Home / ಕವನ / ಕವಿತೆ / ಓಂ ಶಾಂತಿ ಶಾಂತಿ ಓಂ

ಓಂ ಶಾಂತಿ ಶಾಂತಿ ಓಂ

ಕಲಿಯಲಿಲ್ಲ ನಾವು
ಕೃಷ್ಣ, ಕ್ರೈಸ್ತ, ಪೈಗಂಬರ,
ಬುದ್ಧ, ಮಹಾವೀರ, ಸಂತರೆಲ್
ಬೋಧಿಸಿರುವ ಶಾಂತಿ ಮಂತ್ರ,
ಕಲಿಯಲಿಲ್ಲ ನಾವು
ಗೀತೆ ಬೈಬಲ್ ಕುರಾನಿನಿಂದ
ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ,
ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ!
ಮಾರಿಕೊಂಡೆವು ನಾವು
ನಮ್ಮ ಮನದ ಶಾಂತಿ
ಮರುಳಾಗಿ ಹತ್ತು ಹಲವು ಆಮಿಷಗಳಿಗೆ.
ಯಾರು ಕೊಟ್ಟರು ನಮಗೆ
ಒಬ್ಬರನ್ನೊಬ್ಬರು ಕೊಲ್ಲುವ
ಮಕ್ಕಳ ತಬ್ಬಲಿಯಾಗಿಸುವ ಹಕ್ಕು?
ಎಲ್ಲ ಕಡೆ ಬೆಂಕಿ ಹಚ್ಚುವ
ಮನೆಮನೆಯ ಶಾಂತಿ ಕೆಡಿಸುವ ಸೊಕ್ಕು?
ಶಾಂತಿ ಇಲ್ಲದ ಕ್ರಾಂತಿ ಬರೆ ಭ್ರಾಂತಿ!
ಶಾಂತವಾಗಿರೆ ಮನ ಸಾಧನೆಗಿಲ್ಲ ಇತಿಮಿತಿ.
ಹರಡಬಹುದೆಲ್ಲೆಲ್ಲೂ ಬೆಳದಿಂಗಳ ತಂಪು;
ಸೂರ್ಯಾಸ್ತದ ಮುಗಿಲ ರಂಗಿನ ಸೊಂಪು!
ಯಾರು ತಡೆಯಬೇಕೀಗ
ಮಾನವೀಯತೆಯ ನಿರಂತರ ಹೋಮ;
ಮನಮನಕೆ ತಾಗಿರುವ ವಿಕೃತಕಾಮ;
ಶಾಂತಿಯ ಕೆಡಿಸುವ ಮಾರಣ ಹೋಮ
ತುಂಬಲಾರೆವೆ ನಾವು
ಮನಮನದಲ್ಲಿ ಶುದ್ದಭಾವ ತನ್ಮಯತೆ
ಜಾತಿ ಮತ ಭೇದಗಳ ಮರೆತು
ಜಗವ ಪ್ರೀತಿಸುವ ಜೀವಂತಿಕೆ?
ನೆಲೆಸಬೇಕೀಗ
ನಮ್ಮಲ್ಲಿ ನಿಮ್ಮಲ್ಲಿ ಅವರಲ್ಲಿ ಎಲ್ಲರಲಿ
ಉಕ್ಕಿ ಉಕ್ಕಿ ಭೋರ್ಗರೆವ ತೆರೆಗಳು
ಕಡಲತಡಿಯ ಸೋಂಕಿ
ಹಿಂದೆ ಸರಿದು ಸಮುದ್ರ ಸೇರುವಾಗಿನ
ಒಂದು ಕ್ಷಣದ ಪ್ರಶಾಂತ ಸ್ಥಿತಿ.
ಅದೇ ಸಂತರನೇಕರು ಕಂಡ ಸ್ಥಿತ ಪ್ರಜ್ಞಸ್ಥಿತಿ.
ಓಂ ಶಾಂತಿ ಓಂ ಶಾಂತಿ ಓಂ
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...