Home / ಕವನ / ಕವಿತೆ / ಏನೋ ಬೇಡ್ತಾದ ಜೀವಾ

ಏನೋ ಬೇಡ್ತಾದ ಜೀವಾ

ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ
ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ ||

ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ
ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ
ಗಟ್ಟಿ ಮುಟ್ಟಾ ಗೂಳ್ಯಂಗೈತೆ ಸ್ವತಂತ್ರೈತೆ ಗಾಳ್ಯಂಗೈತೆ
ನಕ್ಕೂ ನಕ್ಕೂ ಅರಳತೈತೆ ಅತ್ತು ಅತ್ತು ಮಂಚಗೊಂತೈತೆ || ಏನೋ ||

ಓದಾಕೈತೆ ತಿಳಕೊಂದೈತೆ ವಾದಕ್ಕೈತೆ ಬೋಧಕೈತೆ
ಬಂಧು ಬಳ ಎಲ್ಲಾ ಐತೆ ಒಳ್ಳೆಕೆಟ್ಟ ಗೆಳೆತಾನೈತೆ
ಚೆಂದ ಚೆಲ್ಲಿ ಹರವ್ಯಾಡೈತೆ ಅಂದದ ಗಾನಾ ಹರದಾಡೈತೆ |
ಆಡಾಕ್ ನೂರಾರಾಟಾ ಐತೆ ಓಡಾಕ ಬಟ್ಟಂಬಯಲೇ ಐತೆ ||  ಏನೋ ||

ಇಳಿಯಾಕ್ ಸಾಗರದಾಳಾ ಐತೆ ಏರಾಕಾಕಾಶ್ ತೆರೆದೇ ಐತೆ
ಓಕುಳಿಯಾಡೋ ಬಣ್ಣಾ ಐತೆ ಬಣ್ಣಾ ಬಣ್ಣದ ಬಟ್ಟೆ ಐತೆ
ಕಣ್ಣು ಮಿಟುಕಿ ಕರಿತೈತೆ ಹೂವು ಬಣ್ಣಾ ಉಕ್ಕಿ ಕರಿತೈತೆ ಹಣ್ಣು
ತುಂಬಿದ ಮೈಯಿ ತುಳಿಕ್ಕಾಡೈತೆ ಎಳ್ಡೂ ಸೇರಿ ಟಳಕಾಡೈತೆ || ಏನೋ ||

ಮ್ಯಾಲೆ ಕುಂದ್ರೋ ಗದ್ಗೀ ಐತೆ ಆಳೋ ಗೀಳೋ ದಂಡ ಐತೆ
ಸೇವಾ ಮಾಡೋ ಕೈಕಾಲೈತೆ ಬೇಡಿದ್ದೆಲ್ಲಾ ಬಗಲಾಗೈತೆ
ಲೆಕ್ಕಾ ಇಲ್ದಂಗೆ ಚಿಕ್ಕೀ ಐತೆ ಚಂದ್ರಾ ಸೂರ್ಯ ಕಣ್ಣಿಡತೈತೆ
ಎಲ್ಲಕ್ಹಾಸ್ಗಿ ಭೂಮಿ ಐತೆ ನಂದೂ ಅಂಬೋ ಸೀಮಿ ಐತೆ

ಸತ್ರೂ ಕೂಡಾ ಏನೋ ಐತೆ ಮತ್ತೆ ಮತ್ತೆ ಜನುಮ ಐತೆ
ಬೇಕಾದಷ್ಟು ದೇವ್ರು ಐತೆ ನಡೆಯಾಕೆಷ್ಟೊ ಧರ್ಮಾ ಐತೆ || ಏನೋ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...