Home / ಲೇಖನ / ಇತರೆ / ಇಕ್ಕಳ

ಇಕ್ಕಳ

ಪ್ರಿಯ ಸಖಿ,
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ ‘ಕೆಟ್ಟ ಬಿಸಿಲೆಂ’ದರು
ಮಳೆ ಬಿತ್ತೋ ‘ಬಿಡದಲ್ಲ ಶನಿ’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.
ಕವಿ ಕೆ. ಎಸ್. ನರಸಿಂಹಸ್ವಾಮಿಯವರ ‘ಇಕ್ಕಳ’ ಕವನದ ಈ ಸಾಲುಗಳು ವಿಕ್ಷಿಪ್ತ ಮನೋಭಾವದ ವ್ಯಕ್ತಿಗಳ ಮನೋಭಾವವನ್ನು ಕುರಿತ ಚಿತ್ರಣವನ್ನು ನೀಡುತ್ತದೆ. ಸದಾ ಟೀಕಿಸುವುದನ್ನೇ ಗುರಿಯಾಗಿ ಇಟ್ಟುಕೊಂಡ ಇಂತವರಿಗೆ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ ಪ್ರವೃತ್ತಿ, ಟೀಕೆ ಮಾಡಿ ಗೊಣಗಾಡದಿದ್ದರೆ ಇವರಿಗೆ ಸಮಾಧಾನವೇ ಇಲ್ಲ. ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಎಲ್ಲದರ ಬಗೆಗೂ ಇವರಿಗೆ ಅಸಮಾಧಾನವೇ. ಕವನವಮ್ನ ಮುಂದುವರೆಸುತ್ತಾ ಕವಿ
ನಿಂತವರ ಕೇಳುವರು, ನೀನೇಕೆ ನಿಂತೆ?
ಮಲಗಿದರೆ ಗೊಣಗುವರು. ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ!
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಯಾವುದನ್ನೂ ಒಪ್ಪದ ಇವರಿಗೆ ನಿಂತರೂ ತಪ್ಪು ಮಲಗಿದರೂ ತಪ್ಪು, ಓಡಿದರೂ ತಪ್ಪು! ಒಟ್ಟಿನಲ್ಲಿ ಯಾವ ವಸ್ತುವನ್ನೇ ಆಗಲಿ ಪರಿಸ್ಥಿತಿಯನ್ನೇ ಆಗಲಿ, ಕಾಲವನ್ನೇ ಆಗಲಿ, ವ್ಯಕ್ತಿಯನ್ನೇ ಆಗಲಿ ಟೇಕಿಸುತ್ತಲೇ ಇರುವುದು ಇವರ ಸ್ವಭಾವ. ಇದೊಂದು ರೀತಿಯ ಮನೋರೋಗವೂ ಹೌದು. ಅತೃಪ್ತ ಮನಸ್ಸಿಗೆ ಸದಾಲೋಕವೇ ಡೊಂಕಾಗಿ ಕಾಣುತ್ತದೆ. ಯಾವುದರಿಂದಲೂ ತೃಪ್ತಿ ಹೊಂದದ ವಿಲಕ್ಷಣ ವ್ಯಕ್ತಿಗಳೊಂದಗಿನ ಬಾಳೂ ಅಸಹನೀಯವೇ.

ಇಂತಹವರ ಕೈಗಳಿಗೆ ಸಿಕ್ಕಿಕೊಂಡ ವ್ಯಕ್ತಿ ಇಕ್ಕಳದ ಮಧ್ಯೆ ಸಿಕ್ಕಂತೆ ಚಡಪಡಿಸ ಬೇಕಾಗುತ್ತದೆ. ಯಾವುದು ಸರಿಯೋ? ಯಾವುದು ತಪ್ಪೋ? ಯಾವುದನ್ನು ಮಾಡಬೇಕು? ಯಾವುದನ್ನು ಬಿಡಬೇಕು? ಹೇಗೆ ನಡೆದುಕೊಂಡರೆ ಸರಿ? ಎಂದು ಅರಿಯದೇ ಚಡಪಡಿಸಿ, ಗೊಂದಲಕ್ಕೊಳಗಾಗುತ್ತಾನೆ. ಆದರೆ ಇಂತಹ ಅತೃಪ್ತ ಮನಸ್ಸಿನವರ ಟೀಕೆಗೆ ಕಿವಿಗೊಟ್ಟು ಮಾನಸಿಕ ಕ್ಷೋಭೆಗೊಳಗಾಗುವುದಕ್ಕಿಂತಾ, ಅವರನ್ನು ಅವರ ಪಾಡಿಗೆ ಟೀಕಿಸಲು ಬಿಟ್ಟು, ನಮ್ಮ ವಿವೇಚನೆಯಿಂದ ಸರಿ ತಪ್ಪನ್ನು ತಿಳಿದುಕೊಂಡು ಅವರ ಮಾತುಗಳಿಗೆ ಜಾಣ ಕಿವುಡು ನಟಿಸುವುದೇ ಉತ್ತಮವಾದ ಮಾರ್ಗ ಎಂದು ನನಗನ್ನಿಸುತ್ತದೆ. ನಿನ್ನ ಅಭಿಪ್ರಾಯವೇನು ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...