Home / ಲೇಖನ / ಇತರೆ / ಮೌನ ಮುರಿಯಲಿ

ಮೌನ ಮುರಿಯಲಿ

ಹಿಂದು ಮುಸ್ಲಿಮರ ಜಗಳ ನಿನ್ನೆ ಈವತ್ತಿನದಲ್ಲ, ಘಜ್ನಿ ಮಹಮದ್ ಕಾಲದಿಂದಲೂ ದಾಳಿ ನಡೆದಿದೆ. ವಿಗ್ರಹ ಭಜನೆ, ದೇವಾಲಯಗಳ ನಾಶ, ಅಂದಿನಿಂದ ಇಂದಿನವರೆಗೂ ನಡೆಯುತ್ತಾ ಬಂದಿದ್ದರೂ ಹಿಂದುಗಳು ಶಾಂತಿಮಂತ್ರ ಜಪಿಸುತ್ತಾ ಸೆಕ್ಯುಲರ್ ಪಾಠ ಬೋಧಿಸುತ್ತಾ ಸಹಬಾಳ್ವೆಗೆ ಒತ್ತು ನೀಡುತ್ತಾ ಆದಷ್ಟೂ ಶಾಂತಿಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ತಾಳ್ಮೆ ತೋರುತ್ತಿರುವುದು ಹೇಡಿತನದ ಲಕ್ಷಣವಲ್ಲ ಎಂಬುದನ್ನು ಮುಸ್ಲಿಂ ಬಾಂಧವರು ಅರಿಯುವ ಕಾಲವೀಗ ಬಂದಿದೆ. ಹಿಂದೂಗಳಲ್ಲಿ ತಾವು ಮಂದಿರ ಕಟ್ಟುವುದು ಬೇಡವೆಂದು ವಾದಮಾಡುವ ಬುದ್ಧಿಜೀವಿಳಿದ್ದಾರೆ, ಬರಹಗಾರರಿದ್ದಾರೆ, ಮೇಲಾಗಿ ಅನೇಕ ಮಠಾಧೀಶರು ಸಹ ರಾಮನ ಮಂದಿರ ನಿರ್ಮಾಣದಿಂದ ಸಮಾಜದ ಶಾಂತಿ ಕದಡುವುದಾದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗೋಣವೆಂದು ಹೇಳುತ್ತಿರುವುದಷ್ಟೇ ಅಲ್ಲ ಸರ್ಕಾರದ ಮೇಲೂ ಒತ್ತಡ ಹೇರುತ್ತಿದ್ದಾರೆ. ಹಿಂದೂಗಳ ಮೇಲೆ ಹಿಂಸೆ ದೌರ್ಜನ್ಯಗಳು ನಡೆದಾಗ ಶಾಂತಿ ಸಹನೆಯಿಂದ ವರ್ತಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೆ ಮೌನವಹಿಸುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಇದರ ಅರ್ಥ ಇವರೆಲ್ಲ ಮುಸ್ಲಿಮರನ್ನು ಓಲೈಸುತ್ತಾರೆಂದಲ್ಲ. ದೇಶದಲ್ಲಿ ಪ್ರಕ್ಷುಬ್ದ ಮಾತಾವರಣ ಉಂಟಾಗಿ ಅಮಾಯಕರ ಕಗ್ಗೊಲೆಗಳು, ಆಸ್ತಿ-ಪಾಸ್ತಿಗಳಿಗೆ ಧಕ್ಕೆ ಉಂಟಾಗದಿರಲೆಂಬ ವಿವೇಚನೆಯೇ ಮೌನಕ್ಕೆ ಕಾರಣವಾಗಿದೆಯಷ್ಟೆ.

