Home / ಕವನ / ಕವಿತೆ / ಈ ತಿಂಗಳು ಜನವರೀ

ಈ ತಿಂಗಳು ಜನವರೀ

(೧೯೫೨ ರಲ್ಲಿ ಭಕ್ತಾಭಕ್ತರ ಮಾತು)

ಈ ತಿಂಗಳು ಜನವರೀ
(ಏನಾದರೆ ಏನರೀ?)

ರವಿ ತಿರುಗಿದನುತ್ತರಕ್ಕೆ
(ಸಮಯವೆಳ್ಳು ಬೆಲ್ಲ ಮುಕ್ಕೆ)
ಕ್ರಾಂತಿ ಸಂಕ್ರಾಂತಿಯಕ್ಕೆ!
(ನಮಗುಳಿವುದೋ ನಮ್ಮ ಹಕ್ಕೆ?)
ಈ ತಿಂಗಳು ಜನವರೀ!
(ಏನಾದರೆ ಏನರೀ?)

ಈ ತಿಂಗಳು ಗಾಂಧಿಸತ್ತ
(ಸತ್ತು ಕಳೆದನಾರ ಕುತ್ತ?)
ನಾಡಿದಾಯ್ತು ಸುಸ್ವತಂತ್ರ
(ಆವ ಕಲಿಯ ಕುಹಕತಂತ್ರ?)
ಇಂದಾಯಿತು ಜನವರೀ!
(ಏನಾದರೆ ಏನರೀ?)

ಈ ತಿಂಗಳು ಮೊದಲಿಟ್ಟಿತು
ಮೂಗುಜನದ ಮೊಗದಾಯ್ಕೆ.
(ಜಡಧಿಯೊಳಾರುತ್ಸವ ಕೀ
ಧನ ದಾಕ್ಷಿಣ್ಯದ ಹಾಯ್ಕೆ?)

ಪ್ರಜೆಗೆ ಸಂದಿತೀ ತಿಂಗಳು
ಬಹುಕಾಲದ ಪೂಣ್ಕೆ.
(ಕುದುರೆಗಂತು ಕೋಲತುದಿಯ
ಕೆಂಗೆಣಸಿನ ಕಾಣ್ಕೆ!)
ಈ ತಿಂಗಳು ಜನವರೀ
(ಅದು ಸರಿ ಮುಂದೇನರೀ?)

ಇನ್ನು ಬೆಳೆವುದೆಮ್ಮ ಕಲಾ.
(ಏನೀ ವೃದ್ಧರ ಚಪಲ!)
ಹುಲುಸುವುದಿನ್ನೆಮ್ಮ ನುಡಿ.
(ನಮಗೇಕೀ ನಾಲಗೆ ಮಡಿ!)
ನಮ್ಮ ವಿದ್ಯೆಯಿನ್ನೆಮಗೆ.
(ಬಂದಿತೆ ಗುಹೆವಾಸದ ಬಗೆ?)
ನಮ್ಮ ನಮ್ಮದೀ ರಾಜ್ಯ!
(ಯಾರದು ಯಾರಿಗೆ ತ್ಯಾಜ್ಯ!)
ಈ ತಿಂಗಳು ಜನವರಿ!
(ಸರಿ ಸರಿ ಮತ್ತೇನರೀ?)

ಎಲೆಲೇ ಪಾಯಸಮಕ್ಷಿಕ,
ನಿನಗೇಕೀ ಕಿಂಕೃತಿ?
ಭೋ, ವಾರ್ಷಿಕ ಹೃಷ್ಟಭೇಕ,
ಮೊಳಗಿಸು ಜಯ ಝಂಕೃತಿ!
ಇಂದಾಯಿತು ಜನವರೀ!
ಅದರಿಂದೆಮಗೇನರೀ?
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...