Home / ಕವನ / ಕವಿತೆ / ಕೆಂಪು ದೀಪದ ಕೆಳಗೆ

ಕೆಂಪು ದೀಪದ ಕೆಳಗೆ

ಹಾಡು ೧ : ಯಾರು ಹಚ್ಚಿದರಣ್ಣ
ಕೆಂಪಾನೆ ದೀಪಾವ
ಯಾರು ಮಾಡಿದರಣ್ಣ
ಬಾಳನ್ನು ರಕ್ತಾವ ||

ನಗುವ ಹೂಗಳನೆಲ್ಲ
ಕಾಲಲ್ಲಿ ತುಳಿದು
ಸುಂದರ ಕನಸುಗಳ
ಬೆಂಕೀಗೆ ಸುರಿದು ||

ಮೆರೆಯುವ ಜನರ
ಗಮ್ಮತ್ತು ಕಾಣಿರಿ
ಬಲಿಯಾದ ಹೆಣ್ಣೀನ
ಬದುಕನ್ನು ನೋಡಿರಿ ||

ಹಾಡು ೨ : ಯಾರು ಹೇಳಿದಯ್ಯಾ
ಇದೆನೆಲ್ಲ ಮಾಡೆಂದು ||

ನಿನ್ನೆಂಡತಿ ಮನೆಯಲ್ಲಿ
ಪತಿಯ ಕನವರಿಕೆಯಲಿ
ನೀನೊ ಇಲ್ಲಿ ಅಬ್ಬಬ್ಬಾ
ಪರ ಹೆಣ್ಣ ತೆಕ್ಕೆಯಲಿ ||

ಏಕೆ ಇಂಥ ದಾಹ
ಕಡಿಮೆಯಾದರೂ ಏನು
ಹೆಂಡತಿ ಬಾಳಿಸದೆ ನೀನು
ಇವೆಲ್ಲಾ ಸರಿಯೇನು ||

ಪರಹೆಣ್ಣ ಕೂಡುವಾಗ
ನೆನಪಿರಲಿ ನಿನ್ನ ಮಗಳೂ
ಇಂಥ ಸ್ಥಿತಿಗೆ ಅವಳನ್ನು
ತಂದವನು ನೀನಲ್ಲವೇನು ||

ಹಾಡು ೩ : ದುಡ್ಡು ಕೊಟ್ಟು ಹೆಣ್ಣನ್ನು
ಮಜಾ ಮಾಡೊ ಅಣ್ಣರಿರಾ
ನಿಮಗೇಕೆ ಸೆಂಟಿಮೆಂಟು
ಮನಸೆಲ್ಲಾ ಕಾಂಕ್ರೀಟು ||

ಒಂದು ಹೆಣ್ಣು ಸಾಲದಲ್ಲ
ಎಷ್ಟಾದರೂ ಪರವಾಗಿಲ್ಲ
ಬೇಕು ಕೈ ಕಾಲಿಗೆಲ್ಲ
ಕೈಲಾಗದಿದ್ರು ಪರವಾಗಿಲ್ಲ ||

ಮನೆ ಬೀದಿ ಊರಲೆಲ್ಲ
ಮರ್ಯಾದೆಸ್ಥರು ಬರೇ
ಊರ ಹೊರಗೆ ಬಂದರಂದ್ರೆ
ಕಚ್ಚೆ ಕಿತ್ತು ಎಸೆದರಲ್ಲಾ ||

ಹಾಡು ೪ : ತಪ್ಪು ಯಾರದು ಇಲ್ಲಿ
ಹೇಳಣ್ಣ ಹೇಳೊ
ಒಪ್ಪಿತವೆಲ್ಲವು ಹಣಕೆ
ಕೇಳಣ್ಣ ಕೇಳೊ ||

ಹಿಡಿಗೂಳಿಗಾಗಿ ಬೆತ್ತಲಾಗರು
ಮುಡಿ ಹೂವಾಗಿ ಅರಳುವರು
ಬಡತನವೊಂದೆ ಮೂಲವಲ್ಲ
ನಾನಾ ತರದ ಸಿಕ್ಕುಗಳಲ್ಲ ||

ಆಹಾ ಜಾರಿಸಿ ನಲಿದರು
ಅಯ್ಯೊ ಜಾರಿ ನರಳಿದರು
ಜಾರಲೆಂದು ಬಂದವರಿಗೆ
ಜಾರುಗುಪ್ಪೆಗಳ್ಯಾರಣ್ಣ ||

ಹಾಡು ೫ : ಹೆಣ್ಣ ಬಯಸಿ ಹೋಗಿ
ನಲಿಯುವ ಅಣ್ಣರಿರಾ
ಒಮ್ಮೆ ಚಿಂತನೆ ಮಾಡಿ
ಬೇಕೆ ನಿಮಗೀ ಮೋಡಿ ||

ತಾಯಿ ತಂಗಿ ಅಕ್ಕ ಅಮ್ಮ
ಈ ಪದಗಳ ಅರ್ಥವೇನು
ಹೇಳಿರಣ್ಣಾ ಹೇಳಿರೊ
ಇದೆಲ್ಲ ನಿಜದ ಬದುಕೇನು ||

ಹಣದ ಎಣಿಕೆಯಲ್ಲಿ
ಸೆರಗ ಸರಿಸಿ ನಲಿಯೋರೆ
ನಿಮ್ಮದೆಂಥ ಬಾಳು
ನೋಡಿ ಹೆಣ್ಣಿನ ಗೋಳು ||

ಹಾಡು ೬ : ಎಂದಿಗೆ ಕೊನೆಯಣ್ಣ
ಬಟ್ಟೆ ಸುಲಿಗೆಗೆ ಅಣ್ಣಾ ||

ಹೆಣ್ಣಿಂದ ಹುಟ್ಟಿ ನೀನು
ಮುಟ್ಟುವೆ ಏನನ್ನ
ಮುಚ್ಚಿ ಇಂಥ ಬಾಳನ್ನ
ಗಳಿಸಿದೆ ಏನನ್ನ ||

ಮಗಳು ತಾಯಿ ತಂಗಿ
ಹೆಂಡತಿ ಎಂದರೇನರ್ಥ
ಬಾಳಿಸದೆ ಹೆಣ್ಣ ಬಾಳು
ಆಯಿತಲ್ಲ ವ್ಯರ್ಥ ||

*****

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...