Home / ಕವನ / ಕವಿತೆ / ಕರ್ನಾಟಕ ಕ೦ದ (ಕುಮಾರ ರಾಮ)

ಕರ್ನಾಟಕ ಕ೦ದ (ಕುಮಾರ ರಾಮ)

ಹರಲೀಯ ಕೊಡಲಾರೆ |
ಕರನಾಟ ಕಂದಽಗ ||ಪ||

ಹರಲೀಯ ಕೊಡಲಾರೆ, ಕರನಾಟ ಕಂದಗ
ವರಬೊಲ್ಲ ತಂದ ಕೊಮರಾಗ | ಹ | ರಣದಾಗ
ತುರಕರ ಗೆದ್ದ ವೀರಾಗ | ಹ | ೧

ಕಥೆಯ ಕೇಳಿರಿ ಜನರೆ, ಮತಿಯಿಟ್ಟು ತೂಗುತಲಿ
ಸುತಗ ಮನಸಿಟ್ಟ ಕಳಲಯುಗದ | ಮಲತಾಯಿ
ಬತವ ಹಾಡೇವ ನಿಜಗತೆಯ || ೨

ಹಿರಿಯರಸಿ ಹರಿಯಾಲಿ, ಕಿರಿಯರಸಿ ರತ್ನಾಲಿ
ಅರಸ ಕಂಪಿಲ ರಾಯನಿಗೆ | ಕೊಮರಾಮ
ಆರಸ ಮಗನಾದ ಹೆಸರಾತು || ೩

ಅರಮನೆ ಕೊಮರಾಮ, ಮರೆಯೂವ ರೂಪೇನ
ಅರಸಿ ರತ್ನಾಲಿ ಮನಸೋತ | ಮನದಾಗ
ಮರಗ್ಯಾಳ ರಾಮ ದೊರೆಯದಕ || ೪

ಅರಸ ಕಂಪಿಲರಾಯ, ಸರಸ ಬ್ಯಾಟಿಗೆ ಹೋದ
ಅರಸಿ ರತ್ನಾಲಿ ಮನಿಯಾಗ | ಮೋಹಿಸಿದ
ಎರಕ ಕೊಮರಾಮ ಎದಿಯಾಗ || ೫

ಅಂಗಳದ ಬೈಲಾಗ, ಜಂಗಿ ಚಂಡಿನ ಆಟ
ದಂಗ ಬಡಿಸ್ಯಾನ ಕೊಮರಾಮ | ರತ್ನಾಲಿ
ಕಂಗೆಟ್ಟು ಸೋತು ನೋಡ್ಯಾಳ || ೬

ಮೇಲ ಮಾಳಿಗಿ ಮ್ಯಾಲ, ನೀಳ ದಿಟ್ಟಿಯ ಬಿಟ್ಟು
ಹೋಳಿಯಾಡ್ಯಾಳ ಮೈಮರೆತು | ರತ್ನಾಲಿ
ಸೀಳಿ ಕೊಮರಾಮ ಎದೆಹೊಕ್ಕು || ೭

ಸಮಯ ಕಾಯುವ ಕಳ್ಳ, ತಮವ ದೊರಕಿಸಿದ್ಹಾಂಗ
ಕೊಮರಾಮ ಜೆಂಡ ಆಡುದಕ | ವುಟಿವುಟಿದು
ಚಮಕಿಸಿ ಚೆಂಡು ಒಳಮನಿಗೆ || ೮

ಚೆಂಡು ಬೀಳುತ ನೋಡಿ, ಚೆಂಡಿ ರತ್ನಾಲಿ ಮುಚ್ಚಿ
ಲಂಡಾಗಿ ಚೆಂಡ ಕೊಡಲಿಲ್ಲ | ರಾಮನಿಗೆ
ಚೆಂಡ ತರಲಾಕ ಕಳಿಸ್ಯಾರ || ೯

ರತ್ನಾಲಿ ಹಡದವ್ವ, ಚಿತ್ತರದ ಕೊಡಚೆಂಡ
ಕತ್ತಲಾಗೂದ ಆಡುದಕ | ಅರಮನೆಯ
ಹೆತ್ತಾಯಿ ಹಾದಿ ನೋಡ್ಯಾಳ || ೧೦

ಕಂಡು ರಾಮನ ರೂಪ, ಚೆಂಡಿ ರತ್ನಾಲಿ ಸೋತು
ಹಿಂಡೊ ಕೊಮರಾಮ ಕಾಮೂಟೊ | ಕೂಡಾಡಿ
ಉಂಡು ಹಿಂಗೀಸೊ ಮನತಾಪೊ || ೧೧

