Home / ಕವನ / ಅನುವಾದ / ಚೋಳಕನ್ನೆಯರು

ಚೋಳಕನ್ನೆಯರು

ಏಳು ಮಗಳುದಿರು ಚೋಳರಾಯನಿಗೆ,
ಒಬ್ಬ ತಾಯ ಸಿರಿಮಕ್ಕಳು;
ಸಾಲದೊಂದು ದಿನ ಹೇಳಿ ಮುಗಿಸುವರೆ
ಹಬ್ಬಿಹೆಣೆದವರ ಹಿತುವನು.
ಏಳು ನೈದಿಲೆಗಳಕ್ಕತಂಗಿಯರು,
ಮಾಲೆಯೊಂದರಲ್ಲಿ ಹೊಂದಿಕೆ,
ಅವರ ತಂದೆಯೋ, ಧೀರ ಕಾಳಗದೊ
ಇವರ ಚಿಂತೆಯನೆ ಕೊಳ್ಳನೆಣಿಕೆಯಲಿ-
ಅವನಿಗಿಷ್ಟು ರುಚಿ ರಣದಲಿ!
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಮೆರೆವ ಮೂಡಲಲಿ, ಮೊರೆದು ತೀಡುತಲಿ,
ಗಾಳಿ ತರುಬುವುದು ಕಡಲನು;
ತೆರೆಗಳೇಳುವುವು, ಹೊರಳಿ ಬೀಳುವುವು
ಚೋಳಮಂಡಲವ ತೊಳೆವುವು.
ಹಡಗ ನಡಸುತಲಿ, ಕಡಲ ಹಾಯುತಲಿ,
ತಡಿಯ ಸೇರುವರು, ಕಳ್ಳರು,
ಬೂದಿಮರಳಿನಲಿ ದುಮುಕಿ ನಿಲ್ಲುವರು;
ಕಾದಿ ಕವಿಯಲದೊ ಪಡೆಯ ನಾಯಕನ
ಊದಿ ಮೊಳಗುವನು ಕೊಂಬನು.
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ನೋಟಸಿಂಗರದ ತೋಟಿದೊತ್ತಿನಲಿ
ಮುಸುಕುಕೊಂಬೆಗಳ ನೆರಳಲಿ.
ಮೇಳದೊರಗಿರುವರೇಳು ಕನ್ನೆಯರು
ಮಿಸುನಿಜಿಂಕೆಗಳ ತೆರದಲಿ.
ಆಳ ಬೊಬ್ಬೆಯನು ಕೇಳಿ ಬೆಚ್ಚುತಲಿ,
ಬೀಳುತೇಳುತಲಿ ಹರಿವರು;
ಜಾರಿ ಮುಗ್ಗುವರು, ನೆಗೆದು ನುಗ್ಗುವರು-
ಧೀರ ಜನಕನೇ, ಸೂರೆಗೆಲ್ಲಿರುವೆ?
ಸೂರೆ ಇಲ್ಲಿ ಸಿರಿಮಕ್ಕಳು!
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಎಡಕೆ ಬಲಕೆ ಸರಿದೇಳು ಕನ್ನೆಯರು
ಹಳ್ಳತಿಟ್ಟಿನಲಿ ಹರಿವರು;
ನುಡಿಸಿ ಸೊಕ್ಕಿನಲಿ, ಬಿಡದೆ ಬೆನ್ನಿನಲಿ.
ಕಳ್ಳಚೆನ್ನಿಗರು ಬರುವರು.
ಜರೆದು ಹೇಳುವರು – “ಮರೆತು ಮಕ್ಕಳನ್ನು
ಮರುಳು ತಂದೆ ಅವನಲೆವನು.
ಬರಿದು ಸಾಕು ಮನೆ, ಮರಳಿ ಬಂದವಗೆ-
ನಮಗೆ ಕುರುಳಸುಳಿ ಬಾಚಿ ತಿದ್ದಿಕೊಳಿ,
ನಮಗೆ, ಚೆಲುವೆಯರ ಒಲಿಯಿರಿ.”
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಕೆಲವರತ್ತಕಡೆ, ಕೆಲವರಿತ್ತ ಕಡೆ,
ಚೆಲ್ಲಿ ಗಾಳಿಮುಗಿಲಂದದಿ,
“ಬನ್ನಿ ಎಲ್ಲರೂ- ಇನ್ನು ಸಾಯುವುದೆ,
ಎಲ್ಲ ಸಾಯುವುದೆ” ಎಂದರು.
ಅಲ್ಲೆ ಒಂದು ಕೆರೆ ; ಬಂಡೆ ಕಡಿದು ಕರೆ,
ಅಲ್ಲಿ ಆಳಿನಡಿ ಸುಳಿಯದು.
ಹರಿದು, ಆಶೆತೊರೆದೊಂದೆ ಹಾರಿನಲಿ
ನೆರೆಯುಳುವರು ಹಾರಿ ಮುಳುಗಿದರು,
ಮರಳಿ ಕಣ್ಣಿನಲಿ ಬೀಳರು.
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಕೆರೆಯ ನೀರುರುಳಿ ಹರಿವ ಕಾಲುಹೊಳೆ
ಕೊರಕಲಲ್ಲಿ ಸುಳಿದಾಡುತ,
ಗರುಕೆಕಲ್ಲ ಬಳಿ, ಹೊರಳಿ ನರಳುವುದು,
ಮೆರೆವ ಕನ್ನೆಯರ ನೆನೆಯುತ.
ಏಳು ದಿಬ್ಬಗಳು, ಹಸುರುಹೊದಿಕೆಯಲಿ,
ಆಳದಿಂದ ನೆಗೆದೆದ್ದವು.
ನೊಂದು ಮರುಕದಲಿ ನಾಗಕನ್ನೆಯರು
ತಂದು ಕನ್ನೆಯರನಲ್ಲಿ ಹೂಳಿಹರು.
ಎಂದು ಹೇಳುವರು ತೊರೆಯರು.
ತಾಳು ಕಂಬನಿಯ, ತುಂಬು ಕಂಬನಿಯ,
ಜೋಳಕನ್ನೆಯರ ಭಂಗಕೆ.
*****
WORDSWORTH : The Seven Sisters

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...