Home / ಬಾಲ ಚಿಲುಮೆ / ಕಥೆ / ಹುಲಿಯಾಗಿದ್ದ ಕತ್ತೆಯ ಕಥೆ

ಹುಲಿಯಾಗಿದ್ದ ಕತ್ತೆಯ ಕಥೆ

ಒಂದಾನೊಂದು ಊರಿನಲ್ಲಿ ಶುದ್ಧ ಪಟನೆಂಬ ಅಗಸನು ಇದ್ದನು. ಅವನಿಗೆ ಒಂದು ಕತ್ತೆಯಿತ್ತು. ಅದು ಹೊಟ್ಟೆಗಿಲ್ಲದೆ ಬಹಳ ಇಳಿದುಹೋಗಿ ನಿಶ್ಶಕ್ತಿಯಾಗಿತ್ತು. ಆ ಅಗಸನು ಒ೦ದು ದಿನ ಎಲ್ಲಿಯೋ ಹೋಗಿ ಬರುತ್ತಿದ್ದಾಗ ಕಾಡಿನಲ್ಲಿ ಸತ್ತು ಬಿದ್ದಿದ್ದ ಹುಲಿಯೊಂದನ್ನು ಕಂಡನು. ಅಹಾ, ಇದರ ಚರ್ಮವನ್ನು “ತಗೆದು ಕೊಂಡು ಹೋಗಿ ನಮ್ಮ ಕತ್ತೆಗೆ ಹೊದಿಸಿ ಹೊಲಗಳಲ್ಲಿ ಬಿಟ್ಟು ಬಿಟ್ಟರೆ, ಕಾವಲುಗಾರರು ಹುಲಿಯೆಂದುಕೊಳ್ಳುವರು; ಇದನ್ನು ಯಾರೂ ಓಡಿಸುವುದಿಲ್ಲ. ಹಾಗೆ ಆದಕ್ಕೆ, ಕತ್ತೆಯು ಚೆನ್ನಾಗಿ ಮೇದು ಬಲವಾಗುವುದು” ಎಂದು ಯೋಚನೆ ಬಂತು. ಅವನು ಹಾಗೆಯೇ ಮಾಡಿದನು. ರಾತ್ರಿಯೆಲ್ಲವೂ ಕತ್ತೆಯು ಬೆಳೆದ ಹೊಲದಲ್ಲಿ ಮೇಯುವುದು.  ಬೆಳಗಾಗುವುದಕ್ಕೆ ಮುಂಚೆಯೇ ಅಗಸನು ಬಂದು ಅದನ್ನು ಹೊಡೆದುಕೊಂಡು ಹೋಗುವನು.
“ಹೀಗೆಯೇ ಕೆಲವು ಕಾಲ ನಡೆಯಲು ಕತ್ತೆಯು ಚೆನ್ನಾಯಿತು. ಅವನ್ನು ಹಿಡಿಯುವುದೇ ಕಷ್ಟವಾಯಿತು. ಹೀಗಿರಲು ಒಂದು ದಿನ ಹೊಲದಲ್ಲಿ ಮೇಯುತ್ತಿದ್ದ ಕತ್ತೆಯು ದೂರದಲ್ಲಿ ಎಲ್ಲಿಯೋ ಇನ್ನೊ೦ದು ಕತ್ತೆಯು ಕೂಗಿದುದನ್ನು ಕೇಳಿತು. ಅದು ಹೆಣ್ಣು ಕತ್ತೆಯೆಂದುಕೊಂಡು‌ ತಾನೂ ಕೂಗುವುದಕ್ಕೆ ಆರಂಭಿಸಿತು.
ಕೂಡಲೇ ಕಾವಲುಗಾರರು “ಎಲೆಲಾ ಇದು ಹುಲಿಯಲ್ಲ. ಹುಲಿಯ ಚರ್ಮ ಹೊದ್ದ ಕತ್ತೆ” ಎಂದು ತಿಳಿದುಕೊಂಡು ಬಂದು ಕಲ್ಲು ದೊಣ್ಣೆ ಮುಂತಾದವುಗಳಿಂದ ಹೊಡೆದು ಕೊಂದರು.
