Home / ಕವನ / ಕವಿತೆ / ಅಂಬಿಗನು

ಅಂಬಿಗನು

ಆರುಜನರಿವರರಿಗಳೆನ್ನಯ ಬೆನ್ನು ಹತ್ತಿರೆ ನಾನು ಬಯಸುವೆ |
ಪಾರುಗಾಣುತಲವರ ಹಸ್ತದಿ ದೂರ ಪೋಗ್ವುದಕೇ ||
ಮೂರಮಣ ನಾನೆಂತು ದಾಟುವೆ ಘೋರವಾದೀ ಭವದ ಸಾಗರ |
ತೋರು ದಾರಿಯ ನನಗೆ ನಿನ್ನಯ ಬೆಳಕು ತೋರುತಲಿ || ೧ ||

ಹಣ್ಣುಮಾಡಿಹರಿವರು ನನ್ನನು ಕಂಡಕಂಡಡೆ ಪೀಡಿಸುತ್ತಲಿ।
ಪೆಣ್ಣುಯೆನ್ನುವ ಕರುಣೆಯಿಲ್ಲದೆ ಪೊಡೆವರೆನ್ನನ್ನೂ ||
ಕಣ್ಣುಕಾಣದ ಕುರುಡಿಯಾಗಿಹೆ ಮಣ್ಣುಬೀಳಲಿ ಇವರ ಬಾಯೊಳು |
ಸಣ್ಣಗಾಗಿಯೆ ಅರೆಯುತಿರ್ಪರು ಸತತ ನನ್ನನ್ನು || ೨ ||

ಅಂಬಿಗಪ್ಪನೆ ಬೇಡಿಕೊಳ್ವೆನು ಪಾರುಮಾಡೆಲೊ ಯಿವರ ಕೈಯ್ಯಿಂ |
ನಂಬಿಬಂದಿಹಳನ್ನು ಕಾಯ್ದುದು ಧರ್ಮನಿನಗಲ್ಲೇ ||
ತುಂಬಿದ ಸಾಗರದ ತೀರದಿ ನಿಂತುಕೊಂಡಿಹೆ ಗತಿಯ ಕಾಣದೆ |
ಅಂಬರೀಷಗೆ ಮುಕುತಿಯಿತ್ತಿಹ ಹರಿಯೆ ಕಾಯನ್ನ || ೩ ||

ಹುಟ್ಟಿನಿಂದಲಿ ನೀರ ಕಡಿಯಲೊ ಸುಟ್ಟುಮೋರೆಯರಿನರ ತಪ್ಪಿಸೋ।
ಶ್ರೇಷ್ಠನಾವಿಕ ನೆನಿಸಿಕೊಂಬೆಯೊ ನೀನು ಜಗದೊಳಗೇ ||
ವುಟ್ಟ ಸೀರೆಯ ಪರಿವೆಯಿಲ್ಲದೆ ಕಷ್ಟಬಡುತಲಿ ಓಡಿ ಬಂದಿಹೆ |
ಕಷ್ಟನಳಿಯುತೆ ಶ್ರೇಷ್ಠಪದವಿಗೆ ಮುಟ್ಟಿಸೆನ್ನನ್ನೂ || ೪ ||

ಮೀನನಾಗುತೆ ಹೀನದೆಸೆಯೊಳು ಗ್ಲಾನಿಗೊಳ್ಳುತೆಬಿದ್ದಕಾಲಕೆ |
ಮಾನವರ ರಕ್ಷಣೆಯ ಮಾಡಲು ಮತ್ಸ್ಯ ನೀನಾದಿ ||
ದೀನರಕ್ಷಕ ಭೂರಮೆಯನೀಂ ಪೆತ್ತು ಬೆನ್ನೊಳು ಪಾರುಮಾಡಿದಿ |
ಕೂರ್ಮ ರೂಪದಿ ಹರಿಯೆ ನಾರಾಯಣನೆ ಭಗವಂತಾ || ೫ ||

