Home / ಕವನ / ಕವಿತೆ / ಅಂಧೇರಿ ನಗರಿ

ಅಂಧೇರಿ ನಗರಿ

ಎಡೆಬಿಡದೇ ಸುರಿದ ಮಳೆಗೆ
ತತ್ತರಿಸಿದ ಮುಂಬೈ ನಗರಿ
ಚೇತರಿಸಿ ಉಸಿರಾಡುತ್ತಿದ್ದಂತೆಯೇ
ಒಂದರ ಹಿಂದೊಂದರಂತೆ
ಸರಣಿ ಬಾಂಬುಗಳ ಸ್ಪೋಟ
ದುರಂತಗಳ ಮಧ್ಯದಲ್ಲಿಯೇ
ಎದ್ದು ನಿಲ್ಲುತ್ತದೆ ಮುಂಬೈನಗರಿ
ಪಿನಿಕ್ಸ್ ಹಕ್ಕಿಯ ಸಾವಿನಂತೆ
ಮತ್ತೆ ಮತ್ತೆ ಸತ್ತು ಬದುಕುತ್ತದೆ
ಮಾಯಾ ನಗರಿ.

ಹಲವಾರು ಜನಾಂಗಗಳು, ಭಾಷೆಗಳು
ಸೌಹಾರ್ದತೆಯಿಂದ ಬದುಕಿವೆಯಿಲ್ಲಿ
ಕಂಡಿವೆ ಬಿನ್ನತೆಗಳ ಮಧ್ಯೆ ಏಕತೆ
ವಾಣಿಜ್ಯ ನಗರಿಯ ಗರ್ಭದಲ್ಲಿಯೇ
ದುರಂತಗಳ ಅಂಧೇರಿ ನಗರಿ
ಕತ್ತಲೆಯಲ್ಲೂ ಝಾಗಝಾಗಿಸುತ್ತದೆ
ಈ ಮಾಯಾ ನಗರಿ ಮಲಗುವುದೇ ಇಲ್ಲ
ಒತ್ತಡಗಳಲ್ಲಿಯೇ ಬದುಕುತ್ತದೆ.

ಥಳುಕು ಬಳುಕಿನ ಬಾಲಿವುಡ್
ತಾರೆಗಳ ಲೋಕ ಇಲ್ಲಿಯೇ ಇದೆ:
ಭೂಗತ ಜಗತ್ತು ಹೆಣೆದ
ಸಾವಿನ ಸುಳಿಗಳೂ ಇಲ್ಲಿಯೇ ಇವೆ.
ದುರಂತ, ತಲ್ಲಣಗಳ ಮರುಕ್ಷಣವೇ
ಬದುಕು ಚಿಗಿಯುತ್ತದೆ ಇಲ್ಲಿ
ವಿಚಲಿತವಾಗದೆಂದೂ ಸ್ಪೋಟಗಳಿಗೆ
ಎದೆ ನಡುಗಿಸುವ ಶಬ್ದಕ್ಕೂ ಹೆದರದೇ
ಜನಜಂಗುಳಿಯ ಹೊತ್ತು ಮುನ್ನಡೆವ
ಲೋಕಲ್ ಟ್ರೇನುಗಳು ಸಾಲು ಸಾಲು
ಒಂದು ಕ್ಷಣ ಗಕ್ಕನೆ ನಿಂತರೆ ಟ್ರೇನು
ಬದುಕು ಸ್ಥಬ್ಧವಾಗುವುದು ಇಲ್ಲಿ.
ಸಾವಿನ ಕರಿನೆರಳುಗಳ ದಾಟಿದರೆ
ಸ್ಫೋಟದ ಶಬ್ದಕ್ಕೆ ಹರಿದ ಕಿವಿಪಟಲ
ಸಾವು ನೋವಿನ ಆರ್ತನಾದ.
ಭೂಗತ ಉಗ್ರರ ಅಟ್ಟಹಾಸ
ಸರಣಿ ಬಾಂಬುಗಳ ಸ್ಫೋಟ
ಯಾವ ಸಾಧನೆಗಾಗಿ?
ಕೂಡಿ ಬಾಳಿದ ಮುಂಬೈಗೆ
ಅನಾದಿಕಾಲದ ಇತಿಹಾಸವಿದೆ.
ಮಾನವೀಯತೆಯ ಉನ್ನತ ಗುಣವಿದೆ.
ಹಂತಕನಿಗೆ ದೇವರಿಲ್ಲ, ಧರ್ಮಗಳಿಲ್ಲ
ಹಿಂಸೆಯ ಆಯುಷ್ಯವೂ ಅತ್ಯಲ್ಪ.
ಕೊಲ್ಲುವ ಹಂತಕನಿಗೂ ಸಾವು ನಿಶ್ಚಿತ.
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...