Home / ಕವನ / ಕವಿತೆ / ಬೆಳಕನೆರಚು!

ಬೆಳಕನೆರಚು!

ಬೆಳಕನೆರಚು, ಚಳಕನೆರಳು,
ಯುಗ-ಯುಗಾಂತ ತೊಳಗಲಿ!
ಇಳೆಯ ಕವಿದ ಕಳ್ತಲೆಯನು
ಕಳೆದೊಗೆ ದೀಪಾವಳಿ!


ಬರಿಯ ಒಂದೆ ಇರುಳು ಬಂದೆ
ಮುಗಿಯಿತೇನು ಕಾರ್‍ಯ?
ವರುಷದಿ ನೂರಾರು ತಮಸಿ-
ನಿರುಳಿವೆ ಅನಿವಾರ್ಯ!
ಅಂದಂದಿನ ಕತ್ತಲಿಂದೆ
ಮಂದಿಯ ಮನವಿಡಿದು ಮುಂದೆ
ಕರೆದೊಯ್ಯುವರಾರ್ ಅನಂದೆ-
ಮರೆದು ಸರಿಯೆ ನೀನು ?
ಮಿರುಗಿ ಮಾಯವಾಗುತಿರುವ
ಮಿಂಚಿಗೆ ಬೆಲೆಯೇನು?


ನಿನಗಾಗಿಯೆ ಹೊಲ-ನೆಲಗಳು
ಬೆಳೆಯೊಳೇರಿ ನಿಂತಿವೆ;
ನಿನಗಾಗಿಯೆ ಹೊಳೆ-ಕೊಳಗಳು
ತಿಳಿಯ ನೀರನಾಂತಿವೆ.
ಬಿಳಿಯ ಹೊನ್ನ ಸೇವಂತಿಗೆ
ಹೊಳೆದು ನಿನ್ನ ಮೈಕಾಂತಿಗೆ
ಸವಿಗಾರರ ಬಗೆಯ ಸೆಳೆವ
ತವಕದಿ ಬಾಯ್‌ದೆರೆದಿವೆ-
ಬುವಿಯ ಜೀವಕುಲವೆ ದೇವ-
ದಿನವ ನಿನ್ನ ಕರೆದಿವೆ!


ಬರುವುದು ದೀವಳಿಗೆಯೆಂದು
ತಿರೆಯೇ ಕುಣಿ-ಕುಣಿಯಿತು!
ತರುವುದು ಹಿರಿಬೆಳಕನೆಂದು
ಜನವು ದಿನವು ನೆನೆಯಿತು!
ಸಂತೆಗೆ ಹಸರಿಗನು ಬಂದು
ಸಂತೆ ಹರಡಿ ದಿನವದೊಂದು
ಕಂತೆ ಹೇರಿ ಮತ್ತೆ ದಾರಿ
ಹಿಡಿದೆಲ್ಲಿಗೊ ನಡೆವನು;
ಅಂತೆ ನಿನ್ನ ಆಗಮವಿರೆ
ಹಿರಿಮೆ ನಿನ್ನದೇನು?


ಕುರುಡಗೆರಡು ನಿಮಿಷ ಕಣ್ಣ
ನೋಟಗಳನೆ ನೀಡಿ,
ಧರೆಯ ಚನ್ನ ಸೊಬಗಿನನ್ನ-
ವೂಡುವಂತೆ ಮಾಡಿ,
ಮರಳಿ ಕಣ್ಣ ಕಳೆದೊಡವಗೆ
ಇರುವುದೇನು ಬರಿ ತಗುಬಗೆ!
ವರುಷಕೊಂದು ಬಾರಿ ಬಂದು
ಬೆಳಕಕರೆವೆ ನೀನು….
ಉಳಿದ ಇರುಳ ತಮಸಿನುರುಳ
ಕಳೆಯೆ ದಾರಿಯೇನು?
* * *
ಬೆಳಕನೆರಚು, ಬೆಳಕನೆರಚು,
ಯುಗ-ಯುಗವನು ಬೆಳಗಿಸು,
ಇಳೆಯ ಕವಿವ ಕಳ್ತಲೆಗಳ
ಕಳೆದೇಗಲು ತೊಳಗಿಸು !
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...