ಕಾಮನೀ ಕೊಮರಾಮ, ಕಾಮಿಸಿದೆ ನಾನೋಡಿ
ಕಾಮಾಟ ಕೂಡಿ ನೀನಾಡೊ | ಮನದೊರೆಯೆ
ಪ್ರೇಮ ನಿನ ಮ್ಯಾಲೆ ಕೈಮುಗಿದೆ || ೧೨

ತಾಯೆ,! ತಂದೆಯ ಸತಿಯೆ, ನಾಯಿ ಮಾಡುವ ಕೆಲಸ
ಮಾಯೆ ನಿನಗ್ಯಾಕ ನನಮ್ಯಾಲೆ | ಹಡದವ್ವ
ಹೇಯ ಇಲ್ಲೇನ ನಿನಗೇಟ || ೧೩

ಕಾಯಕಾಮನ ಗುಡಿಯೊ, ಹೇಯಮಾಡಲು ಬೇಡ
ತಾಯೆಂಬ ನುಡಿಯು ಬೇಡೆನಗೊ | ಕೊಮರಾಮ
ಬಾಯೆನಗ ಕಾಮ ಕೈಕೊಟ್ಟ || ೧೪

ಹೇಸಿ ಕೈಬಿಡ ತಾಯಿ, ಸೋಸಿ ನೋಡೀ ಮಾತ
ಮೂಸಿ ಹೊಲಸುಂಬು ಮನಸೇನ | ಕೊಮರಾಮ
ಹೇಸಿ ಕೈಕೊಸರಿ ಹೊರಹೋದ || ೧೫

ಅರಸ ಹೋದವ ಬರಲಿ, ಹರಲೀಯ ನಾ ಕೊಡುವೆ
ಅರಚಣಕ ರಾಮ ತಲೆಹೊಡಿಸಿ | ಹಾಕಿಸುವ
ಹರಕೆ ನಾ ಹೊತ್ತೆ ದೇವರಿಗೆ || ೧೬

ಕುಣಕಾಲಿ ರತ್ನಾಳಿ, ಕುಣಸಿಟ್ಟು ಮನಗ್ಯಾಳೊ
ಎಣಿಸುವರ್ಯಾರು ಹೆಣ್ಣೆದೆಯ | ಹೆಣ್ಮುಂದ
ಕುಣದಾಡಿ ಹೋದ ಮಾದೇವ || ೧೭

ತಣಿದು ಬ್ಯಾಟಿಯನಾಡಿ, ದಣಿದು ಕಂಪಿಲರಾಯ
ಮನೆಹೊಕ್ಕು ಕಂಡ ಗಜಬಿಜಿಯ | ರತ್ನಾಲಿ
ಕೆಣಕಿ ನುಡಿಸಿದರು ಸುಮ್ಮಿರಲು || ೧೮

ಮನದ ಮೋಹದ ಗಿಣಿಯೆ, ಗಣಿಸದಲೆ ಮಾತಾಡ
ಮನನೊಂದ ಕಾರಣವ ನನಗ್ಹೇಳ | ರತ್ನಾಲಿ
ಚಣದಾಗ ಹೊಡೆವೆ ಹಣಕರನ || ೧೯

ನಮಿಸಿದೆನು ಕೇಳದಲೆ, ಕೊಮರಾಮ ಕೈಹಿಡಿದ
ಧುಮಕೀಯ ಮಾಡಿ ಕಾಮಿಸಿದ | ರಕ್ಕಸನ
ಗಮನಿಸ್ದೆ ಕರೆಸಿ ತಲೆಹೊಡಿಸು || ೨೦

ಕಾದ ಕಂಪಿಲರಾಯ, ಭೇದವೇನರಿಯದಲೆ
ಛೇದಿಸಲು ಸಿರವ ಹೇಳಿಸಿದ | ಮಗರಾಮ
ಸಾದು ಶಿವನೆಂದು ತಲೆಗೊಟ್ಟ || ೨೧

ಹರಲೀಯ ರತ್ನಾಲಿ, ಹೊರಿಸಿ ಮಂಚಕ ಮಲಗಿ
ಹರಿಯಾಲಿ ಅತ್ತು ಬೋರಾಡಿ | ಕೂಗ್ಯಾಳೊ
ವರ ಮಂತ್ರಿ ಬೈಚು ತಿಳಿಹೇಳಿ || ೨೨

ಹರಲೀಯ ಕೊಡಲಾರೆ, ಕರನಾಟ ಕಂದಗ
ವರ ಬೊಲ್ಲ ತಂದ ಕೊಮರಾಗ | ರಣದಾಗ
ತುರುಕರ ಗೆದ್ದ ವೀರಗ || ೨೩
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...