Home / ಲೇಖನ / ಇತರೆ / ಮಡಿಕೇರಿಯ ನೆನಪು

ಮಡಿಕೇರಿಯ ನೆನಪು

೧೯೮೩-೧೯೮೪ರಲ್ಲಿ ಮಡಿಕೇರಿಯಲ್ಲಿ ಪ್ರಥಮ ದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದೆ. ಮಡಿಕೇರಿ ನನ್ನ ಅನ್ನ ದೇವರು. ಎಲ್ಲಿದ್ದರು ಹೇಗಿದ್ದರು ಎಂತಿದ್ದರೂ ಮಡಿಕೇರಿ ಮೇಲಿಂದ ಮೇಲೆ ಕಣ್ಣ ಮುಂದೆ ಮೆರವಣಿಗೆ ಹೊರಡುವುದು.

ಪ್ರತಿ ಮಳೆಗಾಲದ ದಿನಮಾನಗಳಲ್ಲಿ ಮಡಿಕೇರಿ ಸವಿಸವಿ ನೆನಪು ತರುವುದು. ಇದು ಅಲ್ಲದೆ ೧೯೯೮-೧೯೯೯ರಲ್ಲಿ ಮಡಿಕೇರಿಯಲ್ಲಿ ಇರುವ ಬಂದು ಹೋಗುವ ೨೦೧೧-೨೦೧೨ರಲ್ಲಿ ಮತ್ತೆ ಮಡಿಕೇರಿಗೆ ಹೋಗಿ ಬರುವ ಸುವರ್‍ಣಾವಕಾಶ ನನಗೆ ಲಭಿಸಿದ್ದು ಸಂತಸ ನವ ಉಲ್ಲಾಸ ಹರ್‍ಷ ತಂದಿತ್ತು.

ಮಡಿಕೇರಿ ಸ್ವರ್‍ಗ ಸೀಮೆ, ಕನ್ನಡ ನಾಡಿನ ಕಾಶ್ಮೀರ, ಭೂ ಕೈಲಾಸ, ಮೇಲಿಂದ ಮೇಲೆ ನೆನಪಾಗುವುದು.

ಅಲ್ಲಿನ ಊಟ, ತಿಂಡಿ, ಅದರಲ್ಲೂ “ಕಕ್ಕಡ ಪದಿನೆಟ್ ಪಾಯಸ” ಸುರುಕುಂಬಾವನ್ನು ಮೀರಿಸುವುದು.

ಕಕ್ಕಡ=ಆಟಿ ತಿಂಗಳು-ಕರ್‍ಕಾಟಕ ತಿಂಗಳು- ಆಟಿ ಸೊಪ್ಪು ಎಂದು ಅರ್‍ಥ. ಈ ಮೂರಡಿ ಹಚ್ಚನೆ ಸೊಪ್ಪಿನ ಗಿಡ ಅಲ್ಲಿನ ಕಾಫಿ ತೋಟಗಳಲ್ಲಿ, ಕಾಡುಮೇಡುಗಳಲ್ಲಿ ಹುಲುಸಾಗಿ ಬೆಳೆಯುವುದು. ಇದು ಔಷಧಿ ಪರಿಮಳಯುಕ್ತ ಸಸ್ಯ. ಇದರಲ್ಲಿ ಸರಿಯಾಗಿ ಮೂರು ವಾರ ಜುಲೈನಲ್ಲಿ ದಿನಕ್ಕೊಂದು ಔಷಧಿ ಗುಣ ಈ ಗಿಡದಲ್ಲಿ ಪ್ರಕೃತಿ ದತ್ತವಾಗಿ ಸೇರುವುದೆಂದೂ…. ಆಗಸ್ಟ್ ಮೊದಲ ವಾರದ ಮೊದಲ ದಿನ ಹಬ್ಬದ ದಿನ ಈ ಸೊಪ್ಪು ಘಮ ಘಮಾ ಪರಿವಾಳ ಬೀರುವುದು. ಇದನ್ನು ಕಿತ್ತು, ಸೋಸಿ ತೊಳೆದು, ಇದರಿಂದ ರಸ ತೆಗೆದು, ಪಾಯಸದಲ್ಲಿ ಸೇರಿಸಿ, ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ, ಸಕ್ಕರೆ ಕಲ್ಲು ಸಕ್ಕರೆ, ಸಿಹಿ ಅಕ್ಕಿ, ಏಲಕ್ಕಿ, ಗಸೆಗಸೆ, ದ್ರಾಕ್ಷಿ, ಗೋಡಂಬಿ, ಪಿಸ್ತ, ಬಾದಾಮಿ ಇತ್ಯಾದಿ ಹಾಕಿ ತಯಾರಿಸಿದ ಪಾಯಸ ಕುಡಿಯಲು ತಿನ್ನಲು ಸೊಗಸಾಗಿರುವುದು.

ಅಂದು- ಮಡಿಕೇರಿಯ ತುಂಬಾ ಹುಗ್ಗಿಯ ಹೊಳೆ ಹರಿಯುವುದು. ಮನೆಮನೆ ಓಣಿ‌ಓಣಿ, ಗಲ್ಲಿಗಲ್ಲಿ, ಬೀದಿಬೀದಿಯೆಲ್ಲ, ಘಮಾಘಮಾ ಹುಗ್ಗಿಯ ಪರಿಮಳ ಬೀರುವುದು. ಮೊದಲೇ ಮಡಿಕೇರಿಯು ಸುವಾಸನೆಯುಕ್ತವಾಗಿರುತ್ತದೆ. ಅಂದು ಇನ್ನೂ ಘಮಿಘಮಿಸುವುದು. ಬರೀ ವಾಸನೆಗೆ ಹೊಟ್ಟೆ ತುಂಬಿ ಮುಖವೆಲ್ಲ ಸಿಹಿಗೆ ಉಜ್ಜಿದಂತಾಗುವುದು!

ಬರೀ ಓದಿದರೆ ಸಾಲದು, ಅದರ ಸವಿಯ ಸವಿದು ತೃಪ್ತಿ ಪಟ್ಟುಕೊಂಡು ಧನ್ಯರಾಗಬೇಕು. ಅದುವೇ ಜೀವನ. ಮಡಿಕೇರಿಯ ವಿಶೇಷವದು.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...