Home / ಕವನ / ಕವಿತೆ / ನಿರೀಕ್ಷೆಯ ಮಮ್ಮಿಗಳು

ನಿರೀಕ್ಷೆಯ ಮಮ್ಮಿಗಳು

ಗ್ಲಾಸಿನ ಪೆಟ್ಟಿಗೆಯೊಳಗೆ ಮೈ ತುಂಬಾ
ಬ್ಯಾಂಡೇಜ್ ಮಾಡಿಕೊಂಡು ಬಿದ್ದಿರೋ ನೂರಾರು
ಇಜಿಪ್ಶಿಯನ್ ಮಮ್ಮಿಗಳು (British Museum London)
ಮ್ಯೂಸಿಯಂದೊಳಗಿಂದ ಹೊರಬೀಳಲು
Q ಹಚ್ಚಿವೆಯೆಂದು ನನ್ನೊಂದಿಗೆ ಉಸುರಿದವು.
ಕೆಲವೊಂದು ವೃದ್ಧ ಮಮ್ಮಿಗಳು
ಅದೆಲ್ಲಿ ತೊಂದರೆ
ಹೊರಗಡೆ ಚಳಿ – ಹಿಮ ತರಾತುರಿ ಜೀವನ
ಇದೆಲ್ಲ ನಮಗೆ ಒಗ್ಗದು: ಇಲ್ಲಿಯೇ ನಮಗೆ ಬೆಚ್ಚಗಿದೆ
ನಿಮ್ಮಂಥವರ ಟಿಕೆಟ್ ಹಣದಿಂದ
ಬೆಚ್ಚಗೆ ಚಾ ಕುಡಿದು ನಿಮ್ಮೊಂದಿಗೆ ನಮ್ಮ
ಅಷ್ಟಷ್ಟು ಪರಿಚಯ ತೋರಿಸಿ ಹೀಗೇ
ಇನ್ನೂ ನೂರಾರು ವರ್ಷ ಕಳೆಯುತ್ತ ಹೋಗುತ್ತೇವೆ
ಎಂದು ನಗುತ್ತವೆ.
Mrs. Guttiನೋಡಿ ನಾವು ಯಾವತ್ತೂ
ನಮ್ಮ ಅಜ್ಜ- ಮುತ್ತಜ್ಜ- ಅಜ್ಜಿಯರೊಂದಿಗೆ
ಇಲ್ಲೇ ಇರುತ್ತೇವೆ
ಮಲಗಿರುವ ಚಿಕ್ಕ ಮಮ್ಮಿಗಳು
ಹೇಳುತ್ತಲೇ ಇದ್ದಂತೆ –
ಎರಡು ವರ್ಷದ ಬ್ಯಾಂಡೇಜ್ ಬೇಬಿಯೊಂದು
ಆಂಟಿ ನಿಮಗೆ ಅಜ್ಜ ಅಜ್ಜಿ ಬಿಟ್ಟಿರಲಿಕ್ಕೆ
ಬೇಜಾರಾಗೋದಿಲ್ಲವೆ? ಎಂದು ಕೇಳಿ
ನನ್ನ ಭಾವನೆಗಳಿಗೆ ಲಗ್ಗೆ ಹಾಕಿತು.
ಅರಿಯದೇ ನನ್ನ ಕಣ್ಣಂಚಿನಲ್ಲಿ ನೀರು ಬಂದಾಗ
ಬ್ಯಾಂಡೇಜ್ ಬೇಬಿಯ ಮೇಲೆ ಕೈಯಾಡಿಸಿ
ನಿನ್ನಂತೆಯೇ ನನಗೂ ಅಜ್ಜಾ- ಅಜ್ಜಿ ಬೇಕು
ಎಂದು ಮುಂದೆ ಸರಿಯುತ್ತಿದ್ದಂತೆಯೇ –
ಡಬಲ್ ಟ್ರಿಬಲ್ ಬ್ಯಾಂಡೇಜಿನ
ಗೂಂಡಾ ಮಮ್ಮಿ ಎದುರಾಯ್ತು
ಅದೇನೋ ನಿಮ್ಮಕಡೆಗೆ ಜೀವ ಹೋದರೆ
ಬೇಗ ಮಣ್ಣಿಗೋ – ಬೆಂಕಿಗೋ ಕೊಟ್ಟುಬಿಡ್ತಾರಂತೆ
ಹೌದಾ ?
ನಾವು ನೋಡಿ ನಮ್ಮ ಪರಿಚಯದ
ತಲೆ ಪಟ್ಟಿಕಟ್ಟಿಕೊಂಡು ದಿನಾಲೂ
ಸಾವಿರಾರು ಜನರನ್ನು ಮಾತಾಡಿಸ್ತೀವಿ
ನಾವು ಜೀವಂತ ಇಜಿಪ್ತದ ಪರೋಹಗಳು
ಆದರೆ ನೀವು …?
ನನ್ನ ಕೆಣಕಲೆತ್ನಿಸಿದಾಗ ತಪ್ಪಿಸಿಕೊಂಡು
ಮುಂದೆ ಹೋದೆ.
ಆದರೆ ಆಶಾವಾದಿ ಬತೇಹನ್‌ ವಿಜ್ಞಾನ
ಯುಗದ ಭವಿಷ್ಯತೆಯಲ್ಲಿ ಮೈಮರೆತಿದ್ದ.
ಅವನಿಗೆ ತೊಂದರೆಯಾಗದಂತೆ ಪರಿಚಯಿಸಿಕೊಳ್ಳಲು
(ತಲೆಪಟ್ಟಿ ಆಥವಾ ಪರಿಚಯ ಪತ್ರ)
ನಾ ಹತ್ತಿರ ನಿಂತಿದ್ದೆ.
ವಿಜ್ಞಾನಿಗಳೇನಾದರೂ ನಮ್ಮಲ್ಲಿ ಇಂದಿಲ್ಲಿ ನಾಳೆಯಾದರೂ
ಜೀವ ತುಂಬಿದರೆ,
ನಾವೂ ನಿಮ್ಮ ತಲೆಪಟ್ಟಿ ಆಥವಾ
ಸಮಾಧಿ ನೋಡಲು ಬರುತ್ತೇವೆ.
ಈವರೆಗೆ ನೀವು, ನಿಮ್ಮ ಅಜ್ಜಂದಿರೆಲ್ಲ
ನಮ್ಮನ್ನು ನೋಡಿ ಮಾತಾಡಿಸಿ
ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಧನ್ಯವಾದಗಳು.
ಎಂದು ನನ್ನ ಕಿವಿಯಲ್ಲಿ
ಬತೇಹನ್ ಎಚ್ಚರಗೊಂಡು ಉಸುರಿದಾಗ
ನಾನು ಹೆದರಿ ಬೆವೆತು ಕಂಗಾಲಾಗಿ ಕಂಪಿಸಿ
You are most welcome my friend
ಎಂದು ಹೇಳಿ ಚಕ್ಕನೆ ಹಿಂದೆ ಸರಿದೆ.

(British Museum ದೊಳಗೆ ನೂರಾರು ಮಮ್ಮಿಗಳು ಬಿದ್ದುಕೊಂಡಿವೆ. ಅವುಗಳಿಗೆ ಆಕಸ್ಮಿಕ ಜೀವ ಬಂದರೆ (ಈ ವಿಜ್ಞಾನ ಯುಗದಲ್ಲಿ) ಹೇಗಿರಬಹುದು ವಾತಾವರಣ ಅನಿಸಿತು.  ಆ ಅನಿಸಿಕೆಯೇ ಈ ಒಂದು ಕವನ)
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...