Home / ಕವನ / ಕವಿತೆ / ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆಯಾ
ಮುಡಿದು ಕಣ್ಸನ್ನೆಯಾ
ನೋಟದಲಿ ಪಿಸು ಮಾತಿನಾ
ಮೋಡಿಯಲಿ ಚಲುವ ರಾಶಿಯ
ಬೀರುತ ಮನ ಸೆಳೆದಾ ನಲ್ಲೆಽಽಽಽ
ಕಾದಿರಲು ನಲ್ಲನಿಗಾಗಿ
ಬೆಳದಿಂಗಳು ಮೂಡಿತು
ಹೊನ್ನ ಮಳೆ ಸುರಿಯಿತು
ಗರಿಗೆದರಿ ಕುಣಿದಾ ನವಿಲು
ಅವಳ ನೋಟಕ್ಕೆ ನಾಚಿತ್ತುಽಽಽಽ

ಹೆಣ್ಣು-
ಬೆಳದಿಂಗಳ ಬಾಳ ಹುಣ್ಣಿಮೆಯ
ಮೂಡುವಾಸೆಯಲಿ ತುಂತುರು ತುಂತುರು
ಮಳೆಹನಿಯಲಿ ತನನತಾನನ
ಧರೆಯು ತಣಿಯಿತು ನನ್ನ ಮನದಿ
ನಿನ್ನ ಗಾನಮೌನವಾಗಿ ವಿರಹಿಸಿತು

ಮೂಡಿದಾ ಮಲ್ಲಿಗೆ ದಳಗಳಲಿ
ನಿನ್ನ ನಗೆಯ ಬಿಂಬವನಿರಿಸಿ
ಸುಮವಾಗಿ ಅರಳಿ ದುಂಬಿಯಾಗಿ
ಬಾರದಿರುವೆ ಏಕೋ ನಾ ಕಾಣೆನೆ

ಬಾಳ ದೀವಿಗೆಯ ಜ್ಯೋತಿಯಾಗಿಹೆ
ಮನವ ತುಂಬಿದೆ ಜೊತೆಯಾಗಿ
ನಲಿವ ಆಸೆಯಲಿ ನಿನ್ನ ಕಾಣುವ
ಬಯಕೆ ಹೊಮ್ಮಿದೆ ಏಕೋನಾ ಕಾಣೆನೆ

ತಾಯೆ ಚಾಮುಂಡಿಯೆ ನಮಿಸಿ
ಬೇಡುವೆ ನಲ್ಲ ನಿಲ್ಲದ ಬಾಳು
ಚೆಂದವೇನೆ ಹರಸು ತಾಯೆ
ಕರ ಮುಗಿಯುವೆ ವರುಷಗಳು ಉರುಳಿ
ಹರುಷ ತರಲಿ ನನ್ನ ಬಾಳಲ್ಲಿ

ಗಂಡು-
ನಮ್ಮೂರ ಸೌಧದಲಿ
ನಿಮ್ಮೂರ ಮಂಟಪದಲಿ
ತುಂಬು ತೊಟ್ಟಿಲ ತೂಗೆ
ಬೆಳದಿಂಗಳ ಬಾಲೆಯೆ
ಹಸಿರುಟ್ಟ ಸಿರಿದೇವಿ
ಮಡಿಲ ಮೈ ಸೂರ ಸೊಬಗಲ್ಲಿ
ಪ್ರೇಮದರಸಿಯೆ
ಇಂಚರದಿ ರಸದೌತಣ ನೀಡೆ
ನನ್ನ ನಲ್ಲೆಽಽಽಽ

ಜೊತೆಗೂಡಿ ಹೋಗೋಣ ತಾಯ
ಪಾದಕೆ ಎರೆಗೊಣ ಹಕ್ಕಿಗಳಾಗಿ
ಬಾನಂಚಲಿ ಸೇರೋಣ ನಲಿಯೋಣ
ನನ್ನ ನಲ್ಲೆಽಽಽಽ
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...