Home / ಬಾಲ ಚಿಲುಮೆ / ಕಥೆ / ಹುಲಿಯಾಗಿದ್ದ ಕತ್ತೆಯ ಕಥೆ

ಹುಲಿಯಾಗಿದ್ದ ಕತ್ತೆಯ ಕಥೆ

ಒಂದಾನೊಂದು ಊರಿನಲ್ಲಿ ಶುದ್ಧ ಪಟನೆಂಬ ಅಗಸನು ಇದ್ದನು. ಅವನಿಗೆ ಒಂದು ಕತ್ತೆಯಿತ್ತು. ಅದು ಹೊಟ್ಟೆಗಿಲ್ಲದೆ ಬಹಳ ಇಳಿದುಹೋಗಿ ನಿಶ್ಶಕ್ತಿಯಾಗಿತ್ತು. ಆ ಅಗಸನು ಒ೦ದು ದಿನ ಎಲ್ಲಿಯೋ ಹೋಗಿ ಬರುತ್ತಿದ್ದಾಗ ಕಾಡಿನಲ್ಲಿ ಸತ್ತು ಬಿದ್ದಿದ್ದ ಹುಲಿಯೊಂದನ್ನು ಕಂಡನು. ಅಹಾ, ಇದರ ಚರ್ಮವನ್ನು “ತಗೆದು ಕೊಂಡು ಹೋಗಿ ನಮ್ಮ ಕತ್ತೆಗೆ ಹೊದಿಸಿ ಹೊಲಗಳಲ್ಲಿ ಬಿಟ್ಟು ಬಿಟ್ಟರೆ, ಕಾವಲುಗಾರರು ಹುಲಿಯೆಂದುಕೊಳ್ಳುವರು; ಇದನ್ನು ಯಾರೂ ಓಡಿಸುವುದಿಲ್ಲ. ಹಾಗೆ ಆದಕ್ಕೆ, ಕತ್ತೆಯು ಚೆನ್ನಾಗಿ ಮೇದು ಬಲವಾಗುವುದು” ಎಂದು ಯೋಚನೆ ಬಂತು. ಅವನು ಹಾಗೆಯೇ ಮಾಡಿದನು. ರಾತ್ರಿಯೆಲ್ಲವೂ ಕತ್ತೆಯು ಬೆಳೆದ ಹೊಲದಲ್ಲಿ ಮೇಯುವುದು.  ಬೆಳಗಾಗುವುದಕ್ಕೆ ಮುಂಚೆಯೇ ಅಗಸನು ಬಂದು ಅದನ್ನು ಹೊಡೆದುಕೊಂಡು ಹೋಗುವನು.
“ಹೀಗೆಯೇ ಕೆಲವು ಕಾಲ ನಡೆಯಲು ಕತ್ತೆಯು ಚೆನ್ನಾಯಿತು. ಅವನ್ನು ಹಿಡಿಯುವುದೇ ಕಷ್ಟವಾಯಿತು. ಹೀಗಿರಲು ಒಂದು ದಿನ ಹೊಲದಲ್ಲಿ ಮೇಯುತ್ತಿದ್ದ ಕತ್ತೆಯು ದೂರದಲ್ಲಿ ಎಲ್ಲಿಯೋ ಇನ್ನೊ೦ದು ಕತ್ತೆಯು ಕೂಗಿದುದನ್ನು ಕೇಳಿತು. ಅದು ಹೆಣ್ಣು ಕತ್ತೆಯೆಂದುಕೊಂಡು‌ ತಾನೂ ಕೂಗುವುದಕ್ಕೆ ಆರಂಭಿಸಿತು.
ಕೂಡಲೇ ಕಾವಲುಗಾರರು “ಎಲೆಲಾ ಇದು ಹುಲಿಯಲ್ಲ. ಹುಲಿಯ ಚರ್ಮ ಹೊದ್ದ ಕತ್ತೆ” ಎಂದು ತಿಳಿದುಕೊಂಡು ಬಂದು ಕಲ್ಲು ದೊಣ್ಣೆ ಮುಂತಾದವುಗಳಿಂದ ಹೊಡೆದು ಕೊಂದರು.
