Home / ಕವನ / ಕವಿತೆ / ಅಂಬಿಗನು

ಅಂಬಿಗನು

ಆರುಜನರಿವರರಿಗಳೆನ್ನಯ ಬೆನ್ನು ಹತ್ತಿರೆ ನಾನು ಬಯಸುವೆ |
ಪಾರುಗಾಣುತಲವರ ಹಸ್ತದಿ ದೂರ ಪೋಗ್ವುದಕೇ ||
ಮೂರಮಣ ನಾನೆಂತು ದಾಟುವೆ ಘೋರವಾದೀ ಭವದ ಸಾಗರ |
ತೋರು ದಾರಿಯ ನನಗೆ ನಿನ್ನಯ ಬೆಳಕು ತೋರುತಲಿ || ೧ ||

ಹಣ್ಣುಮಾಡಿಹರಿವರು ನನ್ನನು ಕಂಡಕಂಡಡೆ ಪೀಡಿಸುತ್ತಲಿ।
ಪೆಣ್ಣುಯೆನ್ನುವ ಕರುಣೆಯಿಲ್ಲದೆ ಪೊಡೆವರೆನ್ನನ್ನೂ ||
ಕಣ್ಣುಕಾಣದ ಕುರುಡಿಯಾಗಿಹೆ ಮಣ್ಣುಬೀಳಲಿ ಇವರ ಬಾಯೊಳು |
ಸಣ್ಣಗಾಗಿಯೆ ಅರೆಯುತಿರ್ಪರು ಸತತ ನನ್ನನ್ನು || ೨ ||

ಅಂಬಿಗಪ್ಪನೆ ಬೇಡಿಕೊಳ್ವೆನು ಪಾರುಮಾಡೆಲೊ ಯಿವರ ಕೈಯ್ಯಿಂ |
ನಂಬಿಬಂದಿಹಳನ್ನು ಕಾಯ್ದುದು ಧರ್ಮನಿನಗಲ್ಲೇ ||
ತುಂಬಿದ ಸಾಗರದ ತೀರದಿ ನಿಂತುಕೊಂಡಿಹೆ ಗತಿಯ ಕಾಣದೆ |
ಅಂಬರೀಷಗೆ ಮುಕುತಿಯಿತ್ತಿಹ ಹರಿಯೆ ಕಾಯನ್ನ || ೩ ||

ಹುಟ್ಟಿನಿಂದಲಿ ನೀರ ಕಡಿಯಲೊ ಸುಟ್ಟುಮೋರೆಯರಿನರ ತಪ್ಪಿಸೋ।
ಶ್ರೇಷ್ಠನಾವಿಕ ನೆನಿಸಿಕೊಂಬೆಯೊ ನೀನು ಜಗದೊಳಗೇ ||
ವುಟ್ಟ ಸೀರೆಯ ಪರಿವೆಯಿಲ್ಲದೆ ಕಷ್ಟಬಡುತಲಿ ಓಡಿ ಬಂದಿಹೆ |
ಕಷ್ಟನಳಿಯುತೆ ಶ್ರೇಷ್ಠಪದವಿಗೆ ಮುಟ್ಟಿಸೆನ್ನನ್ನೂ || ೪ ||

ಮೀನನಾಗುತೆ ಹೀನದೆಸೆಯೊಳು ಗ್ಲಾನಿಗೊಳ್ಳುತೆಬಿದ್ದಕಾಲಕೆ |
ಮಾನವರ ರಕ್ಷಣೆಯ ಮಾಡಲು ಮತ್ಸ್ಯ ನೀನಾದಿ ||
ದೀನರಕ್ಷಕ ಭೂರಮೆಯನೀಂ ಪೆತ್ತು ಬೆನ್ನೊಳು ಪಾರುಮಾಡಿದಿ |
ಕೂರ್ಮ ರೂಪದಿ ಹರಿಯೆ ನಾರಾಯಣನೆ ಭಗವಂತಾ || ೫ ||

