿಗೊಳ್ಳದೆ
ಇವನ ಯಾರುದ್ಧರಿಸಬೇಕು?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...