Home / ಕವನ / ಕವಿತೆ / ಕೆಂಪು ದೀಪದ ಕೆಳಗೆ

ಕೆಂಪು ದೀಪದ ಕೆಳಗೆ

ಹನ್ನೆರಡು ವರ್ಷದವಳಿದ್ದಾಗ,
ನನ್ನ ಮದುವೆ ಆಯಿತು.
ದಿನಾಲೂ ಆರು ಗಂಟೆಗೆ
ಎದ್ದು ಕೂಳು ಕುದಿಸಿ,
ಸೂರ್ಯ ಕಣ್ಣು ತೆರೆಯುವ ಮೊದಲೇ
ಭತ್ತ ಕೊಯ್ಯಲು ಹೋಗುತ್ತಿದ್ದೆ.
ಸಂಜೆ ತಂದ ಕೂಲಿಯೆಲ್ಲ
ಗಂಡ ಕಿತ್ತುಕೊಳ್ಳುತ್ತಿದ್ದ.
ಕುಡಿದು ಬಂದು
ಮನಬಂದಂತೆ ಬಡಿಯುತ್ತಿದ್ದ.
ಉಪವಾಸವಿದ್ದ ಹೊಟ್ಟೆ
ಮೇಲಿ೦ದ ಹೊಡೆತಗಳ
ಸಹಿಸಬೇಕಿತ್ತು.
ನಾನೇನೋ ಸಹಿಸಬಹುದು,
ಉಪವಾಸವಿರಬಹುದು
ಆದರೆ ನನ್ನ ಮಕ್ಕಳು
ಹಸಿವಿನಿಂದ ಬಳಲುವುದನ್ನು
ಸಹಿಸಲಸಾಧ್ಯವಾಗುತ್ತಿದ್ದು,

ದಿನದಿನಕ್ಕೆ ಬುದುಕು
ಸಂಕೀರ್ಣವಾಗುತ್ತಿತ್ತು,
ನನ್ನ ಶರೀರ ದಿನದಿನವೂ
ಯಾತನ ಶಿಬಿರವಾಗುತ್ತಿತ್ತು.
ಈಗ ನಾನು
ಪಾತ್ರೆ ತೊಳೆಯುತ್ತೇನೆ.
ಕಸ ಗುಡಿಸುತ್ತೇನೆ
ಬಟ್ಟೆ ಒಗೆಯುತ್ತೇನೆ.
ನಮ್ಮ ಮಾಲೀಕರ
ಮಕ್ಕಳನ್ನು ಆಡಿಸುತ್ತೇನೆ.

ಒಂದು ದಿನ –
ಅಂದು ಮಾಲೀಕರ
ಮನೆಗೆಲಸಕ್ಕೆ ಹೋಗಿದ್ದೆ,
ಮನೆಯ ಮಂದಿಯಲ್ಲ
ಸಿನಿಮಾಕ್ಕೆ ಹೋಗಿದ್ದರು,
ಮಾಲೀಕರು ನನ್ನ
ತಂದೆಯ ವಯಸ್ಸಿನವರು
ಅವರ ಮೇಲೆ ನನಗೆ
ಪೂರ್ಣ ವಿಶ್ವಾಸವಿತ್ತು.
ಆದರೆ ಅವರು ನನ್ನ ವಿಶ್ವಾಸವನ್ನು
ನುಚ್ಚು ನೂರಾಗಿಸಿದ್ದರು.

ಅದನ್ನು ಕಂಡ ಅವನ ಪತ್ನಿ
ನನ್ನನ್ನೇ ಹೊಡೆದು ದೂರಕ್ಕಟ್ಟಿದಳು
ಗಂಡನೂ ಮನೆಯಿಂದ
ದೂರ ಮಾಡಿದನು
ಅಂದಿನಿಂದ ಇಂದಿನವರೆಗೆ
ಈ ಕೆಂಪು ದೀಪದ
ಕೆಳಗೆ ಕುಳಿತು
ನನ್ನ ಮಕ್ಕಳು ಬರುವ
ದಾರಿ ನೋಡುತ್ತಿರುವೆ.
ಬದುಕಿನ ಕೊನೆಯ
ಅಂಚಿನಲ್ಲಿರುವ ಅವರು
ಈಗಲೂ ಬರುವುದಿಲ್ಲವೇನೋ
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...