ಹಂದಿರೂಪದಿ ಚಂದದಿಂದಲಿ ಮಂದಿ ಸಹಿತವೆ ಭೂರಮೆಯನೀ |
ಹಿಂದಕೆತ್ತಿದೆ ಕೋರೆಯಿಂದಲಿ ಜಗವನುದ್ಧರಿಸೆ ||
ಅಂದು ನಿನ್ನೀ ಸಾಹಸವ ಮೆಚ್ಚುತೆ ಚಂದ ಪೂಗಳವೃಷ್ಟಿಗೈದರ |
ತಂದೆ ಹರಿಯೆ ಭಾಪುಯೆನ್ನುತೆ ಸಂದದಿವಿಜಗಣಾ || ೬ ||

ದುಟ್ಟ ರಕ್ಕಸನನ್ನು ಶೀಳಲು ಶ್ರೇಷ್ಠನರಹರಿ ರೂಪಿನಿಂದಲಿ |
ನೆಟ್ಟನೆ ಹೊರಬಿದ್ದು ಬಂದಿಯೊ ಶೀಳಿಕ೦ಬವನೂ ||
ಅಟ್ಟಿ ರಕ್ಕಸನನ್ನು ಯಮಸದ ಕಾಗಕಾಯ್ದಿಯೊನಿನ್ನ ಭಕ್ತನ |
ಶೇಷ್ಠ ಪ್ರಹ್ಲಾದನನು ನಿನ್ನಮ ಮೊರೆಯ ಹೊಕ್ಕವನ || ೭ ||

ಕುಳ್ಳ ವಾಮನನಾಗಿ ಬರುತಲಿ ಬಿಕ್ಷೆ ಬೇಡುತೆ ಮೂರುಪಾದವ |
ಮಳ್ಳು ಮಾತಿಲಿ ದಾನ ಬೇಡುತೆ ಬಲಿಯ ವಂಚಿಸಿದೀ ||
ಸುಳ್ಳು ಬೀಳದ ಭಕ್ತ ಬಲಿಯೊಳು ಮೆಚ್ಚಿಕಾಯ್ದಿಯೊ ಗದೆಯ ಪಿಡಿಯುತೆ |
ವೊಲ್ಲೆನೆನ್ನದಲವನ ಬಾಗಿಲು ಪಾತಾಳದಲಿ ನೀನೂ || ೮ ||

ಕಾರ್ತವೀರ್ಯನು ತಂದೆ ಜಮದಗ್ನಿಯನು ಪೀಡಿಸೆ ಸಹಿಸಲಾರದೆ |
ಆರ್ತರಕ್ಷಕ ಬಂದೆ ಧಾವಿಸಿ ಕೊಡಲಿ ಪಿಡಿಯುತ್ತೆ ||
ಧೂರ್ತ ಕ್ಷತ್ರಿಯರನ್ನು ನೀಂ ಸಂಹರಿಸಿ ಜಗದಾಭಾರವಿಳಿಸಿದಿ |
ಮೂರ್ತ ರೂಪದಿ ಪ್ರಕಟವಾಗುವಿ ಕಾಲಕಾಲಕ್ಕೆ || ೯ ||

ಜಗದಿ ಸುಖಶಾಂತಿಗಳ ರಾಜ್ಯವ ನೆಲಿಸಲೋಸುವ ರಾಯನಾಮದಿ |
ಅಗಹರನೆ ಜನಿಸಿದ ಮಗನ ರೂಪದಿ ರಾಯದಶರಥಗೇ ||
ದುರುಳ ರಾವಣ ನಿನ್ನ ರಾಣಿಯ ಸೀತೆಯನು ಕದ್ದೊಯ್ಯಲಾಗಲೆ |
ಮರಣರಕ್ಕಸಗೆಸಗಿ ಪೊಳೆದೆಯೊ ಸೀತೆಸಹಿತಾಗಿ || ೧೦ ||

