Home / ಕಥೆ / ಕಾದಂಬರಿ / ಸುಭದ್ರೆ – ೬

ಸುಭದ್ರೆ – ೬

ಮಾಧವನು ಕತ್ತಲೆಯಾಗುವುದಕ್ಕೆ ಮುಂಚೆಯೆ ಮನೆಗೆ ಬಂ ದನು. ಸುಭದ್ರೆಯು ಉಪಾಧ್ಯಾಯೆಯ ಮನೆಯಿಂದ ಆಗತಾನೆ ಹೊರಕ್ವೆ ಬರುತ್ತಿದ್ದಳು. ಅವಳು ತಲೆಬಾಗಿಲ ಬಳಿ ಬರುವ ಹೊತ್ತಿಗೆ ಸರಿಯಾಗಿ ಮಾಧವನ್ನು ಎದುರಿಗೆ ಬಂದನು. . ಇವರಬ್ಬರ ನೋಟಗಳೂ ಸಂಧಿಸಿದುವು. ಸುಭದ್ರೆ ಲಜ್ಜೆಯಿಂದ ಕೆಂಪೇರಿದಮುಖ ವುಳ್ಳವಳಾಗಿ ತಲೆಯನ್ನು ತಗ್ಗಿ ಸಿಕೊಂಡು ಹೊರಟು ಹೋದಳು . ಅವಳ ಹೃದಯವು ಅನಿರ್ವಚನೀಯವಾದ ಆನಂದದಿಂದ ಪರಿಪೂ ರ್ಣವಾಗಿದ್ದಿತು.

ಮಾಧವನೂ ಏನೋ ಯೋಚಿಸುತ್ತಾ ಮನೆಯೊಳಕ್ಕೆ ಹೋದನು. . ಗಂಗಾಬಾಯಿ– “ಏನಪ್ಪಾ ಸಮಾಚಾರ ? ಏನೇನು ಕಾರುಬಾರು . ಮಾಡಿಕೊಂಡು . ಬಂದೆ ? ” . ಎಂದು ಕೇಳಿದಳು. ಮಾಧವನು ಅಲ್ಲಿ ನಡೆದ ವೃತ್ತಾಂತವನ್ನೆ ಲ್ಲಾ ಹೇಳಿದನು.

ಗಂಗಾಬಾಯಿ–ಈ ವಿಚಾರದಲ್ಲಿ ನಿನ್ನ ಅಭಿಪ್ರಾಯವೇನು?

ಮಾಧವ– ಅದು ಹಾಗಿರಲಿ, ದಿನ ನಿನ್ನ ಬಳಿ ಕುಳಿ ತುಕೊಂಡು ಅಳುತ್ತಿದ್ದ . ಹುಡುಗಿಗೆ ಯಾವಾಗ ಮದುವೆಯಂತೆ ?

ಗಂಗಾ–ಇನ್ನೇನು ಹತ್ತಿರಕ್ಕೆ ಬಂದಿತು.

ಮಾಧವ– ಅದನ್ನು ತಪ್ಪಿ ಸುವುದಕ್ಕಾಗುವುದಿಲ್ಲವೆ?

ಗಂಗಾ_-ತಪ್ಸಿ ಸಿ ಆಗುವುದೇನು? ಅವಳಿಗಂತೂ ಮದುವೆ ಯಾಗಲೇ ಬೇಕಷ್ಟೆ,

ಮಾಧವ—ಆದರೆ ಮುದುಕನಿಗೆ ಕೊಡುವುದೆ ?

ಗಂಗಾ_–ಮಾಡುವುದೇನು ? ಬೇರೆ ವರನೆಲ್ಲಿ ಸಿಕ್ಕುವನು ?

ಮಾಧವ__ಅಷ್ಟು ಚೆಲುವೆಯಾದ ಹುಡುಗಿಗೆ ವರನು ಸಿಕ್ಕು ವುದಿಲ್ಲವೆ?

ಗಂಗಾ— ಈಗಿನ ಕಾಲದಲ್ಲಿ ವರದಕ್ಷಿಣೆ ಮುಖ್ಯುವಲ್ಲದೆ ರೂಪವಾಗಲಿ, ಗುಣವಾಗಲಿ, ಕುಲೀನತೆಯಾಗಲಿ ಗಣನೆಗೆ ಬರುವುದಿಲ್ಲ.

