Home / ಕವನ / ಅನುವಾದ / ಚೋಳಕನ್ನೆಯರು

ಚೋಳಕನ್ನೆಯರು

ಏಳು ಮಗಳುದಿರು ಚೋಳರಾಯನಿಗೆ,
ಒಬ್ಬ ತಾಯ ಸಿರಿಮಕ್ಕಳು;
ಸಾಲದೊಂದು ದಿನ ಹೇಳಿ ಮುಗಿಸುವರೆ
ಹಬ್ಬಿಹೆಣೆದವರ ಹಿತುವನು.
ಏಳು ನೈದಿಲೆಗಳಕ್ಕತಂಗಿಯರು,
ಮಾಲೆಯೊಂದರಲ್ಲಿ ಹೊಂದಿಕೆ,
ಅವರ ತಂದೆಯೋ, ಧೀರ ಕಾಳಗದೊ
ಇವರ ಚಿಂತೆಯನೆ ಕೊಳ್ಳನೆಣಿಕೆಯಲಿ-
ಅವನಿಗಿಷ್ಟು ರುಚಿ ರಣದಲಿ!
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಮೆರೆವ ಮೂಡಲಲಿ, ಮೊರೆದು ತೀಡುತಲಿ,
ಗಾಳಿ ತರುಬುವುದು ಕಡಲನು;
ತೆರೆಗಳೇಳುವುವು, ಹೊರಳಿ ಬೀಳುವುವು
ಚೋಳಮಂಡಲವ ತೊಳೆವುವು.
ಹಡಗ ನಡಸುತಲಿ, ಕಡಲ ಹಾಯುತಲಿ,
ತಡಿಯ ಸೇರುವರು, ಕಳ್ಳರು,
ಬೂದಿಮರಳಿನಲಿ ದುಮುಕಿ ನಿಲ್ಲುವರು;
ಕಾದಿ ಕವಿಯಲದೊ ಪಡೆಯ ನಾಯಕನ
ಊದಿ ಮೊಳಗುವನು ಕೊಂಬನು.
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ನೋಟಸಿಂಗರದ ತೋಟಿದೊತ್ತಿನಲಿ
ಮುಸುಕುಕೊಂಬೆಗಳ ನೆರಳಲಿ.
ಮೇಳದೊರಗಿರುವರೇಳು ಕನ್ನೆಯರು
ಮಿಸುನಿಜಿಂಕೆಗಳ ತೆರದಲಿ.
ಆಳ ಬೊಬ್ಬೆಯನು ಕೇಳಿ ಬೆಚ್ಚುತಲಿ,
ಬೀಳುತೇಳುತಲಿ ಹರಿವರು;
ಜಾರಿ ಮುಗ್ಗುವರು, ನೆಗೆದು ನುಗ್ಗುವರು-
ಧೀರ ಜನಕನೇ, ಸೂರೆಗೆಲ್ಲಿರುವೆ?
ಸೂರೆ ಇಲ್ಲಿ ಸಿರಿಮಕ್ಕಳು!
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಎಡಕೆ ಬಲಕೆ ಸರಿದೇಳು ಕನ್ನೆಯರು
ಹಳ್ಳತಿಟ್ಟಿನಲಿ ಹರಿವರು;
ನುಡಿಸಿ ಸೊಕ್ಕಿನಲಿ, ಬಿಡದೆ ಬೆನ್ನಿನಲಿ.
ಕಳ್ಳಚೆನ್ನಿಗರು ಬರುವರು.
ಜರೆದು ಹೇಳುವರು – “ಮರೆತು ಮಕ್ಕಳನ್ನು
ಮರುಳು ತಂದೆ ಅವನಲೆವನು.
ಬರಿದು ಸಾಕು ಮನೆ, ಮರಳಿ ಬಂದವಗೆ-
ನಮಗೆ ಕುರುಳಸುಳಿ ಬಾಚಿ ತಿದ್ದಿಕೊಳಿ,
ನಮಗೆ, ಚೆಲುವೆಯರ ಒಲಿಯಿರಿ.”
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಕೆಲವರತ್ತಕಡೆ, ಕೆಲವರಿತ್ತ ಕಡೆ,
ಚೆಲ್ಲಿ ಗಾಳಿಮುಗಿಲಂದದಿ,
“ಬನ್ನಿ ಎಲ್ಲರೂ- ಇನ್ನು ಸಾಯುವುದೆ,
ಎಲ್ಲ ಸಾಯುವುದೆ” ಎಂದರು.
ಅಲ್ಲೆ ಒಂದು ಕೆರೆ ; ಬಂಡೆ ಕಡಿದು ಕರೆ,
ಅಲ್ಲಿ ಆಳಿನಡಿ ಸುಳಿಯದು.
ಹರಿದು, ಆಶೆತೊರೆದೊಂದೆ ಹಾರಿನಲಿ
ನೆರೆಯುಳುವರು ಹಾರಿ ಮುಳುಗಿದರು,
ಮರಳಿ ಕಣ್ಣಿನಲಿ ಬೀಳರು.
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಕೆರೆಯ ನೀರುರುಳಿ ಹರಿವ ಕಾಲುಹೊಳೆ
ಕೊರಕಲಲ್ಲಿ ಸುಳಿದಾಡುತ,
ಗರುಕೆಕಲ್ಲ ಬಳಿ, ಹೊರಳಿ ನರಳುವುದು,
ಮೆರೆವ ಕನ್ನೆಯರ ನೆನೆಯುತ.
ಏಳು ದಿಬ್ಬಗಳು, ಹಸುರುಹೊದಿಕೆಯಲಿ,
ಆಳದಿಂದ ನೆಗೆದೆದ್ದವು.
ನೊಂದು ಮರುಕದಲಿ ನಾಗಕನ್ನೆಯರು
ತಂದು ಕನ್ನೆಯರನಲ್ಲಿ ಹೂಳಿಹರು.
ಎಂದು ಹೇಳುವರು ತೊರೆಯರು.
ತಾಳು ಕಂಬನಿಯ, ತುಂಬು ಕಂಬನಿಯ,
ಜೋಳಕನ್ನೆಯರ ಭಂಗಕೆ.
*****
WORDSWORTH : The Seven Sisters

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...