Home / ಕಥೆ / ಕಿರು ಕಥೆ / ಝೆನ್ ಎಂದರೇನು?

ಝೆನ್ ಎಂದರೇನು?

ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು-
“ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕಾಡು ಮೇಡು ಅಲೆದಾಡಿದೆ. ಬೆಟ್ಟ ಗುಡ್ಡ ಹತ್ತಿದೆ. ಸಮುದ್ರಯಾನ ಮಾಡಿದೆ. ಆಗಸವ ಅವಲೋಕಿಸಿದೆ. ಆದರೆ ನನ್ನ ಮನದಲ್ಲಿ ಒಂದು ರೀತಿಯ ಆಂದೋಲನವಿದೆ. ವನ ವನವ ಸುತ್ತಿದಾಗ, ಅದೆಷ್ಟು ವಿಧದ ಸಸ್ಯಾಕಾರ, ಅದೆಷ್ಟು ವಿಧದ ಬಣ್ಣ, ಮೋಹಕ ಹಸಿರಿನ ಪ್ರದರ್ಶನ ಇದರ ಸ್ವಚ್ಛಂಧತೆಯಲ್ಲಿ ನನ್ನ ಕಣ್ಣು ಕಾಣಬೇಕಾದುದೇನು? ಅದರ ನಿಜ ಮರ್ಮ ನನ್ನ ಅರಿವಿಗೆ ಬರುತ್ತಿಲ್ಲ. ಕಾಡುಮೇಡುಗಳಲ್ಲಿ ಅಲೆದಾಡುವಾಗ ವಿವಿಧ ಖಗಮೃಗಗಳ, ವೈವಿಧ್ಯತೆಯಲ್ಲಿ ತಡಕಾಡಿದೆ, ಹುಡುಕಾಡಿದೆ ಕೊನೆಗೆ ಅರ್ಥವಿಸದಾದೆ. ಇನ್ನು ಆಕಾಶವನ್ನು ಅವಲೋಕಿಸುವಾಗ ಆ ವಿಸ್ತಾರ ನೀಲಿಮೆ; ಅಪಾರ ನಕ್ಷತ್ರಮಾಲೆ; ಬೆಳಗು ರಾತ್ರಿಯಲ್ಲಿ ಚಂದ್ರಸೂರ್ಯ ಗ್ರಹ ನಿಹಾರಿಕೆಗಳ ವೈಭವ. ಅರ್ಥವಿಸಲಾರದ ಅನಂತತೆ ನನ್ನ ದಿ಼ಙ್ಮೂಢನನ್ನಾಗಿ ಮಾಡಿತು. ಇನ್ನು ಸಮುದ್ರಯಾನ ಮಾಡುವಾಗ ಆ ಜಲ ಸಮಾವೇಶದಲ್ಲಿ ಅದೆಷ್ಟು ರಭಸ, ಅದೆಷ್ಟು ಸೆಳೆತ, ಅದೆಷ್ಟು ಭೋರ್ಗರತೆ, ಅದೆಷ್ಟು ಜೀವಚರ, ಅದೆಷ್ಟು ನಿಶ್ಚಲ ಆಳ, ಅದೆಷ್ಟು ವೇಗ, ಅದೆಷ್ಟು ಅಸೀಮ, ಅಪಾರತೀರ, ಎಲ್ಲವೂ ಪ್ರಚೋದಿಸಿತು. ನನ್ನೊಳ ಆಳವನ್ನು ಕಂಪಿಸಿತು. ನನ್ನ ಸ್ಥಿರತೆಗೆ ಭಂಗ ತಂದಿತು. ಇಲ್ಲಿ ಅಳೆಯ ಬೇಕಾದುದು ಏನು? ಇಲ್ಲಿ ಮಥಿಸ ಬೇಕಾದುದು ಏನು? ಒಂದೂ ತಿಳಿಯದೇ, ಏನೋ ಪಡೆದಂತೆ, ಏನೋ ಕಳೆದುಕೊಂಡವನಂತೆ ನಿಮ್ಮಲ್ಲಿಗೆ ಬಂದಿರುವೆನು ಗುರುವರ್ಯ!” ಎಂದ ಶಿಷ್ಯ ಕಂಪಿಸುತ್ತ.