ಮಾಧವ-ಅವಳಿಗೆ ವರದಕ್ಷಿಣೆಯನ್ನು ವರ ನನ್ನು ಹುಡುಕಿಕೊಡಲಾರೆಯಾ ?

ಗಂಗಾ– (ಮಾಧವನ ಮುಖವನ್ನು ಚೆನ್ನಾ ಗಿ ನೋಡಿ ನಗುತ್ತ) ನೀನು ಮನಸ್ಸುಮಾಡಿದರಾಗುತ್ತದೆ.

ಮಾಧವ__ನಾನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡೇ ಇದ್ದೇನೆ

ಗಂಗಾ–ಏನೆಂದು ?

ಮಾಧವ- ಆ ಹುಡುಗಿಗೆ ನಾನೇ ವರನಾಗುವೆನೆಂದು.

ಗಂಗಾ–ಇದು ಬರಿಯಮಾತು.

ಮಾಧವ __ಎಂದಿಗೂಅಲ್ಲ. ನೀನುಮಾತ್ರ ಈಮದುವೆಯನ್ನು ನಿಲ್ಲಿಸಿದರೆ ಈಶ್ವರಸಾಕ್ಷಿ ಯಾಗಿಯೂ ನಾನು ಅವಳನ್ನ ಲ್ಲದೆಬೇರೊಬ್ಬರನ್ನೂ ಮದುವೆ ಮಾಡಿಕೊಳ್ಳುವುದಿಲ್ಲ.

ಗಂಗಾ_ಹಾಗೆ ಪ್ರತಿಜ್ಞೆ ಮಾಡಬೇಡ. ನಿನ್ನ ಅಂತಸ್ತಿಗೂ ಅವಳ ಅಂತಸ್ತಿಗೂ ಬಲು ದೂರವಿರುವದು, ಅಲ್ಲದೆ ನಿಮ್ಮ ತಂದೆಯವರಅಭಿಪ್ರಾಯವನ್ನು ಕೇಳಬೇಡವೆ

ಮಾಧವ.–ಅವರು ನನಗೆ ಈವಿಚಾರದಲ್ಲಿ ಸ್ವಾತಂತ್ರ್ಯವನ್ನು ಕೊಟ್ಟಿರುವರಲ್ಲ

ಗಂಗಾ_ ಅವರು. ನಿನಗೆ ಅಷ್ಟೊಂದು ಸ್ನಾತಂತ್ರ್ಯವನ್ನು ಕೊಟ್ಟಿಲ್ಲ. ಕುಲಗೋತ್ರ ಮುಂತಾದುವು ಗಳನ್ನು ಅವರು ಒಪ್ಪಬೇಕು.

ಮಾಧವ__ನಾನಂತೂ ಪ್ರತಿಜ್ಞೆ ಮಾಡಿಬಿಟ್ಟೆ. ಇನ್ನು ನನ್ನ ಜೀವವಿರು ವವರಿಗೂ ಅದಕ್ಕೆ ತಪ್ಪಲಾರೆ.

ಗಂಗಾಬಾಯಿಯು ಸುಮ್ಮನಾದಳು. ಅತ್ತ ಸುಭದ್ರೆಯು ಮನೆಯನ್ಪು ಸೇರಿದಮೇಲೆ ಪುಸ್ತಕವನ್ನು ತೆಗೆದುಕೊಂಡು ಓದುವುದಕ್ಕೆ ಕುಳಿತಳು. ಪುಸ್ತಕವನ್ನು ನೋಡಲಿ, ಆಕಾಶವನ್ನು ನೋಡಲಿ,ಗೋಡೆಯನ್ನು ನೋಡಲಿ, ಒಂದೇರೂಪವಾಗಿ ಕಾಣುತ್ತಿದ್ದಿತು. ಎಲ್ಲಿ ನೋಡಿದರೂ ಆಪರಮಸುಂದರವಾದ ಮುಖ!

ಆನಂತರ ಊಟಕ್ಕೆ ಕುಳಿತಾಗ್ಗೆ ರಮಾಬಾಯಿ ಗಂಡನೊಡನೆ “ರಾಮರಾಯರ ಮನೆಯಲ್ಲಿಮಗಳಿಗೆ ಮದುವೆಯಂತೆ, ಕೇಳಿದಿರಾ?“ ಎಂದಳು.

