Home / ಲೇಖನ / ವಿಜ್ಞಾನ / ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಚಿತ್ರ: ಮಥಿಯಸ್ ವೇವರಿಂಗ್
ಚಿತ್ರ: ಮಥಿಯಸ್ ವೇವರಿಂಗ್

ಐತಿಹಾಸಿಕ ಕಾಲದಿಂದ ಹಿಡಿದು ಇಂದಿನವರೆಗೂ ಸೋಲಿನ ಕಹಿಯನ್ನು ಅನುಭವಿಸಿದ ಆಥವಾ ದೂರದಿಂದ ಕಂಡು ಪಲಾಯನ ಗೈಯ್ಯುವ ಸೈನಿಕರು ಸರ್ವೇ ಸಾಮಾನ್ಯ. ಆದರೆ ಸೋಲನ್ನೇ ಆರಿಯದ ಸೈನಿಕರು ಕೆಲವೇ ವರ್ಷಗಳಲ್ಲಿ ರಣರಂಗಕ್ಕೆ ಧುಮುಕಲಿದ್ದಾರೆ ಎಂದರೆ ಆಶ್ಚರ್ಯ ಮತ್ತು ಸಂತೋಷದ ಸಂಗತಿಯೇ. ಮಾನವ ಸಹಜವಾದ ಸೋಲು ಗೆಲುವು ಭೂಮಿಯಲ್ಲಿ ಇದ್ದದ್ದೆ ಆದರೆ ಮಾನವರೇ ಅಲ್ಲದೆ ಮಾನವರಂತೆ ಯುದ್ಧ ವೈಖರಿಯಲ್ಲಿ ತೊಡಗುವ ಸೋಲನ್ನು ಅರಿಯದ ಸೈನಿಕರು ಸಿಕ್ಕುವುದೆಂದರೆ ಮನುಷ್ಯರಲ್ಲದೆ ರಾಕ್ಷಸರೆ!? ರಾಕ್ಷಸಿ ಶಕ್ತಿಯುಳ್ಳ ಮನುಷ್ಯರಲ್ಲದ ರೋಬಟ್ ಸೈನಿಕರಿಂದಲೇ ಈ ಸಾಧನೆ ನಿಜ, ಮಾನವ ಶಕ್ತಿಯ ಹತ್ತಾರುಪಟ್ಟು ಹೆಚ್ಚಿನ ಶಕ್ತಿಯನ್ನು ಹೊಂದಿದ ರೋಬಟ್ ಮಾನವರು ಈಗಾಗಲೇ ಫ್ಯಾಕ್ಟರಿಗಳಲ್ಲಿ ವಿದೇಶಿ ಅಡುಗೆ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಲಿವೆ. ಹತ್ತು ಜನ ಮಾಡುವ ಕೆಲಸವನ್ನು ಒಬ್ಬ ರೋಬಟ್ ಮನುಷ್ಯ ಕೆಲವೇ ಘಂಟೆಗಳಲ್ಲಿ ಮಾಡುವುದಾದರೆ ೧೦ ಜನ ಸೈನಿಕರಿಗೆ ತರಬೇತಿ ನೀಡಿ ಅವರ ಸಂಬಳ ಸಾರಿಗೆ, ಇತರೆ ಖರ್ಚುಗಳನ್ನೆಲ್ಲ ನಿಭಾಯಿಸುವುದಕ್ಕಿಂತಲೂ ಒಬ್ಬ ರೋಬನನ್ನು ಯುದ್ಧಕ್ಕೆ ತೊಡಗಿಸಿದರೆ ಎದುರಿಗಿದ್ದ ಮನುಷ್ಯ ಸೈನಿಕರಾಗಲಿ, ಮದ್ದು ಗುಂಡುಗಳಾಗಲಿ ಎಲ್ಲವೂ ಸಪಾಟ್ ಆಗುತ್ತದೆ!!

ಅಮೇರಿದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾದ ಜೆಟ್ ಪ್ರೊಪುಲಶನ್ ಪ್ರಯೋಗಾಲಯ ಇದಕ್ಕಾಗಿ ಅಭಿವೃದ್ದಿ ಪಡಿಸಿದ ಯಂತ್ರಜ್ಞಾನವನ್ನು
ಬೆಳೆಸಿಕೊಂಡಿದೆ. ಮನೆಗೆಲಸಕ್ಕಾಗಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತೆ ಯುದ್ಧದಲ್ಲಿಯೂ ಕೂಡ ಕೈಯಲ್ಲಿ ಪಿಸ್ತೂಲು, ರೈಫಲ್‌ಗಳ ಗುಂಡಿ ಅದುಮುವ, ಮುಂದೆ ಮುಂದೆ ನುಗ್ಗುವ, ಗಂಡು ಖಾಲಿಯಾದಾಗ ತುಂಬುವ, ಮತ್ತು ಗುರಿ ಇಟ್ಟು ಶತೃಸೈನ್ಯವನ್ನು ನಾಶಪಡಿಸುವ ಯಾಂತ್ರೀಕೃತ ಯಂತ್ರಗಳನ್ನಳವಡಿಸಿದ ರೋಬಟ್‌ಗಳನ್ನು ಸಿದ್ಧಗೊಳಿಸುತ್ತಿದೆ. ರೋಬಟ್ ಸೈನಿಕರು ಭಾರವಿರದೆ ಹಗುರವಾಗಿದ್ದು ಸುಲಭವಾಗಿ ಚಲಿಸುತ್ತವೆಯಂತೆ
ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...