Home / ಕವನ / ಕವಿತೆ / ಕೆಂಬಕ್ಕಿ

ಕೆಂಬಕ್ಕಿ

ಈ ಇವನು
ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು
ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ
ಬರೀ ಬೋಳುಮರ; ಕಾಂಡವೆಲ್ಲ ಪೊಟರೆ
ಮೇಲೊಂದು ಎರವಲು ವರ್ಣತೆರೆ.
ಆದರೇನಂತೆ-
ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು
ಸದಾ ಷೇಕ್ಸ್‍ಪಿಯರ್ ವರ್ಡ್ಸ್‌ವರ್ತ್ ಶೆಲ್ಲಿಯ ಸಿಳ್ಳೆಹಾಕಿ
ಸಮಯಕ್ಕೆ ಸರಕಿರಲೆಂದು ಕಷ್ಟಪಟ್ಟು ಕಲಿತ ಅವರಿವರ
ಅರ್ಧಂಬರ್ಧ ವಚನ
ಗತಿಬಿಟ್ಟು ಶ್ರುತಿಗೆಟ್ಟು ಹರಿದ ತಂತಿಯನ್ನೇ ಗಂಟುಹಾಕಿ
ಕೊರೆವ ವೀಣಾವಾದನ.
ಈ ನೆಲದ ವಾಸನೆಗೆ ಮೂಗು ತೆಗೆಯುತ್ತೇನೆಂದು
ಬಾಯಿ ತೆಗೆದು
ಗಡಿಯಾಚೆ ಗಡಂಗಿನಲ್ಲೇ ಕಿವಿಯಿಟ್ಟು ಹರುಕು-
ಮರುಕು ಮುಕ್ಕಿದ್ದಕ್ಕೆ ಧ್ವನಿವರ್ಧಕ ಸಾಧನ.
ದೇಶಭಾಷಾ ಸಾಹಿತ್ಯ ಕಲೆಗಳಿಗೆ ಮಾತ್ರ ಕೋಶಕೋಶವನ್ನೆಲ್ಲ
ಪಚಪಚನೆ ಅರೆಬರೆ ಅಗಿದು ಉಗುಳುವ ಈ ಇವನು
ಮಿಕಿಮಿಕಿ ನೋಡಿದ ಆಂಗ್ಲ-ಅಮೇರಿಕನ್ನರ ಚರ್ಮ ಹೊದೆದ ಮಿಕ.

ಒಟ್ಟಿನಲ್ಲಿ ಹೇಳಬೇಕೆ ?
ಇದೊಂದು ರೆಡಿಮೇಡ್ ರಬ್ಬರ್ ಹಕ್ಕಿ
ಕೆಂಬಕ್ಕಿ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...