Home / ಕವನ / ಕವಿತೆ / ಮಲ್ಲಯ್ಯ

ಮಲ್ಲಯ್ಯ

ವರವೂತವೆಂಬೂದು ಅರವತ್ತು ಗಾವೂದ
ಬರಲಾರೆನಯ್ಯ ಬಹುದೂರ | ನಿನ ಮುಡುವ
ಬರುವವರ ಕೂಡ ಕಳುಹೇನೊ || ೧

ಹರೆಯಾಗ ಏಳುತಲಿ, ಹರನಿನ್ನ ನೆನೆದೇನ
ಪಾತಾಳಗಂಗ್ಯಾಗ ಜಳಕವ | ಮಾಡುವಂಥ
ಮಲ್ಲಿಕಾರ್ಜುನನ ನೆನೆದೇನ || ೨

ಸಂಗಯ್ಯನಿರುವೂದು ಸಾಲ ಹುಣಸಿಯ ಮರ
ಸಂಗಯ್ಯನ ತಮ್ಮ ಗಿರಿಮಲ್ಲ | ಇರವೂದು
ತಿಂಗಳದ ದಾರಿ ವರವೂತ || ೩

ಪರವುತಗ್ಹೋಗಬೇಕಂತ, ವರಸಿ ತಯಾರ ಮಾಡಿ
ಬೆರಿಸ್ಯಾಳ ಬ್ಯಾಳಿ ನೆನಗಡಲಿ | ಪರವುತದ
ವರಸಿಗ್ಹಂಚಾಳ ಪನಿವಾರ || ೪

ಪಲ್ಲಕ್ಕಿ ಕೊಟ್ಟರ ಮಲ್ಲಯ್ಯ ಒಲ್ಲೆಂದ
ಮಲ್ಲನೆಂಬೂವ ಮರಿಗುದರಿ | ಕೊಟ್ಟರ
ಮೆಲ್ಲಕ ಮಟವ ನಿಳಿದಾನ || ೫

ಪರವೂತ ಗಿರಿಮ್ಯಾಲೆ ವಂಚಾಳ ಮರಹುಟ್ಟಿ
ಪಾತಳಕ ಬೇರ ಇಳಿದಾವ | ಆ ಬೇರು
ಬೋರಮಗ ನೆರಳ ಗವಿದಾವ || ೬

ಪರವೂತ ಗಿರಿಮ್ಯಾಲೆ ಅರಿದೊಂದು ಕಂಡೇನೊ
ಕರಿಯಗಂಡ್ಯಾಳಿ ಮುಂದ್ಹೂಡಿ | ಬಿತ್ಯಾರ
ಮಲ್ಲಯ್ಯ ಮುಡಿವ ದವನವ || ೭

ಪುಂಡ ಪರವುತಮಲ್ಲ ಗಂಡಮಗನ ಕೊಡು
ಚೆಂಡೂವಿನಂತ ಸೊಸೆದೇರಿಗೆ | ಕೊಟ್ಟಾರ
ಪುಂಡ ನಿನ ಗಿರಿಗೆ ಬರುವೆನು || ೮

ಚಿಂತೆ ಬಿಡಿಸೊ ನನ್ನ ಕಾಂತಿವರವುತಮಲ್ಲ
ಚಿಂತ್ಹೋಗಿ ನನಗ ಸೌಭಾಗ್ಯ | ಕೊಟ್ಟಾರ
ಕಂಬಿಗೆ ಮುತ್ತ ಬಿಗಿಸೇನೊ || ೯

ಮಲ್ಲಯ್ಯಗ್ಹೋದವರು ನಿಲ್ಲದಲಿ ಬಾರರ
ಅಲ್ಲಿ ರಾಚೋಟಿ ಶರಬಾಗ || ಹೋದವರು
ಪಲ್ಲೇವ ಬಿತ್ತಿ ಬೆಳೆದಾರ || ೧೦

ಕಂಬಿಯ ಹೊತ್ತಣ್ಣ ಇಂಬಾಗಿ ಹಾಯಣ್ಣ
ಕಂಬಿ ಕಂಬಿಗೆ ಕದಲ್ಯಾವ || ನಮನಿಮಗ
ಡಂಬಿ ತಾಗ್ಯಾವೊ ಗಿರಿಯಾಗೊ || ೧೧

ಕಂಬಿಯ ಹೊತ್ತಣ್ಣ ಕಂಬ ಕಾವಡಿ ಜೋಕೆ
ಅನಗಾಲ ಹಾದಿ ಅವಜೋಕೆ || ಕಂಬ್ಯಯ್ಯ
ಗಿರಿಯಿಳಿಯುಮುಂದ ಜೀವ್‌ಜೋಕೆ || ೧೨

ಕಂಬಿ ಹೊತ್ತಣ್ಣನ ತಂಗೇನು ಉಟ್ಟಾಳ
ಲಿಂಬಿ ಪಪ್ಪಳ ಜರತಾರೋ || ಉಟಗೊಂಡು
ಕಂಬಿಗಾರುತಿ ಬೆಳಗ್ಯಾಳೊ || ೧೩
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...