Home / ಕವನ / ಕವಿತೆ / ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ
ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ||

ಮಠತುಂಬ ರಂಗೋಲಿ ಮುತೈದಿ ಬಾಲೇರು
ಪಡಿಹಿಗ್ಗು ಪಂಚಮಿ ಮಾಡ್ಯಾರೆ
ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ
ಕಾಶೀಯ ಪೀತಾಂಬ್ರ ಉಟ್ಟಾರೆ ||೧||

ಪರಪಂಚ ಪಂಚೇತಿ ಫಜೀತಿ ಪುರಮಾಶಿ
ಕೀರ್ತನಾ ಕೇಳಾಗ ಹೋಗೇತೆ
ಉಟಸೀರಿ ಜಾರೇತೆ ಮುಡಿಸೆರಗು ಹಾರೇತೆ
ಗರತೇರ ಮಾನಾ ಮಾರೇತೆ ||೨||

ಸಾಮೇರ ಮಂಚಕ್ಕ ಪಂಚರಂಭೇರೇರಿ
ಹಣ್ಗಾಯಿ ನೀರ್‍ಗಾಯಿ ಆಗ್ಯಾರೆ
ಸಾಮೇರ ತೊಡಿಮ್ಯಾಗ ಆರೂರ ಹುಡಿಗೇರು
ಬಕಬಾರ್‍ಲೆ ಕಣ್ತಿರಿಗಿ ಬಿದ್ದಾರೆ ||೩||

ಗುರುಗೋಳು ಬಂದಾರೆ ಗುರುವಣ್ಣಿ ಕೂಡ್ಯಾರೆ
ಮಠದಾಗ ಹೆಂಡಿರ ಮಾಡ್ಯಾರೆ
ಹೋದೋರು ಆರ್‍ಮಂದಿ ಬಂದೋರು ಮೂರ್‍ಮಂದಿ
ಊರ್‍ಮಂದಿ ಹುಡಿಗೇರು ಬಸರಾಗೆ ||೪||

ಗೋಡಿ ಬುದಬುದು ಬಿದ್ದು ಪೀಠ ಫಡಫಡ ಎದ್ದು
ಸಾಮೇರು ಕಾಮೇರು ಆಗ್ಯಾರೆ
ನವಿಲೀನ ನಾರೇರ ಕದ್ದಾರೆ ಮೆದ್ದಾರೆ
ಮುಗಿಲೀನ ತೊಟ್ಟಿಲಾ ತೂಗ್ಯಾರೆ ||೫||
*****
ಶ್ರಾವಣ=ಆತ್ಮಿಕ ಶ್ರವಣಾ; ಸ್ವಾಮೇರು = ಭಗವಂತ; ಮಠ = ಬ್ರಹ್ಮ ತತ್ವ; ಬಾಲೇರು-ಹುಡಿಗೇರು-ಗರತೇರು-ಗುರುವಣ್ಣಿ-ಹೆಂಡಿರು = ಸರ್ವ ಆತ್ಮರು; ಪಂಚಮಿ=ಪಂಚೇಂದ್ರಿಯಗಳ ಕೂಟ; ಉಟಸೀರಿ= ದೇಹಾಭಿಮಾನ (Physical Consciousness); ಆರ್‍ಮಂದಿ = ಷಡ್ವೈರಿಗಳು; ಮೂರ್‍ಮಂದಿ=ಸತ್, ಚಿತ್, ಆನಂದ; ಬಸರಾಗು=ಆತ್ಮ ಜ್ಞಾನಿಯಾಗು; ಕಾಮೇರು = ಕಾರುಣ್ಯದ ಮೇರು; ಮುಗಿಲಿನ ತೊಟ್ಟಿಲು = ಅಶರೀರ ಸ್ಥಿತಿ (Supra-mental plane).

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...