Home / ಲೇಖನ / ವಿಜ್ಞಾನ / ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಚಿತ್ರ: ಮಥಿಯಸ್ ವೇವರಿಂಗ್
ಚಿತ್ರ: ಮಥಿಯಸ್ ವೇವರಿಂಗ್

ಐತಿಹಾಸಿಕ ಕಾಲದಿಂದ ಹಿಡಿದು ಇಂದಿನವರೆಗೂ ಸೋಲಿನ ಕಹಿಯನ್ನು ಅನುಭವಿಸಿದ ಆಥವಾ ದೂರದಿಂದ ಕಂಡು ಪಲಾಯನ ಗೈಯ್ಯುವ ಸೈನಿಕರು ಸರ್ವೇ ಸಾಮಾನ್ಯ. ಆದರೆ ಸೋಲನ್ನೇ ಆರಿಯದ ಸೈನಿಕರು ಕೆಲವೇ ವರ್ಷಗಳಲ್ಲಿ ರಣರಂಗಕ್ಕೆ ಧುಮುಕಲಿದ್ದಾರೆ ಎಂದರೆ ಆಶ್ಚರ್ಯ ಮತ್ತು ಸಂತೋಷದ ಸಂಗತಿಯೇ. ಮಾನವ ಸಹಜವಾದ ಸೋಲು ಗೆಲುವು ಭೂಮಿಯಲ್ಲಿ ಇದ್ದದ್ದೆ ಆದರೆ ಮಾನವರೇ ಅಲ್ಲದೆ ಮಾನವರಂತೆ ಯುದ್ಧ ವೈಖರಿಯಲ್ಲಿ ತೊಡಗುವ ಸೋಲನ್ನು ಅರಿಯದ ಸೈನಿಕರು ಸಿಕ್ಕುವುದೆಂದರೆ ಮನುಷ್ಯರಲ್ಲದೆ ರಾಕ್ಷಸರೆ!? ರಾಕ್ಷಸಿ ಶಕ್ತಿಯುಳ್ಳ ಮನುಷ್ಯರಲ್ಲದ ರೋಬಟ್ ಸೈನಿಕರಿಂದಲೇ ಈ ಸಾಧನೆ ನಿಜ, ಮಾನವ ಶಕ್ತಿಯ ಹತ್ತಾರುಪಟ್ಟು ಹೆಚ್ಚಿನ ಶಕ್ತಿಯನ್ನು ಹೊಂದಿದ ರೋಬಟ್ ಮಾನವರು ಈಗಾಗಲೇ ಫ್ಯಾಕ್ಟರಿಗಳಲ್ಲಿ ವಿದೇಶಿ ಅಡುಗೆ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಲಿವೆ. ಹತ್ತು ಜನ ಮಾಡುವ ಕೆಲಸವನ್ನು ಒಬ್ಬ ರೋಬಟ್ ಮನುಷ್ಯ ಕೆಲವೇ ಘಂಟೆಗಳಲ್ಲಿ ಮಾಡುವುದಾದರೆ ೧೦ ಜನ ಸೈನಿಕರಿಗೆ ತರಬೇತಿ ನೀಡಿ ಅವರ ಸಂಬಳ ಸಾರಿಗೆ, ಇತರೆ ಖರ್ಚುಗಳನ್ನೆಲ್ಲ ನಿಭಾಯಿಸುವುದಕ್ಕಿಂತಲೂ ಒಬ್ಬ ರೋಬನನ್ನು ಯುದ್ಧಕ್ಕೆ ತೊಡಗಿಸಿದರೆ ಎದುರಿಗಿದ್ದ ಮನುಷ್ಯ ಸೈನಿಕರಾಗಲಿ, ಮದ್ದು ಗುಂಡುಗಳಾಗಲಿ ಎಲ್ಲವೂ ಸಪಾಟ್ ಆಗುತ್ತದೆ!!

ಅಮೇರಿದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾದ ಜೆಟ್ ಪ್ರೊಪುಲಶನ್ ಪ್ರಯೋಗಾಲಯ ಇದಕ್ಕಾಗಿ ಅಭಿವೃದ್ದಿ ಪಡಿಸಿದ ಯಂತ್ರಜ್ಞಾನವನ್ನು
ಬೆಳೆಸಿಕೊಂಡಿದೆ. ಮನೆಗೆಲಸಕ್ಕಾಗಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತೆ ಯುದ್ಧದಲ್ಲಿಯೂ ಕೂಡ ಕೈಯಲ್ಲಿ ಪಿಸ್ತೂಲು, ರೈಫಲ್‌ಗಳ ಗುಂಡಿ ಅದುಮುವ, ಮುಂದೆ ಮುಂದೆ ನುಗ್ಗುವ, ಗಂಡು ಖಾಲಿಯಾದಾಗ ತುಂಬುವ, ಮತ್ತು ಗುರಿ ಇಟ್ಟು ಶತೃಸೈನ್ಯವನ್ನು ನಾಶಪಡಿಸುವ ಯಾಂತ್ರೀಕೃತ ಯಂತ್ರಗಳನ್ನಳವಡಿಸಿದ ರೋಬಟ್‌ಗಳನ್ನು ಸಿದ್ಧಗೊಳಿಸುತ್ತಿದೆ. ರೋಬಟ್ ಸೈನಿಕರು ಭಾರವಿರದೆ ಹಗುರವಾಗಿದ್ದು ಸುಲಭವಾಗಿ ಚಲಿಸುತ್ತವೆಯಂತೆ
ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...