Home / ಕವನ / ಕವಿತೆ / ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ

ಏನೆಂದು ಹೇಳಲಿ ಅಕ್ಕ
ಮುತ್ತಿನ ಕತೆಯ
ಏನೆಂದು ಹೇಳಲಿ ಅದ
ಕಿತ್ತವನ ಕತೆಯ

ಬೃಂದಾವನ ತುಂಬ ಸುರಿಯಿತು ಮುತ್ತು
ಅದು ಸುರಿದರು ಇನ್ನೂ ಮುಗಿಯದೆ ಇತ್ತು

ಅತ್ತು ಕೇಳಿದ ಕೃಷ್ಣ
ಮತ್ತೂ ಕೇಳಿದ ಕೃಷ್ಣ
ಒತ್ತಾಯಿಸಿ ಕೇಳಿದ
ಸತ್ತಾಯಿಸಿ ಕೇಳಿದ
ಒಬ್ಬೊಬ್ಬ ಗೋಪಿಕೆಯ
ಹತ್ತು ಸಲ ಕೇಳಿದ
ಏನೆಂದು ಹೇಳಲಿ ಅಕ್ಕ
ಈ ಮುತ್ತಿನ ಕತೆಯ

ಒಬ್ಬೊಬ್ಬಳಿಂದಲು
ಒಂದೊಂದು ಮುತ್ತು
ದಿನವು ಬೇಡಿದನೆ
ಇನ್ನೊಂದು ಮುತ್ತು

ತುಟಿಗೊಂದು ಮುತ್ತು
ಕೆನ್ನೆಗೊಂದ್ಮುತ್ತು
ಹಣೆಗೊಂದು ಮುತ್ತು
ಹುಬ್ಬಿಗೆರಡಿತ್ತು

ನಗುತಿದ್ದರೊಂದು ಮುತ್ತು
ನಾಚುತಿದ್ದರು ಒಂದು ಮುತ್ತು
ಸುಮ್ಮನೆ ಹೋಗುತಿದ್ದರೆ ಮುತ್ತು
ಬಿಮ್ಮನೆ ಇದ್ದರೆ ಮುತ್ತೇ ಮುತ್ತು

ಮರೆಗಿದ್ದರೊಂದು ಮುತ್ತು
ಮಾತಾಡುತಿದ್ದರೆರಡು ಮುತ್ತು
ಹಾಡುತಿದ್ದರೆ ಹತ್ತು ಮುತ್ತು
ಮೌನವಾಗಿದ್ದರೆ ಮುನ್ನೂರು ಮುತ್ತು

ಹಾಲು ಕರೆಯುತ್ತಿದ್ದರೆ
ಕೇಳಿದಷ್ಟು ಮುತ್ತು
ನೀರು ತರುತಿದ್ದರೆ
ನೂರೊಂದು ಮುತ್ತು
ಐನೀರಿಗೈನೂರು ಮುತ್ತು
ರಂಗಿನಾಟಕೆ ಸಾವಿರ ಮುತ್ತು

ನಿನ್ನೆ ಬೇಕೆಂದನೆ
ಈ ದಿನ ಬೇಕೆಂದನೆ
ಈಗ ಬೇಕೆಂದನೆ
ಆಗ ಬೇಕೆಂದನೆ
ಯಾವತ್ತಿಗೂ ಅದು
ಸಾಕಾಗುವುದೆಂದನೆ
ಯಾವತ್ತಿಗೂ ಅದು
ಸಾಕಾಗದೆಂದನೆ

ಮುತ್ತು ಕೊಟ್ಟೇ ದಾರಿ
ಹೋಗಬೇಕೆಂದನೆ
ಶುದ್ಧ ಮುತ್ತೇ
ಆಗಬೇಕೆಂದನೆ
ಇದ್ದಷ್ಟೂ ಅವು
ಸಾಲದೆಂದನೆ
ಉದ್ದ ಮುತ್ತುಗಳೇ
ಒಳ್ಳೆಯದೆಂದನೆ
ಕದ್ದಾದರೂ ಅವ
ಕೊಡಬೇಕೆಂದನೆ

ಕೊಟ್ಟುದನೆಲ್ಲವ
ಚೆಲ್ಲಾಡಿ ಕೇಳಿದನೆ
ಕಳೆದುಹೋದುವು ಎಂದು
ಗೋಳಾಡಿ ಕೇಳಿದನೆ
ಆಡಿ ಕೇಳಿದನೆ ಕುಣಿ-
ದಾಡಿ ಕೇಳಿದನೆ
ಎಲ್ಲೆಂದರಲ್ಲಿ ಕಾಡಿ ಕೇಳಿದನೆ
ನಗಾಡಿ ಕೇಳಿದನೆ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...