Home / ಲೇಖನ / ಇತರೆ / ನಿದ್ದೆಯ ಕತೆ

ನಿದ್ದೆಯ ಕತೆ

“ನಿದ್ದೆಗೇಡಿ ಬುದ್ದಿಗೇಡಿ” ಎಂಬ ಗಾದೆ ಮಾತಿದೆ. ನಿದ್ದೆಯಿಲ್ಲದವರು ಬುದ್ಧಿಯಿಲ್ಲದವರು ಒಂದೇ. ದೇಶ ವಿದೇಶಗಳಲ್ಲಿ ಜನರು ಈಗೀಗ ನಿದ್ದೆಯಿಲ್ಲದೆ ವಿಲವಿಲ ಒದ್ದಾಡುತ್ತಿರುವರು. ನಾನಾ ಒತ್ತಡಗಳಿಂದಾಗಿ ಮನಃಶಾಂತಿಯಿಲ್ಲದೆ ಕಡ್ಡಾಯವಾಗಿ ನಿದ್ರೆ ಮಾತ್ರೆ ತೆಗೆದುಕೊಂಡೇ ನಿದ್ರೆಗೆ ಜಾರುತ್ತಿರುವರು. ನಿದ್ರೆಯನ್ನು ಕೊಳ್ಳಲಾಗದು. ಸಹಜವಾಗಿ ನಿದ್ರೆ ಬರಬೇಕು. ಆದರೆ ನಿದ್ರೆಯಿಲ್ಲದೆ ನಾನಾ ಕಸರತ್ತು ಮಾಡುವರು. ಸುಖ, ನಿದ್ರೆ ಮಾತ್ರ ಕಾಣರು.

“ಬೇಗ ಮಲಗು ಬೇಗ ಏಳು” ಇದು ಕೆಲವರ ಕೈಯಿಂದ ಆಗದು. ಇವರು ತಡವಾಗಿ ಮಲಗುವುದು ತಡವಾಗಿ ಏಳುವುದು, ಸೂರ್ಯ ಪುತ್ರರಂತೆ ಬಿಸಿಲು ಮೈಸುಟ್ಟರೆ ಆಗ ಎಚ್ಚರವಾಗುವರು.

ಇನ್ನು ಕೆಲವರು ಸೂರ್ಯಕಾಂತಿಯ ಹೂವಂತೆ ಸೂರ್ಯನಿಗೆ ಮುಖ ಕೊಟ್ಟು ದುಡಿವವರು. ಸೂರ್ಯಾಸ್ತಮಿಸಿದಂತೆ ಅವರ ದುಡಿಮೆ ಮುಗಿವದು. ವಿಶ್ರಾಂತಿ ಬಯಸುವರು.

ಎಷ್ಟು ಹೊತ್ತಿಗೆ ಮಲಗಿದೆ ನಿದ್ರಿಸಿದೆ ಮುಖ್ಯ ಅಲ್ಲ. ಬೆಳಿಗ್ಗೆ ಸೂರ್ಯನನ್ನು ಎಬ್ಬಿಸುವುದು ಜಗಕೆ ಬೆಳಕು ಹರಿಸುವುದು ಮುಖ್ಯ. ಮೂಡಣ ದಿಕ್ಕಿಗೆ ಸೂರ್ಯನಿಗೆ ಮುಖ ಕೊಟ್ಟು ನಿಂತಾಗ ಸೂರ್ಯನಾಡುವ ಆಟದಿಂದ ನಮ್ಮ ಆಟ ಮೊದಲಾಗಬೇಕು. ಆಗ ಶಕ್ತಿ ಸಂಚಲನವಾಗುವುದು. ಅಂದು ಒಳ್ಳೆಯ ನಿದ್ದೆ ಸವಿಯಲು ಸಾಧ್ಯವಿದೆ.