ಅದರಿಂದ ಹೇಳಿದೆನು. “ಕತ್ತೆಗಂದು ಕೂಗಿಕೊಂಡುದೆ ಮೃತ್ಯುವಾಯ್ತು ಎಂದು” ಎಂದು ಕಪಿಯು ಕಥೆಯನ್ನು ಮುಗಿಸುತ್ತಿದ್ದ ಹಾಗೆಯೇ ಒಂದು ಜಲಚರವು (ನೀರಿನ ಪ್ರಾಣಿ) ಬಂದು “ಎಲೆ ಮೊಸಳೆ ನಿನ್ನ ಹೆಂಡತಿಯು ನೀನು ಬರಲಿಲ್ಲವೆಂದು ಉಪವಾಸಮಾಡಿ ಬಿಟ್ಟಳು? ಎಂದು ಹೇಳಿತು. ಸಿಡಿಲಿನಂತಹ ಆ ಕೆಟ್ಟ ಸುದ್ದಿಯನ್ನು ಕೇಳಿ ಮೊಸಳೆಯು ಹೋ ಎಂದು ಅತ್ತಿತು.
“ಅಯ್ಯೋ, ನನ್ನ ಅದೃಷ್ಟಟವೇ! ಹೀಗಾಗಬಹುದೇ? ಕೇಳಿಲ್ಲವೆ?
ಎಲ್ಲಿ ತಾಯಿಯಿಲ್ಲವೋ; ನುಡಿವ ಮುದ್ದು
ಮಡದಿ ಎಲ್ಲಿಯಿಲ್ಲವೋ, ಆ ಮನೆಯು
ಮನೆಯೇ? ಅದರಲಿಲ್ಲದಿದ್ದರೇನಿದ್ದರೇನು? ॥
ಅಡವಿಗಾಮನೆಗುಂ ನೋಡಲಾಗಿ ಭೇದವೇನು? ॥೨೪॥
ಆದದ್ದು ಆಗಿ ಹೋಯಿತು. ನನ್ನ ಅಪರಾಧವನ್ನು ಮನ್ನಿಸು. ನನ್ನ ಹೆ೦ಡಿತಿಯೂ ಹೋದಳು. ಆ ದುಃಖವನ್ನು ನಾನು ತಡೆಯಲಾರೆ. ನಾನು ಬೆಂಕಿಗೆ ಬೀಳುವೆನು” ಎಂದು ಬಹಳವಾಗಿ ಅತ್ತು ಕೊಂಡಿತು.
ಅದನ್ನು ಕೇಳಿ ಕಪಿಯು ನಕ್ಕುಬಿಟ್ಟತು. “ಎಲೆಲಾ, ಈಗ ತಿಳಿಯಿತು. ನೀನು ಕೇವಲ ಸ್ತ್ರೀವಶನು ಮಾತ್ರವಲ್ಲ ಹೆಣ್ಣಿಗೆ ಸೋತವನೂ ಹೌದು. ಅದರಿಂದ ನೀನು ಅಪರಾಧಿಯಲ್ಲ ಎಂದು ನಂಬಿಕೆಯಾಯಿತು. ಮೂಢ, ಇದು ಆನಂದ ಪಡುವ ಸಮಯ. ಅಳುವ ಸಮಯವಲ್ಲ. ಅಂತಹ ಹೆಂಡತಿಯು ಸತ್ತರೆ ಹಬ್ಬ ಮಾಡಬೇಕು.” ಎಂದಿತು.
ಮೊಸಳೆಯು ಹೇಳಿತು. “ಮಿತ್ರ, ನೀನು ಹೇಳುವುದಿರಲಿ, ಈಗ ನೋಡು,” ನನಗೆ ಎರಡು ನಷ್ಟವಾಯಿತು. ಮೊದಲನೆಯದಾಗಿ ಮನೆಯು ಹಾಳಾಗಿ ಹೋಯಿತು. ಎರಡನೆಯದಾಗಿ ನಿನ್ನಂತಹ ಸ್ನೇಹಿತನ ಸ್ನೇಹವು ಹೋಯಿತು. ಇದಿಷ್ಟೂ ನನ್ನ ಹಣೆಯ ಬರೆಹ! ಕೇಳಿಲ್ಲವೆ?
ನನ್ನ ಜಾಣಿಗೆರಡುಪಾಲು ನಿನ್ನ ಜಾಣು ॥ 
ಗಂಡನಿಲ್ಲ ಮಿಂಡನಿಲ್ಲ ಆದೆ ಬೆತ್ತಲೆ ॥೨೫ ॥ 
ಕಪಿಯು “ಅದು ಹೇಗೆ?” ಎಂದು ಕೇಳಲು, ಮೊಸಳೆಯು ಹೇಳಿತು:-
*****
ಎರಡೂ ಇಲ್ಲವಾದ ಕಥೆ ಓದಿ
Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...