Home / ಲೇಖನ / ವಿಜ್ಞಾನ / ಶುದ್ಧ ರಕ್ತಕ್ಕೂ ಬರ ಬರಬಹುದೆ?

ಶುದ್ಧ ರಕ್ತಕ್ಕೂ ಬರ ಬರಬಹುದೆ?

ಜಾಗತಿಕ ಹತೋಟಿಗೆ ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದಿರುವುದರಿಂದ ಕೀಟನಾಶಕಗಳು ಪರಸ್ಪರ ದೇಶ- ವಿದೇಶಗಳಿಗೆ ರಫ್ತಾಗುತ್ತಲೇ ಇರುತ್ತವೆ. ಇದರ ದುಷ್ಪರಿಣಾಮ ಮೊದಲಿಗೆ ಅಷ್ಟೇನೂ ಕಂಡು ಬಂದಿಲ್ಲವಾದರೂ ಈದೀಗ ವಿಶ್ವಸಂಸ್ಥೆಯ ಆರೋಗ್ಯ ಘಟಕವು ಈ ಕೀಟನಾಶಕಗಳಿಂದ ಜೀವರಾಶಿಗಳ ಮೇಲೆ ಆಗುವ ಅಪಾಯವನ್ನು ಮನಗಂಡಿದೆ. ಬಂಡವಾಳಶಾಹಿ ನಾಡುಗಳು ಕೀಟನಾಶಕ ನಂಜನ್ನು ಅಭಿವೃದ್ಧಿ ಶೀಲನಾಡುಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಕಳಿಸುತ್ತಿರುವುದು ಅಪಾಯಕಾರಿಯಾಗಿದೆ. ಇದನ್ನು ವಿಶ್ವಸಂಸ್ಥೆಯ ಆರೋಗ್ಯ ಘಟಕ ತಡೆಯುವಲ್ಲಿ ವಿಫಲವಾಗಿದೆ.

ಅಮೇರಿಕಾ ದೇಶದಲ್ಲಿ D.D.T ಯ ಮೇಲೆ ನಿರ್ಬಂಧ ಇರುವುದರಿಂದ ಇಲ್ಲಿಯ ಜನ ನಂಜಿನ ಅಂಶದಿಂದ ಸ್ವಲ್ಪ ಮುಕ್ತರೆನ್ನಬಹುದು. ಭಾರತದ ಮುಂಬೈ ನಗರ ವಾಸಿಗಳ ರಕ್ತದಲಿ ಅತಿಹೆಚ್ಚು ಕೀಟನಾಶಕ ನಂಜು ಪತ್ತೆಯಾಗಿದೆ, ರಕ್ತವನ್ನು ಸೇರುವ P.E.B.ಕೀಟನಾಶಕ ನಂಜು, ಹುಟ್ಟುವ ಸಂತಾನದ ಮೇಲೂ ಪರಿಣಾಮ ಬೀರುತ್ತದೆಂಬುವುದು ಕಳವಳಕಾರಿ ಅಂಶವಾಗಿದೆ. ಈ ಬಗೆಗೆ ಸಾವಿರಾರು ದಂಪತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗಂಡಸರು ತಮ್ಮ ವಿರ್ಯಾಣು ಶಕ್ತಿಯನ್ನು ಕುಂದಿಸಿಕೊಂಡಿರುವುದೂ ಹೆಂಗಸರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚಿರುವುದೂ ಪತ್ತೆಯಾಗಿದೆ. ರಕ್ತಸೇರಿದ ಈ ಕೀಟನಾಶಕದ ಈ ನಂಜು ದೈಹಿಕ ಬೆಳವಣಿಗೆಗೆ, ಉಸಿರಾಟಕ್ಕೆ ದುಷ್ಪರಿಣಾಮ ಬೀರುತ್ತದೆ. ಕೀಟನಾಶಕ ಬಳಕೆಯ ನಾಡುಗಳ ಜನರನ್ನು ಪರೀಕ್ಷಿಸಿದಾಗ ಶೇ.೮೦ ರಷ್ಟು ನೇರವಾಗಿ ಈ ನಂಜಿನಿಂದ ಆರೋಗ್ಯವಂಚಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ D.D.T ಯ ನಂಜು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆಯಾದರೂ ಫ್ಲೋಲಿಕ್ಲೋರಿನೆಟೆಡ್ ಬೈಡೆನೆಲ್ಸ್‌ ನಂಜಿನ ಪ್ರಮಾಣ ಕಡಿಮೆಯಾಗಿಲ್ಲ. ಅಮೇರಿಕಾದಲ್ಲಿಯ ಸಂಶೋಧನೆಯಂತೆ ೧೯೮೫ ರ ಸಂದರ್ಭದಲ್ಲಿ ೨.೦ ಯಿಂದ ೧೯.೩ ಮಿಲಿ ಲೀಟರ್ D.D.T. ಅಂಶ ಜನರ ನೆತ್ತರು ಸೇರಿ ವಿವಿಧ ತೊಂದರೆಗಳಿಗೆ ಕಾರಣವಾಗಿದೆ. ಭಾರತದ ದೆಹಲಿ, ಅಹಮದಾಬಾದ್ ವಾಸಿಗಳಲ್ಲಿ ೩೭.೩ ಮಿ.ಲೀಟರ್ ಹಳ್ಳಿಗಾಡು ಜನರಲ್ಲಿ ೮.೬ ಮಿಲಿ ಲೀಟರ್ D.D.T. ಅಂಶ ರಕ್ತದಲ್ಲಿಸೇರಿಕೊಂಡಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿಯೂ ಸಹ ಮೇಲಿನ ಸ್ಥಿತಿಯೇ ಇದೆ. ಉಷ್ಣಪ್ರದೇಶದಲ್ಲಿನ ಕೀಟನಾಶಕ ನಂಜು ಬಿಸಿಗಾಳಿ ಈ ಪ್ರದೇಶಕ್ಕೆ ಸಹಜವಾಗಿ ದಾಳಿ ಮಾಡುತ್ತಿರುವುದೇ ಇಂದಿನ ಎತ್ತರ ಧೃವ ಪ್ರದೇಶದ ಆತಂಕಕ್ಕೆ ಕಾರಣವಾಗಿದೆ. ಉತ್ತರ ದೃವದ ನೀರಿನಲ್ಲಿ ಈಗಾಗಲೇ ೮,೪೦೦ ಟನ್‌ಗಳಷ್ಟು, B.H.E. ಕೀಟನಾಶಕ ನಂಜು ಸೇರಿದೆ. ಭಾರತ ಉತ್ತರ ಗಡಿಪ್ರದೇಶದಲ್ಲಿರುವ ಹಿಮಾಲಯವು ತಂಪು ಪ್ರದೇಶವಾದುದರಿಂದ ಹಿಮಾಲಯದ ತಪ್ಪಲು ಇಂದು ಕೀಟನಾಶಕ ರೋಗ ನಿರೋಧಕದ ನಂಜಿನಿಂದ ಬಸವಳಿದೆ. ಹೀಗೆ ಈ ಕೀಟನಾಶಕಗಳ ಹಾವಳಿಯಿಂದ ಮುಂದೊಂದು ದಿನ ಮನುಷ್ಯನ ರಕ್ತ ಮಲಿನಗೊಂಡು ಶುದ್ದವಾದ ರಕ್ತ ದೊರೆಯುವ ಸಂಭವವೇ ಇಲ್ಲದಾಗುತ್ತದೇನೋ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...