Home / ಕವನ / ಕವಿತೆ / ಸಾವು

ಸಾವು

ಕಂಡಿರುವೆ ಮೂರು ಸಲ ಇವನ ಮೋರೆ,
ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ,
ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ
ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು,
ಉಂಡದ್ದು ಉದರ ಸೇರದ ಯಾವ ರೋಗವೋ!
ತಿನಿಮೋರೆ ಚಂದವೋ, ಅರಕೆ ಅತೃಪ್ತಿಗಳೆ
ತೇದ ಇದ್ದಿಲಿನಲ್ಲಿ ಗೆರೆನಿಂತೆ ಬರಲುಮುಖ;
ರೆಪ್ಪೆ ತಡೆಯೂ ಇರದ ಬತ್ತುಗಣ್ಣೊಡಲಲ್ಲಿ
ನೆತ್ತರನೆ ಹೆಪ್ಪುಗಟ್ಟಿಸುವ ಥಣ್ಣನೆ ಬೆಳಕುಗೋಲಿ,
ಜೋಲ್ವ ಗೊಣೆಸಿಂಬಳದ ಬಣ್ಣದಾಲಿ;
ಕಪ್ಪು ಹಾವಂಥ ಉದ್ದನೆ ನಂಜುಗೈ ಚಾಚಿ,
ಉತ್ತಬಿತ್ತಗಳನ್ನೆ ಹೆಕ್ಕಿ,
ಹುಬ್ಬೆತ್ತಿ ನಗುವ ಲೊಟಕರಿಸಿ ನೆಕ್ಕಿ.

ಈಚೀಚೆ ಎಲ್ಲೆಲ್ಲು ಇವನ ನೆರಳು-
ಮೂಳೆಗಣ್ಣಿನ ಸುತ್ತ ಕರಿಯುಂಗುರವ ಬೆಳೆದ
ಮೂವತ್ತು ದಾಟಿರುವ ಬ್ರಹ್ಮಚಾರಿ;
ಆಳತೋಳಿಗೆ ದಬ್ಬಿ ಮಗುವನು, ಸಮಾಜದಲಿ
ಭಾಷಣದ ಸೇವೆ ನಡೆಸಿಹ ಶ್ರೀಮತಿ;
ಅಕ್ಕಿಯಂಗಡಿ ಮುಂದೆ ಮೈಲುದ್ದ ಕ್ಯೂನಿಂತು,
ಬೆವರಿಡುವ ಮುಖವ ಚೀಲದಲೆ ಒರೆಸುತ್ತಿರುವ
ಕಂಗಾಲುಗಣ್ಣಿನ ಸ್ವತಂತ್ರ ಗಣರಾಜ್ಯ;
ತಿವಿದಾಗ ಎಚ್ಚತ್ತು ಗಡಬಡಿಸಿ ಕೈಯೆತ್ತಿ
ನಿರ್ಣಯವ ಪಾಸುಮಾಡುವ ಪಕ್ಷ ಬಹುಮತ;
– ಇಲ್ಲೆಲ್ಲ ಆಡಿದಂತಿದೆ ಇವನ ಬೆರಳು.

ಇವನ ಮೈ ಒಮ್ಮೊಮ್ಮೆ ಬೆಳೆದು ಹರಡುವುದು
ಮಣ್ಣು ಮುಗಿಲಿನ ನಡುವೆ ನಂಜುತೆರೆಯಾಗಿ
ನಡುನಡುವೆ ಹರುಕಾಗಿ ಮೋಡಿ ಕೂಗುವುದು.
ಕಾರು ಮೋಟರು ರೈಲು ಕೈಗಾಡಿ ಪ್ಲೇನು,
ನರ ನಾಯಿ ಗಿಡ ಬಳ್ಳಿ ಕಾಗೆ ಗಿಳಿ ಮೀನು,
ಮಗು ಮುದುಕ ಮೊಳಕೆ ಮರ ಮಿಡಿ ಹೀಚು ಹಣ್ಣು-
ಎಲ್ಲಕ್ಕು ಸ್ಫರ್ಧೆ ಆಗ
ಹರುಕಿನಲಿ ತೂರುವಾಗ.
ತೆರೆ ತೂರಿದರೆ ಉಳಿವು
ತಡೆದು ಕೆಡೆದರೆ ಮುಗಿವು.
ತೆರೆ ಬಡಿದು ಸಿಡಿದ ಹರಣದ ಹರಹು ಕಂಡಾಗ
ಬೆರಗಾಗಿ ಬುದ್ಧಿಗನಿಸುವುದು,
ಸಾವೆ ಪ್ರಕೃತಿ, ಬಾಳೆ ವಿಕೃತಿ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...