Home / ಕವನ / ಕೋಲಾಟ / ತೇರು ಕೋಲು (ಎತ್ತು ಕಾಯೋ ತಮ್ಮ)

ತೇರು ಕೋಲು (ಎತ್ತು ಕಾಯೋ ತಮ್ಮ)

ಎತ್ತು ಕಾಯೋ ತಮ್ಮ ಮುತ್ತಿನ ಬಿಲ್ಲವನೇ
ಎತ್ತಿಗೇ ನೀರೆಲ್ಲೀ ಕೊಡಿಸಿದಿಯೋಲಾದರೇ
ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ
ಕುಡಿಸಿದಿಯೋಲಾದಾರೆ ಎತ್ತನು
ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೧ ||

ಕೋಣಾ ಕಾಯೋ ತಮ್ಮ ಮುತಿನ್ತ ಬಿಲ್ಲವನೇ
ಕೋಣಗೇ ನೀರೆಲ್ಲಿ ಕುಡಿಸಿದಿಯೋಲಾದರೇ
ದೇವರ ಕೆರೆಯಲ್ಲಿ ಕುಡಿಸೀಯೋ ಕೋಲೇ
ಕೋಣಾ ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೨ ||

ಕುರಿಯ ಕಾಯೋ ತಮ್ಮಾ ಮುತ್ತಿನ ಬಿಲ್ಲವನೇ
ಕುರಿಗೆ ನೀರೆಲ್ಲಿ ಕುಡಿಸಿದಿಯೋಲಾದರೇ
ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ
ಕುರಿಯ ಹೊಡೀರಣ್ಣಾ ಮಾರೀ ಬೈಲಿಗೇ ಕೋಲೇ || ೩ ||

ಕೋಳೀ ಕಾಯೋ ತಮ್ಮ ಮುತ್ತಿನ ಬಿಲ್ಲವನೇ
ಕೋಳೀಗೆ ನೀರೆಲ್ಲಿ ಕುಡಿಸಿದಿಯೋಲಾದರೇ
ದೇವರ ಕೆರಿಯಲ್ಲಿ ಕುಡಿಸೀಯೋ ಕೋಲೇ
ಕೋಳೀ ಹೊಡೀರಣ್ಣಾ ಮಾರೀ ದೇವರಿಗೇ ಕೋಲೇ || ೪ ||

ಹಂದಿ ಕಾಯೋ ತಮ್ಮ ಮುತ್ತಿನ ಬಿಲ್ಲವನೇ
ಹಂದಿಗೇ ನೀರೇಲ್ಲಿ ಕುಡಿಸಿದಿಯೋಲಾದರೇ
ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ
ಹಂದಿ ಹೊಡಿರಣ್ಣಾ ಮಾರೀ ಬಯಲಿಗೇ ಕೋಲೇ || ೫ ||
*****
ಹೇಳಿದವರು: ಮೋಹನ ನಾಗು ಗೌಡ, ಮಂಜುಗುಣಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...