Home / ಕವನ / ಕವಿತೆ / ಅಂಧೇರಿ ನಗರಿ

ಅಂಧೇರಿ ನಗರಿ

ಎಡೆಬಿಡದೇ ಸುರಿದ ಮಳೆಗೆ
ತತ್ತರಿಸಿದ ಮುಂಬೈ ನಗರಿ
ಚೇತರಿಸಿ ಉಸಿರಾಡುತ್ತಿದ್ದಂತೆಯೇ
ಒಂದರ ಹಿಂದೊಂದರಂತೆ
ಸರಣಿ ಬಾಂಬುಗಳ ಸ್ಪೋಟ
ದುರಂತಗಳ ಮಧ್ಯದಲ್ಲಿಯೇ
ಎದ್ದು ನಿಲ್ಲುತ್ತದೆ ಮುಂಬೈನಗರಿ
ಪಿನಿಕ್ಸ್ ಹಕ್ಕಿಯ ಸಾವಿನಂತೆ
ಮತ್ತೆ ಮತ್ತೆ ಸತ್ತು ಬದುಕುತ್ತದೆ
ಮಾಯಾ ನಗರಿ.

ಹಲವಾರು ಜನಾಂಗಗಳು, ಭಾಷೆಗಳು
ಸೌಹಾರ್ದತೆಯಿಂದ ಬದುಕಿವೆಯಿಲ್ಲಿ
ಕಂಡಿವೆ ಬಿನ್ನತೆಗಳ ಮಧ್ಯೆ ಏಕತೆ
ವಾಣಿಜ್ಯ ನಗರಿಯ ಗರ್ಭದಲ್ಲಿಯೇ
ದುರಂತಗಳ ಅಂಧೇರಿ ನಗರಿ
ಕತ್ತಲೆಯಲ್ಲೂ ಝಾಗಝಾಗಿಸುತ್ತದೆ
ಈ ಮಾಯಾ ನಗರಿ ಮಲಗುವುದೇ ಇಲ್ಲ
ಒತ್ತಡಗಳಲ್ಲಿಯೇ ಬದುಕುತ್ತದೆ.

ಥಳುಕು ಬಳುಕಿನ ಬಾಲಿವುಡ್
ತಾರೆಗಳ ಲೋಕ ಇಲ್ಲಿಯೇ ಇದೆ:
ಭೂಗತ ಜಗತ್ತು ಹೆಣೆದ
ಸಾವಿನ ಸುಳಿಗಳೂ ಇಲ್ಲಿಯೇ ಇವೆ.
ದುರಂತ, ತಲ್ಲಣಗಳ ಮರುಕ್ಷಣವೇ
ಬದುಕು ಚಿಗಿಯುತ್ತದೆ ಇಲ್ಲಿ
ವಿಚಲಿತವಾಗದೆಂದೂ ಸ್ಪೋಟಗಳಿಗೆ
ಎದೆ ನಡುಗಿಸುವ ಶಬ್ದಕ್ಕೂ ಹೆದರದೇ
ಜನಜಂಗುಳಿಯ ಹೊತ್ತು ಮುನ್ನಡೆವ
ಲೋಕಲ್ ಟ್ರೇನುಗಳು ಸಾಲು ಸಾಲು
ಒಂದು ಕ್ಷಣ ಗಕ್ಕನೆ ನಿಂತರೆ ಟ್ರೇನು
ಬದುಕು ಸ್ಥಬ್ಧವಾಗುವುದು ಇಲ್ಲಿ.
ಸಾವಿನ ಕರಿನೆರಳುಗಳ ದಾಟಿದರೆ
ಸ್ಫೋಟದ ಶಬ್ದಕ್ಕೆ ಹರಿದ ಕಿವಿಪಟಲ
ಸಾವು ನೋವಿನ ಆರ್ತನಾದ.
ಭೂಗತ ಉಗ್ರರ ಅಟ್ಟಹಾಸ
ಸರಣಿ ಬಾಂಬುಗಳ ಸ್ಫೋಟ
ಯಾವ ಸಾಧನೆಗಾಗಿ?
ಕೂಡಿ ಬಾಳಿದ ಮುಂಬೈಗೆ
ಅನಾದಿಕಾಲದ ಇತಿಹಾಸವಿದೆ.
ಮಾನವೀಯತೆಯ ಉನ್ನತ ಗುಣವಿದೆ.
ಹಂತಕನಿಗೆ ದೇವರಿಲ್ಲ, ಧರ್ಮಗಳಿಲ್ಲ
ಹಿಂಸೆಯ ಆಯುಷ್ಯವೂ ಅತ್ಯಲ್ಪ.
ಕೊಲ್ಲುವ ಹಂತಕನಿಗೂ ಸಾವು ನಿಶ್ಚಿತ.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...