Home / ಕವನ / ಕವಿತೆ / ಸರಸ್ವತಿಗೆ

ಸರಸ್ವತಿಗೆ

ತಿಳಿಗೊಳದ ತೀರದಿಹ ತನಿಗಲ್ಲ ಗದ್ದುಗೆ-
ಯನೇರಿ ಸರದ ಸುಯ್ಯನೆ ಶೃತಿಯಲ್ಲಿ
ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ
ನವಿಲು ನೃತ್ಯಕೆ ತಾಳ ಮೇಳೈಸಿ
ವೀಣಾತರಂಗ ತನ್ಮಯಳೆ ತಾಯೆ
ತರವೇನೆ ನಿನಗೀಪರಿಯು?
ಕನ್ನಡ ತಾಯ ತಾಪತ್ರಯಂಗಳಂ
ಎವೆಯಿಕ್ಕದನುದಿನ ನೋಡಿ ನೋಡಿ
ಸಂಗೀತ ಸಾಗರದೀಜುಬಿದ್ದೇಳುತಿಹಿ.
ದೇವಿ, ಸರಸ್ವತಿದೇವಿ, ವಾಗ್ದೇವಿ,
ಬ್ರಹ್ಮದೇವನರಾಣಿ, ವೀಣಾಪಾಣಿ,
ಕೀರ್ವಾಣಿ, ಕನಿಶ್ರೇಣಿ ಕಲ್ಯಾಣಿ
ನಿನ್ನ ನಾನನವರತ ಭಜಿಸಲೇಕೆ?
ಸಪ್ತಸಾಗರಗಳಭಿಷವಂ ಗೈದು
ಮೂರ್ತ ಮಾರ್ತಾಂಡ ಚಂದ್ರಮತೀಡಿ
ಕಾನನೋದ್ಯಾನ ಕುಸುಮಗಳ ಚೆಲ್ಲಿ
ಸುಪ್ರಭಾತ ಸುಮಂಗಲ ಪಾಡಿ
ಕುಣಿದು ಕೊಂಡಾಡಿ ಪೂಜಿಸಲೇಕೆ?
ಬಾ ಹೊರಗೆ ವೀಣೆಯನಿಟ್ಟು ವಿಶ್ರಾಂತಿ
ಕೊಟ್ಟು, ಕೆಲಕಾಲ ಖಡ್ಗಪಾಣಿನಿಯಾಗಿ.
ಮಲ್ಲಗಚ್ಚಿಯ ಹಾಕಿ ಬಾ ಬೆಂಗಾವಲಾಗಿ.
ಮೂಜಗಕೆ ಗಂಡ ಭೇರುಂಡ ಗಾಂಡೀವಿ-
ಪುತ್ರಾಭಿಮನ್ಯು ಚಕ್ರವ್ಯೂಹವನೆ
ಭೇದಿಸಿದ ಬಾಣದ ಶಕ್ತಿ ಬಹುದೆನ್ನ
ಗಲುಗಿಗೆ. ಮೌಢ್ಯಕೋಟೆಯ ಕೆಡಹಿ
ನಾಡೆಗುಡಿ ಕಟ್ಟುವೆನು. ಕನ್ನಡ ತಾಯ
ತಣಿಸುವೆನು. ನುಡಿದೇವಿ ನುಡಿಸಾಗ
ನಿನ್ನ ವೀಣೆಯನು ತೋಷದಾಕಾಶದಲಿ.
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...