“ಶಿಷ್ಯಾ! ವನವನದಲ್ಲಿ ಇರುವ ಒಟ್ಟು ಸಸ್ಯ ಜೀವ ಚೇತನದ ಚೈತನ್ಯದ ಸಹಜತೆಯನ್ನು ಗುರುತಿಸು. ಅದನ್ನು ಸತ್ಯದಾಳದಲಿ ಅನುಭವಿಸು, ನಿನ್ನ ಮನದ ಆಂದೋಲನಕ್ಕೆ ಮೌನದ ದೃಷ್ಟಿಕೊಡು, ಅಲ್ಲಿ ಅರಳುತ್ತದೆ ನಿನ್ನ ಮನ. ಅದು ತೃಪ್ತಿ ಕೊಡುತ್ತದೆ ಮೌನದಲ್ಲಿ. ಇದು ಮನದ ಝುನ್ ಪ್ರಕೃತಿಯಿಂದ ಮನವು ಪಡೆವ ಮುಕ್ತತೆ. ಝುನ್ ಒಂದು ಒಟ್ಟಾರೆ ಜೀವನ ದರ್ಶನ. ಇದು ಪ್ರಕೃತಿಯ ಮುಚ್ಚು ಮರೆ ಇಲ್ಲದ ತೆರೆದಿಟ್ಟ ಸತ್ಯ. ಅದನ್ನು ಅರಿಯಲು ಶೂನ್ಯತೆಯ ಅರಿವು ಪಡೆದುಕೊಳ್ಳಬೇಕು. ಶೂನ್ಯತೆ ನಕಾರಾತ್ಮಕವಾದುದಲ್ಲ ಅದು ಸಕಾರಾತ್ಮಕ. ಎಲ್ಲವೂ ಒಂದು ಗೂಡುವಿಕೆ. ವನವನದಂತೆ ಕಾಡುಮೇಡಿನಂತೆ, ಸಕಲಜಲದ ಸಮಾವೇಶವಾದ ಸಮುದ್ರದಂತೆ, ಸಕಲಗ್ರಹ, ನಕ್ಷತ್ರ, ನಿಹಾರಿಕೆ ಸೂರ್ಯಚಂದ್ರಮರಿಂದ ಕೂಡಿದ ಆಕಾಶದಂತೆ. ಇಲ್ಲಿ ದ್ವಂದ್ವವಿಲ್ಲ. ಭಿನ್ನತೆಯಿಲ್ಲ. ಎಲ್ಲಾ ಎಲ್ಲವೂ ಒಂದಾಗುವಿಕೆ. ಯಾವುದರಿಂದಲೂ ಹೊರಹೋಗದಿರುವಿಕೆ, ಸರ್ವಸ್ವ ಗ್ರಹಣವೇ ಶೂನ್ಯತೆ. ಆಗ ಮನಕ್ಕೆ ಎಲ್ಲಿಯ ಗೊಂದಲ? ಎಲ್ಲಿಯ ಕಳವಳ?

ಈಗ ನಿನ್ನ ದಾರಿಗೆ ದೀಪ ನೀ ಹಚ್ಚಿಕೋ. ಅದು ನಿನ್ನದು. ನಿನ್ನ ಅನುಭವದ್ದು. ನಿನ್ನ ಮನಃಸ್ಫುರಣದ್ದು. ನಿನ್ನ ಪ್ರಜ್ಞೆಯ ಹೊಳಹು, ನಿನ್ನ ಕಣ್ಣಿನ ಮಿಂಚು. ನಿನ್ನ ಹೃದಯದ ಕೊನೆಯ ಅಂಚು! ಎಂಬ ಗುರುವಿನ ವಾಣಿ ಕೇಳುತ್ತಾ ಶಿಷ್ಯ ಝುನ್‌ನಲ್ಲಿ ಒಂದಾದವು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...