ನಮ್ಮಲ್ಲಿ ದೇವರೇ ಇಲ್ಲವೆಂದು ವಾದಿಸುವವರು, ದೇವಸ್ಥಾನ, ಮಠ, ಮಂದಿರಗಳಿಗೆ ಹೋಗದ ಲಕ್ಷಾಂತರ ಜನರಿದ್ದಾರೆ. ಬಸವಣ್ಣ, ಬುದ್ದರಂತಹ ವಿವೇಕಿಗಳು ದೇವಸ್ಥಾನ ಮಠ ಮಂದಿರಗಳನ್ನು ಟೀಕಿಸಿದ್ದಾರೆ. ದೇವರು ಹೊರಗೆಲ್ಲೂ ಇಲ್ಲಾ ನಮ್ಮೊಳಗೆಯೇ ಇದ್ದಾನೆಂದು ಸಾರಿದ್ದಾರೆ. ಸಹಸ್ರಾರು ಜಾತಿಗಳಿದ್ದರೂ ಹಿಂದೂಗಳು ಮೊದಲು ತಾವು ಭಾರತೀಯರು ಎಂಬುದನ್ನು ಮರೆತವರಲ್ಲ, ಧರ್ಮದ ಹೆಸರಿನಲ್ಲಿ ದೇಶವನಾಳುವ, ದೇಶಕ್ಕೆ ಕಿಚ್ಚು ಹಚ್ಚುವ ಜನರನ್ನು ಹೀನಾಯವಾಗಿ ಕಂಡು ಅಂತಹವರಿಗೆ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ಕಲಿಸುತಾರೆಂಬುದಕ್ಕೆ ಮೊನ್ನೆ ನಡೆದ ಚುನಾವಣೆಗಳೇ ಸಾಕ್ಷಿ. ನಮ್ಮಲ್ಲಿ ಮುಸ್ಲಿಮರನ್ನು, ಕ್ರೈಸ್ತರನ್ನೂ ಮೊದಲಿನಿಂದಲೂ ಸೋದರ ಭಾವದಿಂದ ಅನುಕಂಪದಿಂದ ನೋಡಲಾಗುತ್ತಿದೆ. ಇವರೆಲ್ಲಾ ಒಂದು ಕಾಲದಲ್ಲಿ ಹಿಂದೂಗಳೇ ಆಗಿದ್ದವರಲ್ಲವೆ ಎಂದವರ ಪರವಾಗಿ ಭಾವನಾತ್ಮಕವಾಗಿ ಸ್ಪಂದಿಸುವ ಸಹೃದಯಿಗಳಿದ್ದಾರೆ.

ಇಂತಹದ್ದೇ ಮನೋಭಾವ, ಪ್ರೀತಾದರ, ಸಹೋದರ ಭಾವ, ತ್ಯಾಗಶೀಲತೆ, ಪರಿಶುದ್ಧ ಆಲೋಚನೆ ಸೆಕ್ಯುಲರ್ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೂ ಅನ್ವಯಿಸುತ್ತದಲ್ಲವೆ. ಕಾಶ್ಮೀರದಲ್ಲಿ ದಿನನಿತ್ಯ ಹಿಂದೂಗಳ ಮಾರಣ ಹೋಮವಾಗುತ್ತಿದೆ. ಮುಸ್ಲಿಂ ಭಯೋತ್ಪಾದಕರಿಂದ ವಿಧ್ವಂಸಕ ಕೃತ್ಯಗಳು ಸಂಭವಿಸಲಿ, ಹಿಂದೂಗಳ ಸಹಸ್ರ ಸಹಸ್ರ ಹೆಣಗಳು ಬೀಳಲಿ, ಮನೆ ಮಠಗಳು ಮಣ್ಣುಗೂಡಲಿ, ಒಂದಿನಿತೂ ಬಾಯಿ ಬಿಡದ, ಪ್ರತಿಭಟಿಸುವ ಮಾನವೀಯತೆ ತೋರದ ಸೆಕ್ಯುಲರ್ ಹಿಂದೂ ವಾದಿಗಳಂತೆಯೇ ಮುಸ್ಲಿಮರೂ ವರ್ತಿಸುತ್ತಿರುವುದರಿಂದಲೇ ಈವತ್ತು ವಿ.ಹೆಚ್.ಪಿ.ಗಳು, ಭಜರಂಗ ದಳದಂತಹ ಉಗ್ರರು ಹೆಚ್ಚಿಕೊಳ್ಳಲು, ಜನತೆಯ ಅನುಕಂಪ, ಬೆಂಬಲ ವೃದ್ಧಿಸಿಕೊಳ್ಳಲು ಕಾರಣವಾಗಿದೆ. ಇದು ಅಪಾಯದ ಸೂಚನೆ.

