Home / ಕವನ / ಕವಿತೆ / ಈ ರಾತ್ರಿ – ಇಂದು ಮಹಶಿವರಾತ್ರಿ!

ಈ ರಾತ್ರಿ – ಇಂದು ಮಹಶಿವರಾತ್ರಿ!

[ವಿಖ್ಯಾತ ನರ್ತನಗಾರರಾದ ಶ್ರೀ!! ಸೋಹನ್ ಲಾಲ್ ರವರ ನೃತ್ಯಭಂಗಿಯೊಂದರಿಂದ ರೂಪುಗೊಳಿಸಿದೆ. ವಿಷಯಸಂಗ್ರಹವು ಈ ರೀತಿ : ಮಹಾ ಶಿವರಾತ್ರಿಯ ಶುಭದಿನದಲ್ಲಿ ಭಕ್ತರು ಶಿವನ ಪೂಜೆಯ ಸಲುವಾಗಿ ಮಂದಿರದಲ್ಲಿ ಬಂದು ಸೇರುವರು. ವಿವಿಧ ನೈವೇದ್ಯ ಫಲ ಮತ್ತು ಮಧುವನ್ನು ಶಂಕರನ ತೃಪ್ತಿಗಾಗಿ ತಂದು ಅರ್ಪಿಸುವರು. ಶಿವನ ಲೀಲಾಸ್ತೋತ್ರದಲ್ಲಿ ಮುಳುಗಿದವರಾಗಿ, ತಮಟೆ ಮದ್ದಲೆಗಳ ಸದ್ದಿನಲ್ಲಿ ತಲ್ಲೀನರಾಗಿ, ಲೀಲಾಜಾಲದಿಂದ ನರ್ತಿಸಿ, ಶಿವನೂ ಅವರೊಡನೆ ಆತನು ಸೃಷ್ಟಿಸಿದ ಎಲ್ಲಾ ವಸ್ತುಗಳ ಜೊತೆಯೊಂದಿಗೆ ತಮ್ಮೊಡನೆ ನರ್ತಿಸಿದ ಹಾಗೆ ಭಾವಿಸಿ ಮೆರೆಯುವರು.]


ಸೊಡರ ಬೆಳಕಿನ ಹೊಳೆಯು
ಮಂದಿರದಿ ಹುಯುವುದು-
ಪರಶಿವನ ಪೂಜಿಸಲು
ಸೇರಿಹರು ಕಿಂಕರರು,
ಭಕ್ತಭಾವಿಕರು ಕಲಸುವರು ಈ ರಾತ್ರಿ!
ಇಂದು ಮಹಶಿವರಾತ್ರಿ!


ಮಂದಿರದಿ ಬೆಳಗುವರು-
ಹೆಂಗೆಳೆಯರಿಂದು
ಹರನಪೂಜೆಗೆ, ಅವರು
ತಂದಿಹರು ಮಧುವು,
ರುಂಡಮಾಲಿಗೆ ಅರ್ಪಿಸಲು ಈ ರಾತ್ರಿ!
ಇಂದು ಮಹಶಿವರಾತ್ರಿ!


ಈ ಶುಭದಿವಸ ರಾತ್ರಿ!
ಮರೆಯುವಳು ಧಾತ್ರಿ!
ಶಂಭುವನು ಸ್ತುತಿಸುವಳು
ಇರಳುದೀವಿಗೆ ಎದುರು
ಒಲುಮೆ ಮಿಲನದಿ ಚೆಲುವೆ-ಈ ರಾತ್ರಿ!
ಇಂದು ಮಹಶಿವರಾತ್ರಿ!


ತಮಟೆ ಮದ್ದಲಸದ್ದು
ಮಂದಿರದಿ ಕೇಳುವುದು-
ಶಂಕರನ ಸ್ತುತಿಸುವರು
ಭಕ್ತರರು, ಭಾವಿಕರು;
ರೌದ್ರಮುಖಿ ಲಾಸ್ಯದಲಿ ಮುಳುಗುವನು ಈ ರಾತ್ರಿ!
ಇಂದು ಮಹಶಿವರಾತ್ರಿ!


ಶಿವನ ಲೀಲೆಯ ಭವನ
ಮುಳುಗುವುದು ಲಾಸ್ಯದಲಿ-
ನೃತ್ಯವರ್ತನ ಕ್ರೀಡೆ
ಕಾಣುವುದು ಮಂಡಲದಿ,
ಹರನ ಸುತ್ತುವರವರು ತನ್ಮಯದಿ ಈ ರಾತ್ರಿ!
ಇಂದು ಮಹಶಿವರಾತ್ರಿ!


ಜಗದಿ ಕಾಣುವದಿಂದು
ಸೋಜಿಗದ ವಿಸ್ತರಣ-
ಇಳೆಯಲ್ಲಿ, ಮುಗಿಲಿನಲಿ
ದೆಸೆ ಎಸೆಯ ದಿಕ್ಕಿನಲಿ
ನೃತ್ಯ ದರ್ಶನಕಿರಣ ಮಿರುಗುವುದು ಈ ರಾತ್ರಿ!
ಇಂದು ಮಹಶಿವರಾತ್ರಿ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...