ಕೆಂಪು ದೀಪದ ಕೆಳಗೆ

ಹನ್ನೆರಡು ವರ್ಷದವಳಿದ್ದಾಗ,
ನನ್ನ ಮದುವೆ ಆಯಿತು.
ದಿನಾಲೂ ಆರು ಗಂಟೆಗೆ
ಎದ್ದು ಕೂಳು ಕುದಿಸಿ,
ಸೂರ್ಯ ಕಣ್ಣು ತೆರೆಯುವ ಮೊದಲೇ
ಭತ್ತ ಕೊಯ್ಯಲು ಹೋಗುತ್ತಿದ್ದೆ.
ಸಂಜೆ ತಂದ ಕೂಲಿಯೆಲ್ಲ
ಗಂಡ ಕಿತ್ತುಕೊಳ್ಳುತ್ತಿದ್ದ.
ಕುಡಿದು ಬಂದು
ಮನಬಂದಂತೆ ಬಡಿಯುತ್ತಿದ್ದ.
ಉಪವಾಸವಿದ್ದ ಹೊಟ್ಟೆ
ಮೇಲಿ೦ದ ಹೊಡೆತಗಳ
ಸಹಿಸಬೇಕಿತ್ತು.
ನಾನೇನೋ ಸಹಿಸಬಹುದು,
ಉಪವಾಸವಿರಬಹುದು
ಆದರೆ ನನ್ನ ಮಕ್ಕಳು
ಹಸಿವಿನಿಂದ ಬಳಲುವುದನ್ನು
ಸಹಿಸಲಸಾಧ್ಯವಾಗುತ್ತಿದ್ದು,

ದಿನದಿನಕ್ಕೆ ಬುದುಕು
ಸಂಕೀರ್ಣವಾಗುತ್ತಿತ್ತು,
ನನ್ನ ಶರೀರ ದಿನದಿನವೂ
ಯಾತನ ಶಿಬಿರವಾಗುತ್ತಿತ್ತು.
ಈಗ ನಾನು
ಪಾತ್ರೆ ತೊಳೆಯುತ್ತೇನೆ.
ಕಸ ಗುಡಿಸುತ್ತೇನೆ
ಬಟ್ಟೆ ಒಗೆಯುತ್ತೇನೆ.
ನಮ್ಮ ಮಾಲೀಕರ
ಮಕ್ಕಳನ್ನು ಆಡಿಸುತ್ತೇನೆ.

ಒಂದು ದಿನ –
ಅಂದು ಮಾಲೀಕರ
ಮನೆಗೆಲಸಕ್ಕೆ ಹೋಗಿದ್ದೆ,
ಮನೆಯ ಮಂದಿಯಲ್ಲ
ಸಿನಿಮಾಕ್ಕೆ ಹೋಗಿದ್ದರು,
ಮಾಲೀಕರು ನನ್ನ
ತಂದೆಯ ವಯಸ್ಸಿನವರು
ಅವರ ಮೇಲೆ ನನಗೆ
ಪೂರ್ಣ ವಿಶ್ವಾಸವಿತ್ತು.
ಆದರೆ ಅವರು ನನ್ನ ವಿಶ್ವಾಸವನ್ನು
ನುಚ್ಚು ನೂರಾಗಿಸಿದ್ದರು.

ಅದನ್ನು ಕಂಡ ಅವನ ಪತ್ನಿ
ನನ್ನನ್ನೇ ಹೊಡೆದು ದೂರಕ್ಕಟ್ಟಿದಳು
ಗಂಡನೂ ಮನೆಯಿಂದ
ದೂರ ಮಾಡಿದನು
ಅಂದಿನಿಂದ ಇಂದಿನವರೆಗೆ
ಈ ಕೆಂಪು ದೀಪದ
ಕೆಳಗೆ ಕುಳಿತು
ನನ್ನ ಮಕ್ಕಳು ಬರುವ
ದಾರಿ ನೋಡುತ್ತಿರುವೆ.
ಬದುಕಿನ ಕೊನೆಯ
ಅಂಚಿನಲ್ಲಿರುವ ಅವರು
ಈಗಲೂ ಬರುವುದಿಲ್ಲವೇನೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹನೆ ಸಾಧನೆಗಳಿಲ್ಲದೆ ಸಾವಯವವೆಂತು?
Next post ಚೇಳು

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…