Home / ಕವನ / ಕವಿತೆ / ಮದಿರೆಗೆ ಶರಣು

ಮದಿರೆಗೆ ಶರಣು

ಮದಿರೆಯೆಂಬುದದು ತರುವದು ನರನಿಗೆ ಮಾನದ ಹಾನಿಯನೂ |
ಮದಿರೆ ಸೇವನೆ ಮಾಡಲು ಕೆಡುವುದು ಮಾನವನಾರೊಗ್ಯಾ ||
ಮದಿರೆ ಶೆಳೆತಕೆ ಬೀಳ್ದನ ಬಾಳುವೆ ನಾಶವಪೊಂದುವುದೂ |
ಮದಿರೆ ಮಹತಿಯ ನರಿಯುತೆ ದೂರಿರೆ ದೊರೆವವು ಸುಖಶಾಂತಿ || ೧ ||

ಮದಿರೆ ಪಾನದಿಂ ಮದಿಸುತೆ ದುಷ್ಕೃತಿ ಯೆಸೆದರು ರಕ್ಕಸರು |
ಮದಿರೆ ಮಾನವನ ಬುದ್ಧಿಯ ಕೆಡಿಪುದು ಮಾಡುತ ನಿಶೆಯವನ ||
ಮಡದಿ ಮಕ್ಕಳನು ಗೋಳಿಸಿ ಕೊಲ್ವನು ಮದಿರೆಯ ಶೆಳೆತದಲಿ |
ಮದಿರೆ ಮಾಡದ ಕೇಡದು ಜಗದೊಳು ಮತ್ತದು ಯೇನಿಹುದು || ೨ ||

ಮದಿರೆ ಕಿಡಿಸುತೆ ಹಸಿವನು ದೇಹವ ದುರ್ಬಲ ಗೊಳಿಸುವುದು |
ಮದಿರೆ ಬುದ್ಧಿಯ ಕಿಡಿಸುತೆ ಮಾನಸ ಬಲವನು ಹೀರುವುದು ||
ಮದಿರೆ ಮಾನವನ ದೇಹದಿ ಷಡ್ರಿಪುಚೇತನ ಗೊಳಿಸುವುದು |
ಮದಿರೆ ಮಾನಸ ವಿವೇಕವನೋಡಿಸಿ ದುಃಖದಿ ನೂಂಕುವುದು || ೪ ||

ಮದಿರೆ ನೀತಿಯ ಕೆಡಿಸುತೆ ಜನರೊಳು ಮಾನವ ಕಳೆಯುವದು |
ಮದಿರೆ ಧನವನು ಶೆಳೆಯುತೆ ತರುವುದು ಬಡತನ ಮನುಜನಿಗೆ ||
ಮದಿರೆ ಮನೆಯೊಳು ಕಲಹ ಪುಟ್ಟಿಸಿ ಕಳೆವುದು ಗೃಹಸುಖವಾ |
ಮದಿರೆ ಮೋಹವ ಬಿಟ್ಟೊಡೆದೊರೆವವು ಶಾಶ್ವತ ಸುಖಶಾಂತಿ || ೪ ||

ಮದಿರೆ ವೋಡಿಸಲು ಪುಸಿಫುಟಜಾನ್ಸನ ಜಗದೊಳು ತಿರುಗಿದನು |
ಮದಿರೆ ಭಕ್ತರೆ ಜಗದೊಳು ತುಂಬಿರೆ ಮನದೊಳು ಮರುಗಿದನು |
ಮದಿರೆ ಭಾರತದಿ ಬಹುತಾನಿರದಿರೆ ಮನಶಾಂತಿಯ ಹೊಂದಿದನು |
ಮದಿರೆ ಭಾರತದಿ ಜನಗಳು ಸಿಪ್ರದಲೋಡಿಸ ಬಯಸಿದನು || ೫ ||

ಮದಿರೆ ಭಾರತದಿ ಬಂದಿಸೆ ಹಿರಿಯರು ಶಾಸನ ಮಾಡಿಹರು |
ಮದಿರೆ ಶೀಘ್ರದೋಳ್ಕಣ್ಮರೆಯಾಗ್ವುದು ನಮ್ಮಯ ನಾಡಿಂದ |
ಮದಿರೆ ಪೋಗೆ ಬಾಳ್ವಾಗ್ವದು ನಮ್ಮದು ಸಂತತ ಸುಖಮಯವು |
ಮದಿರೆದೇವಿ ನಾವ್ಮಾಳ್ಪೆವು ನಿನ್ನಯ ದಿಕ್ಕಿಗೆ ಶರಣಿಂದು || ೬ ||
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...