Home / ಕವನ / ಕವಿತೆ / ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ
ಮುತ್ತಿನ ಕತೆಯ
ಏನೆಂದು ಹೇಳಲಿ ಅದ
ಕಿತ್ತವನ ಕತೆಯ

ಬೃಂದಾವನ ತುಂಬ ಸುರಿಯಿತು ಮುತ್ತು
ಅದು ಸುರಿದರು ಇನ್ನೂ ಮುಗಿಯದೆ ಇತ್ತು

ಅತ್ತು ಕೇಳಿದ ಕೃಷ್ಣ
ಮತ್ತೂ ಕೇಳಿದ ಕೃಷ್ಣ
ಒತ್ತಾಯಿಸಿ ಕೇಳಿದ
ಸತ್ತಾಯಿಸಿ ಕೇಳಿದ
ಒಬ್ಬೊಬ್ಬ ಗೋಪಿಕೆಯ
ಹತ್ತು ಸಲ ಕೇಳಿದ
ಏನೆಂದು ಹೇಳಲಿ ಅಕ್ಕ
ಈ ಮುತ್ತಿನ ಕತೆಯ

ಒಬ್ಬೊಬ್ಬಳಿಂದಲು
ಒಂದೊಂದು ಮುತ್ತು
ದಿನವು ಬೇಡಿದನೆ
ಇನ್ನೊಂದು ಮುತ್ತು

ತುಟಿಗೊಂದು ಮುತ್ತು
ಕೆನ್ನೆಗೊಂದ್ಮುತ್ತು
ಹಣೆಗೊಂದು ಮುತ್ತು
ಹುಬ್ಬಿಗೆರಡಿತ್ತು

ನಗುತಿದ್ದರೊಂದು ಮುತ್ತು
ನಾಚುತಿದ್ದರು ಒಂದು ಮುತ್ತು
ಸುಮ್ಮನೆ ಹೋಗುತಿದ್ದರೆ ಮುತ್ತು
ಬಿಮ್ಮನೆ ಇದ್ದರೆ ಮುತ್ತೇ ಮುತ್ತು

ಮರೆಗಿದ್ದರೊಂದು ಮುತ್ತು
ಮಾತಾಡುತಿದ್ದರೆರಡು ಮುತ್ತು
ಹಾಡುತಿದ್ದರೆ ಹತ್ತು ಮುತ್ತು
ಮೌನವಾಗಿದ್ದರೆ ಮುನ್ನೂರು ಮುತ್ತು

ಹಾಲು ಕರೆಯುತ್ತಿದ್ದರೆ
ಕೇಳಿದಷ್ಟು ಮುತ್ತು
ನೀರು ತರುತಿದ್ದರೆ
ನೂರೊಂದು ಮುತ್ತು
ಐನೀರಿಗೈನೂರು ಮುತ್ತು
ರಂಗಿನಾಟಕೆ ಸಾವಿರ ಮುತ್ತು

ನಿನ್ನೆ ಬೇಕೆಂದನೆ
ಈ ದಿನ ಬೇಕೆಂದನೆ
ಈಗ ಬೇಕೆಂದನೆ
ಆಗ ಬೇಕೆಂದನೆ
ಯಾವತ್ತಿಗೂ ಅದು
ಸಾಕಾಗುವುದೆಂದನೆ
ಯಾವತ್ತಿಗೂ ಅದು
ಸಾಕಾಗದೆಂದನೆ

ಮುತ್ತು ಕೊಟ್ಟೇ ದಾರಿ
ಹೋಗಬೇಕೆಂದನೆ
ಶುದ್ಧ ಮುತ್ತೇ
ಆಗಬೇಕೆಂದನೆ
ಇದ್ದಷ್ಟೂ ಅವು
ಸಾಲದೆಂದನೆ
ಉದ್ದ ಮುತ್ತುಗಳೇ
ಒಳ್ಳೆಯದೆಂದನೆ
ಕದ್ದಾದರೂ ಅವ
ಕೊಡಬೇಕೆಂದನೆ

ಕೊಟ್ಟುದನೆಲ್ಲವ
ಚೆಲ್ಲಾಡಿ ಕೇಳಿದನೆ
ಕಳೆದುಹೋದುವು ಎಂದು
ಗೋಳಾಡಿ ಕೇಳಿದನೆ
ಆಡಿ ಕೇಳಿದನೆ ಕುಣಿ-
ದಾಡಿ ಕೇಳಿದನೆ
ಎಲ್ಲೆಂದರಲ್ಲಿ ಕಾಡಿ ಕೇಳಿದನೆ
ನಗಾಡಿ ಕೇಳಿದನೆ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