Home / ಲೇಖನ / ವಿಜ್ಞಾನ / ಭೂಕಂಪನಕ್ಕೆ ಮುನ್ನೆಚ್ಚರಿಕೆ

ಭೂಕಂಪನಕ್ಕೆ ಮುನ್ನೆಚ್ಚರಿಕೆ

‘ಭೂಕಂಪ’ ಬಂದರೆ ಜಗತ್ತಿನ ಜನರು ಭಯಭೀತರಾಗುತ್ತಾರೆ. ಏಕೆಂದರೆ ಸಾವು, ನೋವು, ಆಕ್ರಂದನ, ಆಸ್ತಿ ಪಾಸ್ತಿ ಹಾನಿ, ಹೀಗೆ ಗೋಳಿನ ಕಥೆ ಮುಂದುವರಿಯುತ್ತದೆ. ಭೂಮಿ ನಡುಗಿ ಇತ್ತೀಚೆಗೆ ಗುಜರಾತ ಜನರನ್ನು ತಲ್ಲಣಗೊಳಿಸಿ ಸಾವು ನೋವನ್ನುಂಟು ಮಾಡಿದ ನೆನಪು ಮರೆಯಾಗಿಲ್ಲ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಈ ಭಯಾನಕ ಕಂಪನಗಳು ಆಗಾಗ ಆಗುತ್ತಲೇ ಇರುತ್ತವೆ.

ಇಂಥಹ ಭೀಕರವಾದ ಭೂಕಂಪ ಸಂಭವಿಸಬಹುದೆಂದು ಗೊತ್ತಾದರೆ ಸುರಕ್ಷಿತವಾಗಿರಬಹುದು. ಇದು ಜನಗಳ ಆಂತರ್ಯದ ಧ್ವನಿಯಾಗಿದೆ. ಇದುವರೆಗೂ ನಿಖರವಾಗಿ ಭೂಕಂಪದ ಸುಳಿವನ್ನು ಕೊಟ್ಟಿರುವದಿಲ್ಲ ಅದರೆ ಜಪಾನಿನ ಸಂರೋಧಕರು ಮುನ್ನಚ್ಚರಿಕೆ ಕೊಡಬಹುದೆನ್ನುತ್ತಾರೆ. ಎಚ್ಚರಿಕೆ ನೀಡುವುದು ಶಬ್ದ ಹೊರಹೊಮ್ಮುವ ಮೂಲಕವಲ್ಲ
ನೀಲಿಗೆಂಪು ಬೆಳಕಿನ ಮಿಂಚನ್ನು ಹರಿಸುವ ಮೂಲಕ, ಎಂದು ಹೇಳುತ್ತಾರೆ. ಇದೀಗ ಜಪಾನಿನ ಕೂಬೆಯ ಭೂಕಂಪ ಇದನ್ನು ದೃಢಪಡಿಸಿದೆ. ಕೂಬೆಯ ಭೂಕಂಪದ ಮೊದಲು (ಹತ್ತಾರು ನಿಮಿಷಗಳ ಮೊದಲು) ನೀಲಿ ಮತ್ತು ಕೆಂಪು ಬೆಳಕು ಕಾಣಿಸಿಕೊಂಡಿತೆಂದು ಜನರ ವರದಿ. ಆ ಬಗೆಯ ಬೆಳಕು ಒತ್ತಡಕ್ಕೊಳಗಾದಾಗ ಮರಳಿನ ಕಲ್ಲುಗಳಿಂದ ಉದ್ಭವಾಗುತ್ತದೆಂದು ಜಪಾನಿನ ಸಂಶೋಧಕ ಕಲಾಗಚೆಯವರು ಅಭಿಪ್ರಾಯಪಡುತ್ತಾರೆ.

ಭೂಕಂಪನ ಪ್ರದೇಶದಲ್ಲಿ ಕಲ್ಲು ಒತ್ತಡದಿಂದಾಗಿ ಪುಡಿಯಾಗುವುದಕ್ಕೆ ಮೊದಲು ಮಿಂಚು ಬೆಳಕು ಹುಟ್ಟಿ 100 ಮಿಲಿ ಸೆಕೆಂಡುಗಳವರೆಗೆ ಮುಂದುವರೆಯುವುದು. ಸಿಲಿಕಾ(ಮರಳಿನ ಕಣ) ದಿಂದ ಬಂಡೆಗಳನ್ನೂ ಅದುಮಿ ಒತ್ತಡ ಹೇರಿದಾಗ ಆ ಬಗೆಯ ಮಿಂಚಿನ ಬೆಳಕು ಹೊರಬರುವುದೆಂದು ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಪ್ಪಯೋಗಗಳು ಮುಂದುವರೆದಿವೆ.
******

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...