Home / ಕವನ / ಕವಿತೆ / ಕರ್ನಾಟಕ ಕ೦ದ (ಕುಮಾರ ರಾಮ)

ಕರ್ನಾಟಕ ಕ೦ದ (ಕುಮಾರ ರಾಮ)

ಹರಲೀಯ ಕೊಡಲಾರೆ |
ಕರನಾಟ ಕಂದಽಗ ||ಪ||

ಹರಲೀಯ ಕೊಡಲಾರೆ, ಕರನಾಟ ಕಂದಗ
ವರಬೊಲ್ಲ ತಂದ ಕೊಮರಾಗ | ಹ | ರಣದಾಗ
ತುರಕರ ಗೆದ್ದ ವೀರಾಗ | ಹ | ೧

ಕಥೆಯ ಕೇಳಿರಿ ಜನರೆ, ಮತಿಯಿಟ್ಟು ತೂಗುತಲಿ
ಸುತಗ ಮನಸಿಟ್ಟ ಕಳಲಯುಗದ | ಮಲತಾಯಿ
ಬತವ ಹಾಡೇವ ನಿಜಗತೆಯ || ೨

ಹಿರಿಯರಸಿ ಹರಿಯಾಲಿ, ಕಿರಿಯರಸಿ ರತ್ನಾಲಿ
ಅರಸ ಕಂಪಿಲ ರಾಯನಿಗೆ | ಕೊಮರಾಮ
ಆರಸ ಮಗನಾದ ಹೆಸರಾತು || ೩

ಅರಮನೆ ಕೊಮರಾಮ, ಮರೆಯೂವ ರೂಪೇನ
ಅರಸಿ ರತ್ನಾಲಿ ಮನಸೋತ | ಮನದಾಗ
ಮರಗ್ಯಾಳ ರಾಮ ದೊರೆಯದಕ || ೪

ಅರಸ ಕಂಪಿಲರಾಯ, ಸರಸ ಬ್ಯಾಟಿಗೆ ಹೋದ
ಅರಸಿ ರತ್ನಾಲಿ ಮನಿಯಾಗ | ಮೋಹಿಸಿದ
ಎರಕ ಕೊಮರಾಮ ಎದಿಯಾಗ || ೫

ಅಂಗಳದ ಬೈಲಾಗ, ಜಂಗಿ ಚಂಡಿನ ಆಟ
ದಂಗ ಬಡಿಸ್ಯಾನ ಕೊಮರಾಮ | ರತ್ನಾಲಿ
ಕಂಗೆಟ್ಟು ಸೋತು ನೋಡ್ಯಾಳ || ೬

ಮೇಲ ಮಾಳಿಗಿ ಮ್ಯಾಲ, ನೀಳ ದಿಟ್ಟಿಯ ಬಿಟ್ಟು
ಹೋಳಿಯಾಡ್ಯಾಳ ಮೈಮರೆತು | ರತ್ನಾಲಿ
ಸೀಳಿ ಕೊಮರಾಮ ಎದೆಹೊಕ್ಕು || ೭

ಸಮಯ ಕಾಯುವ ಕಳ್ಳ, ತಮವ ದೊರಕಿಸಿದ್ಹಾಂಗ
ಕೊಮರಾಮ ಜೆಂಡ ಆಡುದಕ | ವುಟಿವುಟಿದು
ಚಮಕಿಸಿ ಚೆಂಡು ಒಳಮನಿಗೆ || ೮

ಚೆಂಡು ಬೀಳುತ ನೋಡಿ, ಚೆಂಡಿ ರತ್ನಾಲಿ ಮುಚ್ಚಿ
ಲಂಡಾಗಿ ಚೆಂಡ ಕೊಡಲಿಲ್ಲ | ರಾಮನಿಗೆ
ಚೆಂಡ ತರಲಾಕ ಕಳಿಸ್ಯಾರ || ೯

ರತ್ನಾಲಿ ಹಡದವ್ವ, ಚಿತ್ತರದ ಕೊಡಚೆಂಡ
ಕತ್ತಲಾಗೂದ ಆಡುದಕ | ಅರಮನೆಯ
ಹೆತ್ತಾಯಿ ಹಾದಿ ನೋಡ್ಯಾಳ || ೧೦

ಕಂಡು ರಾಮನ ರೂಪ, ಚೆಂಡಿ ರತ್ನಾಲಿ ಸೋತು
ಹಿಂಡೊ ಕೊಮರಾಮ ಕಾಮೂಟೊ | ಕೂಡಾಡಿ
ಉಂಡು ಹಿಂಗೀಸೊ ಮನತಾಪೊ || ೧೧