ವಿಶ್ವನಾಥ__-ನನಗೆ ತಿಳಿದಿರಲಿಲ್ಲ ವರನು ಯಾರು ?

ರಮಾಬಾಯಿ-~ ಪುನಹೆ ಶಂಕರರಾಯರಮಗ ನಂತೆ, ಆ ಹುಡುಗನೂ ಇಲ್ಲಿ. ಬಂದು ಗಂಗಾಬಾಯ ಮ್ಮನವರ ಮ ನೆಯಲ್ಲಿಳಿದಿದ್ದಾನಂತೆ.

ವಿಶ್ವ—ಗಂಗಾಬಾಯಿಯ ಅಕ್ಕನನ್ನೆ ಶಂಕರರಾಯರಿಗೆಕೊ ಟ್ಟಿದುದು. ಅದುದರಿಂದ ಅಲ್ಲಿಗೆ ಬಂದಿರಬಹುದು.

ಸುಭಿದ್ರೆಯು ಒಂದು ತುತ್ತನ್ನು ಬಾಯಿಹತ್ತಿರ ತೆಗೆದು ಕೊಂಡು ಹೋಗಿದ್ದವಳು ಈ ಮಾತು ಕೇಳುತ್ತಲೆ ಚಮಕಿತಳಾಗಿ ಕೆಳಕ್ಕೆ ಬಿಟ್ಟು ಬಿಟ್ಟ್ಗಳು ?

ವಿಶ್ವ-~-ಲಗ್ನ ಯಾವಾಗಲೊ ?

ರಮಾ ___ಕೂಡಲೆ ಆಗಬಹುದು .

ಅಲ್ಲಿಗೆ ಮಾತು ನಿಂತಿತು. ಸುಭದ್ರೆಯಮನಸ್ಸು ವಿಕಾರವನ್ನು ಹೊಂದಿತು. ಅವಳು ತನ್ಮೊಳಗೆತಾನೆ__”ಇದೇನಾಶ್ಚರ್ಯ ? ಕಮ ಲೆಗೆ ಮದುವೆಯಾದರೆ ನನಗೇನು ಸಂಕಟ?” ಎಂದಂದುಕೊಂಡಳು . ಆದರೂ. ಮನಸ್ಸಿನ ವಿಷಾದವು ಹೋಗಲಿಲ್ಲ. ಊಟವು ರುಚಿಸಲಿಲ್ಲ ರಾತ್ರಿ ನಿದ್ರೆಯೂಬರಲಿಲ್ಲ, ಒಂದು ಸಲ ” ಅಯ್ಯೋ! ಹುಚ್ಚ ಳೆ! ನಿನಗೇತಕ್ಕೆ ಬರಿಯಾಸೆ? ತಿಕುಕನು ಕನಸು ಕಂಡಹಾಗೆಯಾವುದೊ ಒಂದು ಉತ್ಕೃಷ್ಟ ಪದಾರ್ಥವನ್ನು ನೆನಸಿಕೊಂಡ ಮಾತ್ರಕ್ಕೆ ನಿನಗೆ ಸಿಕ್ಕಿ ಬಿಡುವುದೆ? ಏತಕ್ಕೆ ವೃಥಾಮನಃಕ್ಲೇಶ“ ಎಂದು ತನ್ನನ್ನು ತಾನೆ ಬೈದುಕೊಳ್ಳುವಳು. ಉತ್ತರ ಕ್ಷಣದಲ್ಲಿಯೇ ಆ ಪ್ರೇಮಪೂರಿತ ವಾದ ವಿಶಾಲನೇತ್ರಗಳೊ ? ಆ ಮಂದಹಾಸಯುಕ್ತವಾದ ಮುಖವೂ? ಇವುಗಳನ್ನು ನಾನು ನೋಡಿದುದು ಸುಳ್ಳೆ “? ಎಂದು ಸಮಾಧಾನಮಾಡಿಕೊಳ್ಳುವಳು. ಹೀಗೆ ಒಂದು. ರಾತ್ರಿಯನ್ನು ಒಂದು ಯುಗವಾಗಿ ಕಳೆದಳು .
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...