ಹಂದಿರೂಪದಿ ಚಂದದಿಂದಲಿ ಮಂದಿ ಸಹಿತವೆ ಭೂರಮೆಯನೀ |
ಹಿಂದಕೆತ್ತಿದೆ ಕೋರೆಯಿಂದಲಿ ಜಗವನುದ್ಧರಿಸೆ ||
ಅಂದು ನಿನ್ನೀ ಸಾಹಸವ ಮೆಚ್ಚುತೆ ಚಂದ ಪೂಗಳವೃಷ್ಟಿಗೈದರ |
ತಂದೆ ಹರಿಯೆ ಭಾಪುಯೆನ್ನುತೆ ಸಂದದಿವಿಜಗಣಾ || ೬ ||

ದುಟ್ಟ ರಕ್ಕಸನನ್ನು ಶೀಳಲು ಶ್ರೇಷ್ಠನರಹರಿ ರೂಪಿನಿಂದಲಿ |
ನೆಟ್ಟನೆ ಹೊರಬಿದ್ದು ಬಂದಿಯೊ ಶೀಳಿಕ೦ಬವನೂ ||
ಅಟ್ಟಿ ರಕ್ಕಸನನ್ನು ಯಮಸದ ಕಾಗಕಾಯ್ದಿಯೊನಿನ್ನ ಭಕ್ತನ |
ಶೇಷ್ಠ ಪ್ರಹ್ಲಾದನನು ನಿನ್ನಮ ಮೊರೆಯ ಹೊಕ್ಕವನ || ೭ ||

ಕುಳ್ಳ ವಾಮನನಾಗಿ ಬರುತಲಿ ಬಿಕ್ಷೆ ಬೇಡುತೆ ಮೂರುಪಾದವ |
ಮಳ್ಳು ಮಾತಿಲಿ ದಾನ ಬೇಡುತೆ ಬಲಿಯ ವಂಚಿಸಿದೀ ||
ಸುಳ್ಳು ಬೀಳದ ಭಕ್ತ ಬಲಿಯೊಳು ಮೆಚ್ಚಿಕಾಯ್ದಿಯೊ ಗದೆಯ ಪಿಡಿಯುತೆ |
ವೊಲ್ಲೆನೆನ್ನದಲವನ ಬಾಗಿಲು ಪಾತಾಳದಲಿ ನೀನೂ || ೮ ||

ಕಾರ್ತವೀರ್ಯನು ತಂದೆ ಜಮದಗ್ನಿಯನು ಪೀಡಿಸೆ ಸಹಿಸಲಾರದೆ |
ಆರ್ತರಕ್ಷಕ ಬಂದೆ ಧಾವಿಸಿ ಕೊಡಲಿ ಪಿಡಿಯುತ್ತೆ ||
ಧೂರ್ತ ಕ್ಷತ್ರಿಯರನ್ನು ನೀಂ ಸಂಹರಿಸಿ ಜಗದಾಭಾರವಿಳಿಸಿದಿ |
ಮೂರ್ತ ರೂಪದಿ ಪ್ರಕಟವಾಗುವಿ ಕಾಲಕಾಲಕ್ಕೆ || ೯ ||

ಜಗದಿ ಸುಖಶಾಂತಿಗಳ ರಾಜ್ಯವ ನೆಲಿಸಲೋಸುವ ರಾಯನಾಮದಿ |
ಅಗಹರನೆ ಜನಿಸಿದ ಮಗನ ರೂಪದಿ ರಾಯದಶರಥಗೇ ||
ದುರುಳ ರಾವಣ ನಿನ್ನ ರಾಣಿಯ ಸೀತೆಯನು ಕದ್ದೊಯ್ಯಲಾಗಲೆ |
ಮರಣರಕ್ಕಸಗೆಸಗಿ ಪೊಳೆದೆಯೊ ಸೀತೆಸಹಿತಾಗಿ || ೧೦ ||

