Home / ಲೇಖನ / ಇತರೆ / ಬಾಲ್ಯ ವಿವಾಹಗಳ ಕಥೆ

ಬಾಲ್ಯ ವಿವಾಹಗಳ ಕಥೆ

‘ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಜಾಸ್ತಿ ಜರುಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಇತ್ತೀಚೆಗೆ ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆ (ಡಿ‌ಎಲ್‌ಎಚ್‌ಎಸ್) ಅಧ್ಯಯನ ನಡೆಸಿರುವುದು.

ಮನೆಯಲ್ಲಿ ಅನಕ್ಷರತೆ, ಬಡತನ, ಮೂಢನಂಬಿಕೆ, ಕಾಯ್ದೆ, ಕಾನೂನು, ಗೊತ್ತಿಲ್ಲದೆ ಇರುವುದರಿಂದ, ಅಜ್ಜ ಅಜ್ಜಿಯರ ಒತ್ತಾಯದ ಮೇರೆಗೆ ಹೆಣ್ಣುಮಕ್ಕಳು ಮದುವೆಯಾದರೆ ಸುರಕ್ಷಿತವೆಂದು ಭಾವಿಸಿರುವುದು; ಬೇಗ ಮದುವೆಯಾದರೆ ಬೇಗ ಮಕ್ಕಳಾದರೆ ಭವಿಷ್ಯ ಉತ್ತಮವಿರುವುದೆಂದು, ಮದುವೆ ಖರ್ಚು ಉಳಿಸಲು ಐದಾರು ಜನರನ್ನು ಒಟ್ಟಿಗೆ ಸೇರಿಸಿ ಮದುವೆ ಮಾಡಿ ಕೈತೊಳೆದುಕೊಳ್ಳುವ ಉದ್ದೇಶದಿಂದ ಬಾಲ್ಯ ವಿವಾಹಗಳು ಹಳ್ಳಿಗಳಲ್ಲಿ ಹಿಂದುಳಿದ ಬಡ ಕುಟುಂಬಗಳಲ್ಲಿ ಜಾಸ್ತಿ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ೧೦ ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.

ಕಲಬುರ್‍ಗಿಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ದಾಖಲಾಗಿವೆ. ಪ್ರಪ್ರಥಮ ಸ್ಥಾನದಲ್ಲಿ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ಗುಟ್ಟಾಗಿ ಬಾಲ್ಯ ವಿವಾಹಗಳು ಜರುಗುತ್ತಿವೆ.

ಕಲಬುರ್‍ಗಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೪೧% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೨೮.೫%

ಉಡುಪಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೨.೪% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೧.೩%ಕ್ಕೆ ಕುಸಿದಿವೆ.

ಬಾಲ್ಯ ವಿವಾಹದ ಪ್ರಮಾಣವು ೨೦೦೭-೨೦೦೮ನೆಯ ಸಾಲಿಗಿಂತ ೨೦೧೨-೨೦೧೩ನೆಯ ಸಾಲಿನಲ್ಲಿ ಒಟ್ಟು ಶೇಕಡಾ ೮.೩% ರಷ್ಟು ಕುಸಿದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಾಲ್ಯವಿವಾಹದ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆಯೆಂದು (ಡಿ‌ಎಲ್‌ಎಚ್‌ಎಸ್) ಕೇ.ಸಾ.ಇ. ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆಯು ಗಮನಾರ್‍ಹವಾದ ಅಂಶಗಳನ್ನು ಬಯಲಿಗೆಳೆದಿದೆ.

ಆದ್ದರಿಂದ ಮುದ್ದಾದ ಮಕ್ಕಳೆ… ತಂದೆ-ತಾಯಿ, ಅಜ್ಜ-ಅಜ್ಜಿ, ಅಕ್ಕ-ಅಣ್ಣಂದಿರಿಗೆ ಕಾನೂನು ಅರಿವು ಮಾಡಿಸಬೇಕು. ಬಾಲ್ಯವಿವಾಹ ಅಪರಾಧ ತಪ್ಪು, ಅಪಾಯ ಅವಮಾನವೆಂದು ತಿಳಿಸಿ ಹೇಳಿ ಅವರ ಮನ ಗೆಲ್ಲ ಬೇಕು. ಬಾಲ್ಯ ವಿವಾಹಗಳು ಎಲ್ಲೇ ಜರುಗಲಿ ಎಲ್ಲರೂ ಒಟ್ಟಾಗಿ ಸೇರಿ ತಡೆಯಬೇಕು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...