ಒಳ್ಳೆಯ ನಿದ್ದೆ ಸಹಜವಾದ ನಿದ್ದೆ ಮನುಷ್ಯನನ್ನು ಲವಲವಿಕೆಯಿಂದ ಇಡುವುದು. ಏನೆಲ್ಲ ನೆನಪುಗಳನ್ನು ಒತ್ತರಿಸಿಕೊಂಡು ಬರುವುದು.

ನಿದ್ದೆಯ ಬಗ್ಗೆ ಇತ್ತೀಚಿಗೆ ಬ್ರಿಟನ್ ಅಧ್ಯಯನಕಾರರು ಹೊಸ ಹೊಸ ವಿಚಾರಗಳನ್ನು ಸಂಶೋಧಿಸಿರುವರು. ನಿದ್ದೆ-ನೆನಪಿನ ಶಕ್ತಿಯನ್ನು ವೃದ್ಧಿಸುವದೆಂದಿರುವರು. ಬ್ರಿಟನ್‌ನ ಎಕ್ಸೆಟರ್‌ ವಿಶ್ವವಿದ್ಯಾಲಯ ಹಾಗೂ ಸ್ಪೇನ್‌ನ ಮಿದುಳು ಹಾಗೂ ಭಾಷಾ ಕೇಂದ್ರದ ತಜ್ಞರ ತಂಡ ಈ ಅಧ್ಯಯನವನ್ನು ಕೈಗೊಂಡಿದ್ದು… ಈ ಹಿಂದೆ ಮರೆತು ಹೋಗಿದ್ದ ನೆನಪಿಗೆ ಸಿಗದ ಎಷ್ಟೋ ವಿಚಾರಗಳು, ಘಟನೆಗಳು ಸುಮಧುರ ಕ್ಷಣಗಳನ್ನು ಒಳ್ಳೆಯ ನಿದ್ದೆಯು ಸುಲಭವಾಗಿ ನೆನಪು ಮಾಡಿಕೊಳ್ಳಲು ಅನುವು ಮಾಡಿಕೊಡುವುದೆಂದು ಸಂಶೋಧಿಸಿರುವರು.

ಸರಿಯಾಗಿ ನಿದ್ರೆಯಾಗದ ದಿನಗಳಲ್ಲಿ ಎಚ್ಚರವಾಗಿದ್ದ, ನಿದ್ರೆಯಲ್ಲಿ ಮರೆತು ಹೋಗಿರುವ ಎಷ್ಟೋ ಹಣಕಾಸಿನ ವಿಚಾರಗಳು ಒಳ್ಳೆಯ ನಿದ್ರೆಯ ಬಳಿಕ ನೆನಪಿಸಿಕೊಳ್ಳುವ ಸಾಮಾರ್ಥ್ಯ ದುಪ್ಪಟ್ಟಾಗಿರುವುದೆಂದು ಅಧ್ಯಯನಕಾರರು ಖಚಿತಪಡಿಸಿರುವರು.

ಆದ್ದರಿಂದ ಒಳ್ಳೆಯ ನಿದ್ದೆಯಿಂದ ಒಳ್ಳೆಯ ಕನಸುಗಳು ಸಾಕಾರಗೊಳ್ಳುವುದು. ನೆನಪಿನ ಶಕ್ತಿಯನ್ನು ಮತ್ತಷ್ಟು ತೀಕ್ಷ್ಯಗೊಳಿಸುವುದು, ಆಯುಷ್ಯ ವೃದ್ಧಿಸುವುದು. ಇತ್ಯಾದಿ ಲಾಭಗಳನ್ನು ಎಕ್ಸೆಟರ್ ವಿಶ್ವವಿದ್ಯಾಲಯದ ನಿಕೊಲಸ್‌ಡುಮಯ್ ವಿವರಿಸಿರುವರು. ಆದ್ದರಿಂದ ಎಲ್ಲರೂ ಒಳ್ಳೆಯ ನಿದ್ದೆ ಮಾಡಲು ಮನಸು ಮಾಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...