ಕಾಮನೀ ಕೊಮರಾಮ, ಕಾಮಿಸಿದೆ ನಾನೋಡಿ
ಕಾಮಾಟ ಕೂಡಿ ನೀನಾಡೊ | ಮನದೊರೆಯೆ
ಪ್ರೇಮ ನಿನ ಮ್ಯಾಲೆ ಕೈಮುಗಿದೆ || ೧೨

ತಾಯೆ,! ತಂದೆಯ ಸತಿಯೆ, ನಾಯಿ ಮಾಡುವ ಕೆಲಸ
ಮಾಯೆ ನಿನಗ್ಯಾಕ ನನಮ್ಯಾಲೆ | ಹಡದವ್ವ
ಹೇಯ ಇಲ್ಲೇನ ನಿನಗೇಟ || ೧೩

ಕಾಯಕಾಮನ ಗುಡಿಯೊ, ಹೇಯಮಾಡಲು ಬೇಡ
ತಾಯೆಂಬ ನುಡಿಯು ಬೇಡೆನಗೊ | ಕೊಮರಾಮ
ಬಾಯೆನಗ ಕಾಮ ಕೈಕೊಟ್ಟ || ೧೪

ಹೇಸಿ ಕೈಬಿಡ ತಾಯಿ, ಸೋಸಿ ನೋಡೀ ಮಾತ
ಮೂಸಿ ಹೊಲಸುಂಬು ಮನಸೇನ | ಕೊಮರಾಮ
ಹೇಸಿ ಕೈಕೊಸರಿ ಹೊರಹೋದ || ೧೫

ಅರಸ ಹೋದವ ಬರಲಿ, ಹರಲೀಯ ನಾ ಕೊಡುವೆ
ಅರಚಣಕ ರಾಮ ತಲೆಹೊಡಿಸಿ | ಹಾಕಿಸುವ
ಹರಕೆ ನಾ ಹೊತ್ತೆ ದೇವರಿಗೆ || ೧೬

ಕುಣಕಾಲಿ ರತ್ನಾಳಿ, ಕುಣಸಿಟ್ಟು ಮನಗ್ಯಾಳೊ
ಎಣಿಸುವರ್ಯಾರು ಹೆಣ್ಣೆದೆಯ | ಹೆಣ್ಮುಂದ
ಕುಣದಾಡಿ ಹೋದ ಮಾದೇವ || ೧೭

ತಣಿದು ಬ್ಯಾಟಿಯನಾಡಿ, ದಣಿದು ಕಂಪಿಲರಾಯ
ಮನೆಹೊಕ್ಕು ಕಂಡ ಗಜಬಿಜಿಯ | ರತ್ನಾಲಿ
ಕೆಣಕಿ ನುಡಿಸಿದರು ಸುಮ್ಮಿರಲು || ೧೮

ಮನದ ಮೋಹದ ಗಿಣಿಯೆ, ಗಣಿಸದಲೆ ಮಾತಾಡ
ಮನನೊಂದ ಕಾರಣವ ನನಗ್ಹೇಳ | ರತ್ನಾಲಿ
ಚಣದಾಗ ಹೊಡೆವೆ ಹಣಕರನ || ೧೯

ನಮಿಸಿದೆನು ಕೇಳದಲೆ, ಕೊಮರಾಮ ಕೈಹಿಡಿದ
ಧುಮಕೀಯ ಮಾಡಿ ಕಾಮಿಸಿದ | ರಕ್ಕಸನ
ಗಮನಿಸ್ದೆ ಕರೆಸಿ ತಲೆಹೊಡಿಸು || ೨೦

ಕಾದ ಕಂಪಿಲರಾಯ, ಭೇದವೇನರಿಯದಲೆ
ಛೇದಿಸಲು ಸಿರವ ಹೇಳಿಸಿದ | ಮಗರಾಮ
ಸಾದು ಶಿವನೆಂದು ತಲೆಗೊಟ್ಟ || ೨೧

ಹರಲೀಯ ರತ್ನಾಲಿ, ಹೊರಿಸಿ ಮಂಚಕ ಮಲಗಿ
ಹರಿಯಾಲಿ ಅತ್ತು ಬೋರಾಡಿ | ಕೂಗ್ಯಾಳೊ
ವರ ಮಂತ್ರಿ ಬೈಚು ತಿಳಿಹೇಳಿ || ೨೨

ಹರಲೀಯ ಕೊಡಲಾರೆ, ಕರನಾಟ ಕಂದಗ
ವರ ಬೊಲ್ಲ ತಂದ ಕೊಮರಾಗ | ರಣದಾಗ
ತುರುಕರ ಗೆದ್ದ ವೀರಗ || ೨೩
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...