ಅದರಿಂದ ಹೇಳಿದೆನು. “ಕತ್ತೆಗಂದು ಕೂಗಿಕೊಂಡುದೆ ಮೃತ್ಯುವಾಯ್ತು ಎಂದು” ಎಂದು ಕಪಿಯು ಕಥೆಯನ್ನು ಮುಗಿಸುತ್ತಿದ್ದ ಹಾಗೆಯೇ ಒಂದು ಜಲಚರವು (ನೀರಿನ ಪ್ರಾಣಿ) ಬಂದು “ಎಲೆ ಮೊಸಳೆ ನಿನ್ನ ಹೆಂಡತಿಯು ನೀನು ಬರಲಿಲ್ಲವೆಂದು ಉಪವಾಸಮಾಡಿ ಬಿಟ್ಟಳು? ಎಂದು ಹೇಳಿತು. ಸಿಡಿಲಿನಂತಹ ಆ ಕೆಟ್ಟ ಸುದ್ದಿಯನ್ನು ಕೇಳಿ ಮೊಸಳೆಯು ಹೋ ಎಂದು ಅತ್ತಿತು.
“ಅಯ್ಯೋ, ನನ್ನ ಅದೃಷ್ಟಟವೇ! ಹೀಗಾಗಬಹುದೇ? ಕೇಳಿಲ್ಲವೆ?
ಎಲ್ಲಿ ತಾಯಿಯಿಲ್ಲವೋ; ನುಡಿವ ಮುದ್ದು
ಮಡದಿ ಎಲ್ಲಿಯಿಲ್ಲವೋ, ಆ ಮನೆಯು
ಮನೆಯೇ? ಅದರಲಿಲ್ಲದಿದ್ದರೇನಿದ್ದರೇನು? ॥
ಅಡವಿಗಾಮನೆಗುಂ ನೋಡಲಾಗಿ ಭೇದವೇನು? ॥೨೪॥
ಆದದ್ದು ಆಗಿ ಹೋಯಿತು. ನನ್ನ ಅಪರಾಧವನ್ನು ಮನ್ನಿಸು. ನನ್ನ ಹೆ೦ಡಿತಿಯೂ ಹೋದಳು. ಆ ದುಃಖವನ್ನು ನಾನು ತಡೆಯಲಾರೆ. ನಾನು ಬೆಂಕಿಗೆ ಬೀಳುವೆನು” ಎಂದು ಬಹಳವಾಗಿ ಅತ್ತು ಕೊಂಡಿತು.
ಅದನ್ನು ಕೇಳಿ ಕಪಿಯು ನಕ್ಕುಬಿಟ್ಟತು. “ಎಲೆಲಾ, ಈಗ ತಿಳಿಯಿತು. ನೀನು ಕೇವಲ ಸ್ತ್ರೀವಶನು ಮಾತ್ರವಲ್ಲ ಹೆಣ್ಣಿಗೆ ಸೋತವನೂ ಹೌದು. ಅದರಿಂದ ನೀನು ಅಪರಾಧಿಯಲ್ಲ ಎಂದು ನಂಬಿಕೆಯಾಯಿತು. ಮೂಢ, ಇದು ಆನಂದ ಪಡುವ ಸಮಯ. ಅಳುವ ಸಮಯವಲ್ಲ. ಅಂತಹ ಹೆಂಡತಿಯು ಸತ್ತರೆ ಹಬ್ಬ ಮಾಡಬೇಕು.” ಎಂದಿತು.
ಮೊಸಳೆಯು ಹೇಳಿತು. “ಮಿತ್ರ, ನೀನು ಹೇಳುವುದಿರಲಿ, ಈಗ ನೋಡು,” ನನಗೆ ಎರಡು ನಷ್ಟವಾಯಿತು. ಮೊದಲನೆಯದಾಗಿ ಮನೆಯು ಹಾಳಾಗಿ ಹೋಯಿತು. ಎರಡನೆಯದಾಗಿ ನಿನ್ನಂತಹ ಸ್ನೇಹಿತನ ಸ್ನೇಹವು ಹೋಯಿತು. ಇದಿಷ್ಟೂ ನನ್ನ ಹಣೆಯ ಬರೆಹ! ಕೇಳಿಲ್ಲವೆ?
ನನ್ನ ಜಾಣಿಗೆರಡುಪಾಲು ನಿನ್ನ ಜಾಣು ॥ 
ಗಂಡನಿಲ್ಲ ಮಿಂಡನಿಲ್ಲ ಆದೆ ಬೆತ್ತಲೆ ॥೨೫ ॥ 
ಕಪಿಯು “ಅದು ಹೇಗೆ?” ಎಂದು ಕೇಳಲು, ಮೊಸಳೆಯು ಹೇಳಿತು:-
*****
ಎರಡೂ ಇಲ್ಲವಾದ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...