ಕೃಷ್ಣ ನೆಂಟಭಿಧಾನದಿಂದಲಿ ಪುಟ್ಟಿ ಜಗದೊಳು ಕೊಂದೆಕಂಸನ |
ವಿಷ್ಣುಪ್ರಿಯಭಾಗ್ವತದ ತತ್ವವ ಜಗಕೆ ಬೀರಿದಿಯೋ |
ಕೃಷ್ಣೆ ಪತಿ ಪಾಂಡವರ ರಕ್ಷಿಸೆ ಶ್ರೇಷ್ಠ ಸಾರಥಿಯಾಗಿ ಪಾರ್ಥನ |
ಶ್ರೇಷ್ಠ ಗೀತೆಯ ಮರ್ಮವನು ನೀಂ ನರಗೆ ಬೋಧಿಸಿದಿ || ೧೧||

ಅರುಹ ಲೋಸುಗ ಜಗಕೆ ನಿಃಸಾರತೆಯ ಸಂಸಾರದಲಿ ತೋರುವ |
ಪರಮ ಯೋಗಿಯ ರೂಪಿನಿಂದಲಿ ಬುದ್ಧನೀನಾದೀ ||
ಕರುಣೆಪೂರಿತ ಹಿಂಸೆಯರಿಯದ ಗಾಂಧಿಯೆಂಬಾ ಸುತನ ಕಳುಹಿದಿ |
ಪರಮ ನಿನ್ನಯ ತತ್ವಬೀರಲು ಜಗದಿ ಶಾಶ್ಚತವ || ೧೨ ||

ದುರುಳನೊರ್ವನು ಗಾಂಧಿದೇಹವ ಕೆಡಹಲಾತನ ಪ್ರಾಣವಕ್ಕಿಯು |
ಭರದೆ ಹಾರಿತು ನಭಕೆ ಪೊಳೆಯಲು ಚಂದ್ರ ಮಂಡಳದಿ ||
ಮರುಳು ಜನರಿಹ ಗಾಂಧಿ ತತ್ವವ ಮರೆತು ತಮ್ಮೊಳು ಜಗಳಗೈವರು !
ಬಿಗಿದು ನಿಂತಿದೆ ಕದನ ಸೂಚತ ಮುಗಿಲು ವಿಶ್ಯ ದೊಳೊ || ೧೩ ||

ಜಾತಿವರ್ಣಗಳೆಂಬ ನೆಪದಿಂ ಕೋತಿಯಂದದಿ ಕಲಹಗೈಯುತೆ।
ಸ್ವಾರ್ಥಪೂರಿತ ಜನರು ಜಗದೊಳು ಮೆರೆವರೆಲ್ಲೆಲ್ಲಾ ||
ಭೀತಿಯಿಂದಲಿ ಕಾಣುತಿರ್ಪರು ಬಂಧು ಜನಗಳು ತಮ್ಮತಮ್ಮೊಳು
ನೀತಿ ಬೋಧಿಸೆ ನಿನ್ನಗತ್ಯವು ಯಿಂದು ತಾನಿಹುದು || ೧೪ ||

ಕಲಿಯ ಮದವನು ಯಿಳಿಸೆ ನಿನ್ನಯ ಕಲ್ಕಿಯವತಾರಕ್ಕೆ ಸಮಯವು |
ಒದಗಿ ಬಂದಿದೆ ಬಾರೊ ಹರಿಯೆ ಭಾರವಿಳಿಯುದಕೇ ||
ಗಲಿತವಾಗಿಹ ನೀತಿಯೆಮ್ಮೊಳು ಮೆರಿಸಿ ಬಳಯುತರನ್ನು ಮಾಡುತೆ |
ಹರಿಸೋ ಮಾನವ ಕುಲವ ಹರಿಯೇ ಸನ್ಮಾರ್ಗತೋರುತಲೀ || ೧೫ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...