ಕೃಷ್ಣ ನೆಂಟಭಿಧಾನದಿಂದಲಿ ಪುಟ್ಟಿ ಜಗದೊಳು ಕೊಂದೆಕಂಸನ |
ವಿಷ್ಣುಪ್ರಿಯಭಾಗ್ವತದ ತತ್ವವ ಜಗಕೆ ಬೀರಿದಿಯೋ |
ಕೃಷ್ಣೆ ಪತಿ ಪಾಂಡವರ ರಕ್ಷಿಸೆ ಶ್ರೇಷ್ಠ ಸಾರಥಿಯಾಗಿ ಪಾರ್ಥನ |
ಶ್ರೇಷ್ಠ ಗೀತೆಯ ಮರ್ಮವನು ನೀಂ ನರಗೆ ಬೋಧಿಸಿದಿ || ೧೧||

ಅರುಹ ಲೋಸುಗ ಜಗಕೆ ನಿಃಸಾರತೆಯ ಸಂಸಾರದಲಿ ತೋರುವ |
ಪರಮ ಯೋಗಿಯ ರೂಪಿನಿಂದಲಿ ಬುದ್ಧನೀನಾದೀ ||
ಕರುಣೆಪೂರಿತ ಹಿಂಸೆಯರಿಯದ ಗಾಂಧಿಯೆಂಬಾ ಸುತನ ಕಳುಹಿದಿ |
ಪರಮ ನಿನ್ನಯ ತತ್ವಬೀರಲು ಜಗದಿ ಶಾಶ್ಚತವ || ೧೨ ||

ದುರುಳನೊರ್ವನು ಗಾಂಧಿದೇಹವ ಕೆಡಹಲಾತನ ಪ್ರಾಣವಕ್ಕಿಯು |
ಭರದೆ ಹಾರಿತು ನಭಕೆ ಪೊಳೆಯಲು ಚಂದ್ರ ಮಂಡಳದಿ ||
ಮರುಳು ಜನರಿಹ ಗಾಂಧಿ ತತ್ವವ ಮರೆತು ತಮ್ಮೊಳು ಜಗಳಗೈವರು !
ಬಿಗಿದು ನಿಂತಿದೆ ಕದನ ಸೂಚತ ಮುಗಿಲು ವಿಶ್ಯ ದೊಳೊ || ೧೩ ||

ಜಾತಿವರ್ಣಗಳೆಂಬ ನೆಪದಿಂ ಕೋತಿಯಂದದಿ ಕಲಹಗೈಯುತೆ।
ಸ್ವಾರ್ಥಪೂರಿತ ಜನರು ಜಗದೊಳು ಮೆರೆವರೆಲ್ಲೆಲ್ಲಾ ||
ಭೀತಿಯಿಂದಲಿ ಕಾಣುತಿರ್ಪರು ಬಂಧು ಜನಗಳು ತಮ್ಮತಮ್ಮೊಳು
ನೀತಿ ಬೋಧಿಸೆ ನಿನ್ನಗತ್ಯವು ಯಿಂದು ತಾನಿಹುದು || ೧೪ ||

ಕಲಿಯ ಮದವನು ಯಿಳಿಸೆ ನಿನ್ನಯ ಕಲ್ಕಿಯವತಾರಕ್ಕೆ ಸಮಯವು |
ಒದಗಿ ಬಂದಿದೆ ಬಾರೊ ಹರಿಯೆ ಭಾರವಿಳಿಯುದಕೇ ||
ಗಲಿತವಾಗಿಹ ನೀತಿಯೆಮ್ಮೊಳು ಮೆರಿಸಿ ಬಳಯುತರನ್ನು ಮಾಡುತೆ |
ಹರಿಸೋ ಮಾನವ ಕುಲವ ಹರಿಯೇ ಸನ್ಮಾರ್ಗತೋರುತಲೀ || ೧೫ ||
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...