Home / ಕವನ / ಕವಿತೆ / ಕವಿ-ಕಾವ್ಯ

ಕವಿ-ಕಾವ್ಯ

ಅಪರಿಮಿತ ಕತ್ತಲೊಳಗೆ ಬೆಳಕ
ಕಿರಣಗಳ ಹುಡುಕಿದೆ. ಒಂದು ಕವಿತೆ
ಶಕ್ತಿಯಾಗಿ ಎದೆಗೆ ದಕ್ಕಿತು.
ಅಲ್ಲಿ ವಿಶೇಷ ಪರಿಪೂರ್‍ಣ ಪ್ರೀತಿ ಅರಳಿತು.
ಮೆಲ್ಲಗೆ ಹೂ ಶುಭ್ರ ಬಿಳಿಯಾಗಿ, ಕೆಂದಾವರೆ
ಗುಲಾಬಿ ಬಣ್ಣಗಳಲಿ ಅರಳಿ ಘಮ್ಮೆಂದು ಪರಿಸೃಷ್ಠಿ.

ಎದೆಯ ಮೇಲೆ ಬೀಳುವ ಎಲ್ಲಾ
ತರಂಗದ ಬೆಳಕು ಒಳಗೊಳಗೆ ಇಳಿದು
ಬೆಚ್ಚನೆಯ ಕಾವಿನಲಿ ಬಸಿರಾದ ಶಬ್ದಗಳು
ಒಡಲು ಒಜ್ಜೆಯಾಗಿ ಅಗಾಧತೆಯ ಅರಿವು,
ಮೌನದೊಳಗೆ ಸುರುಟಿಕೊಂಡ ದ್ರವ್ಯರಾಶಿ,
ಮಹಾಸ್ಪೋಟವಾದ ಸಾವಿನಾಚೆಯ ಬೆಳಕು ಕಾವ್ಯ.

ಪಠ್ಯಕ್ರಮದ ಪಾಠಶಾಲೆಯ ಪಾಕ ಕುದಿದು
ಶಬ್ದ ರೂಪಗಳ ಅನುಭವ ಕಂಡ ಬಾಳು,
ರೂಪಾಂತರದ ಜಗದ ನಿಯಮ. ತಾಳ್ಮೆಯ
ಹಾಸಿದ ನೆರಳಲಿ ಹಕ್ಕಿಹಾಡು, ಒಳಗೊಳಗೆ ಪ್ರಾಣ
ವಾಯು ಇಳಿದು, ಋತುಗಳ ಸಂವಾದ ಬುದ್ಧನ
ಆತ್ಮದ ಬೆಳದಿಂಗಳು ಹರಡಿ, ಅರಳಿದ
ಅಗೋಚರ ಮನ.

ಇಲ್ಲಿ ಕುಳಿತವರ ಸಾಲು ಕಣ್ಣುಗಳು ಮುಗಿಲ
ಮೋಡಗಳ ಅರಸಿ ಹಾರುವ ಬೆಳ್ಳಕ್ಕಿ ಸಾಲು ಹಿಂಡು,
ಆಸೆಗಳ ಜೀವರಥ ಎಳೆದ ಕನಸುಗಳ ಕನ್ನಡಿ ಪ್ರತಿಫಲಿಸಿ,
ದಾರಿತುಂಬ ಜೀವನದಿ ಹರಿದ ಬಯಲು ಹಸಿರು.
ನಕ್ಷತ್ರಗಳಿಗೆ ತುಪ್ಪ ಹಾಕಿ ಶಬ್ದಗಳ ದೀಪ ಮಾಲೆ ಹಚ್ಚಿ,
ಕತ್ತಲೆಯ ತೆರೆಯ ಬಿಡಿಸಿ ಎಲ್ಲೆಲ್ಲೂ ಬೆಳಕಿನ ಹಾಡುಗಳ
ಹಾಡಿದರು ಜಗದ ಕವಿಗಳು.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...