Home / ಕವನ / ಕವಿತೆ / ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ ಬಹಳ ಬೃಹತ್ತಾಗಿ
ಕೆಲವು ಮಾಲಿಯ ಹಾಗೆ ಸಂಕ್ಷಿಪ್ತ

ದೊಡ್ಡ ದೇಶದ ಜನ ಒಬ್ಬರಿಗೊಬ್ಬರು ಅಪರಿಚಿತ
ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ
ತಲುಪಲು ದಿನಗಳು ವಾರಗಳು ಮಾಸಗಳು ಬೇಕು

ಪ್ರತಿ ಯಾತ್ರೆಯೂ ಒಂದು ಮಹಾಯಾತ್ರೆ
ಅಥವಾ ಶಿಕ್ಷೆ
ಮೋಸ್ಕೋದಿಂದ ಸೈಬೀರಿಯಾಕ್ಕೆ
ಕವಿಗಳು ಹೋದರು ಕ್ರಾಂತಿಕಾರಿಗಳು ಹೋದರು

ಚಿಕ್ಕ ದೇಶಗಳಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು
ಸುದ್ದಿಯೆಂದರೆ ಅದು ಬಾವಿಕಟ್ಟೆಯಲಿ ನೆರೆಕರೆಯ ಪಿಸುಮಾತು

ಸಾಗುವುದಕ್ಕೆ ಆರಂಭ ಅಂತ್ಯವೆಂಬುದಿಲ್ಲ
ಅದು ಗದ್ದೆ ಸುತ್ತಿದ ಹಾಗೆ ನಮ್ಮ ಹಳ್ಳಿಯಲ್ಲಿ ದಿನಾ

ದೊಡ್ಡ ದೇಶಗಳಲ್ಲಿ ಏಕ ಕಾಲಕ್ಕೆ ಒಂದೆಡೆ ಬೀಳುವುದು ಹಿಮ
ಇನ್ನೊಂದೆಡೆ ಬಿಸಿಲ ಝಳ
ಬೆಟ್ಟದ ತಪ್ಪಲಲ್ಲಿ ಕುರಿಗಳ ಹಿಂಡು

ಕರಾವಳಿಯಲ್ಲಿ ಬೆಸ್ತರ ದಂಡು
ಅವರ ಭಾಷೆಗಳು ಬೇರೆ ಅರ್ಥವಾಗುವುದು ಸ್ವಲ್ಪ ಸ್ವಲ್ಪ

ಚಿಕ್ಕ ದೇಶಗಳಲ್ಲಿ ಹವೆಯೊಂದೇ ಭಾಷೆಯೊಂದೇ
ಉಡುತೊಡುವ ರೀತಿ ಒಂದೇ ಊಟ ಒಂದೇ

ಚರಿತ್ರೆ ಹಣ್ಣು ಕತ್ತರಿಸುವಂತೆ ಕತ್ತರಿಸಿ ಇಡಲಿಲ್ಲ
ಮಾನವ ಜನಾಂಗವನ್ನು ಒಂದೆ ತಾಟಿನಲ್ಲಿ ನೀಟಾಗಿ

ನದಿಯೂ ಹರಿಯಲಿಲ್ಲ ನೇರ ಗೆರೆಗಳಲ್ಲಿ ಪರ್ವತಗಳೂ
ಇದ್ದುವು ತಮ್ಮ ಖುಷಿಯಲ್ಲಿ

ಸರಿಪಡಿಸುವ ಎಲ್ಲ ಪ್ರಯತ್ನಗಳೂ ತತ್ತರಿಸಿ ಬೀಳುತ್ತಿವೆ
ಸರಿ ಯಾವುದು ತಪ್ಪು ಯಾವುದು ಎಂದು ಗೊತ್ತಿಲ್ಲದಿರುತ್ತ

ವಲಸೆ ಬಂದ ಹಕ್ಕಿಗಳೇ
ನೀವೇನು ಹೇಳುವಿರಿ ಎಷ್ಟು ದೇಶಗಳ ಕಂಡವರು
ಮಾತಾಡದೆ ಇರುವಿರಿ
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...