ಮುಸ್ಲಿಮರಲ್ಲೂ ಮಹತ್ವದ ರಾಜಕಾರಣಿಗಳಿದ್ದಾರೆ. ದೇಶಭಕ್ತರು, ರಾಷ್ಟ್ರಮಟ್ಟದ ಕವಿ ಕಲಾವಿದರು, ಧರ್ಮಾಧಿಕಾರಿಗಳಾದ ಇಮಾಮರು, ಮೌಲ್ವಿಗಳು, ಮುಲ್ಲಾಗಳು, ಖಾಜಿಗಳು ಇದ್ದಾರೆ. ಆದರೇನು ಮುಸಲ್ಮಾನರ ಮೇಲೆ ಹಿಂಸೆಗಳಾದಾಗ ಮಾತ್ರವೇ ಬಯಲಿಗಿಳಿದು ಸುದ್ದಿ ಮಾಧ್ಯಮಗಳಲ್ಲಿ ಪೋಜ್ ಕೊಡುತ್ತಾರೆ. ‘ದೇಶದ ತುಂಬಾ ಮಸೀದಿಗಳಿವೆ. ಅನೇಕ ಮಸೀದಿಗಳು ಹಾಳಾಗಿ ಬಿದ್ದಿವೆ. ಅವೇ ಸಾಕು. ಅಯೋಧ್ಯೆಯಲ್ಲಿನ ಮಸೀದಿ ನಮಗೆ ಬೇಡ. ಅಲ್ಲಿ ಮಂದಿರ ನಿರ್ಮಾಣವೂ ಬೇಡ. ಧರ್ಮಾಸ್ಪತ್ರೆ, ವಿದ್ಯಾಶಾಲೆಗಳ ನಿರ್ಮಾಣವಾಗಲಿ ಎಂದು ಯಾರಾದರೊಬ್ಬರು ಪ್ರಾಂಜಲ ಮನಸ್ಸಿನಿಂದ ಹೇಳುವುದಾಗಿ ಪತ್ರಿಕಾ ಹೇಳಿಕೆ ನೀಡಿ ಜನಾದರಣೆಗಳಿಸುವ ಯತ್ನ ಮಾಡಿದಾಗಲಿ ಈವರೆಗೆ ಕಾಣಲಿಲ್ಲ! ಇಂತಹ ಮಾತುಗಳು ಮುಸ್ಲಿಮರಿಂದ ಬರಲಿ, ಗಲಭೆ, ಗದ್ದಲ, ಸಾವು ನೋವುಗಳು ತಾವಾಗಿ ಬೇಸತ್ತು ಹೋಗುತ್ತವೆ. ಶಬನಾ ಅಜ್ಮಿ, ದಿಲೀಪ್‌ಕುಮಾರ್‌ರಂತಹ ಬುದ್ಧಿಮಾನ್‌ಗಳು ದಿಲ್ಲಿ ಇಮಾಮ್‌ಗಳು ವಿವೇಚಿಸಿ ಇ೦ತಹ ತೀರ್ಮಾನಕ್ಕೆ ಬರಬಾರದೇಕೆ? ಆಗ ಮಂದಿರ ಕಟ್ಟಲೇಬೇಕೆಂಬ ಹಠವಾದಿ ಹಿಂದೂಗಳೂ ಅಲ್ಪಸಂಖ್ಯಾತರಾಗಿಬಿಡುತ್ತಾರೆ. ಅವರು ಯಾವುದೇ ಪಕ್ಷ, ಪಂಗಡ, ಜಾತಿ, ಮಠಾಧಿಪತಿಗಳಾಗಿರಲಿ ಅಂತಹ ಸಿನಿಕರನ್ನು ನಿಜವಾದ ಹಿಂದುಗಳು ಬೆಂಬಲಿಸುವಂತಹ ಮತಾಂಧರಲ್ಲ. ದಯೆಯೇ ಧರ್ಮದ ಮೂಲವಯ್ಯಾ, ಅಹಿಂಸಾ ಪರಮೋ ಧರ್ಮ ಎಂದು ನಂಬಿದ ಪುಣ್ಯ ಜೀವಿಗಳು ಹುಟ್ಟಿದ ನೆಲ ಇದು. ಇಂತಹ ತತ್ವವನ್ನು ನಂಬಿದ ಜಾತ್ಯಾತೀತ ಜಾಣರೂ ನಮ್ಮಲ್ಲಿ ಬಹು ಸಂಖ್ಯಾತರಿದ್ದಾರೆ.

ಇದೀಗ ಮುಸಲ್ಮಾನ್ ಬುದ್ಧಿಜೀವಿಗಳು, ಲೇಖಕರು, ಕವಿಗಳು ಮೌನ ಮುರಿಯುವ ಔದಾರ್ಯ ತೋರಬೇಕಿದೆ. ತ್ಯಾಗಕ್ಕೆ ಸಿದ್ದರಾಗಬೇಕಿದೆ. ನಾವೆಲ್ಲ ಒಂದೇ ಎಂಬ ನಂಬಿಕೆ ಉಂಟು ಮಾಡಬೇಕಿದೆ. ಮೌನ ಎಲ್ಲಾ ಕಾಲಕ್ಕೂ ಬಂಗಾರವಾಗದಲ್ಲವೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...