ಮಳೆ

ಮಳೆ ಎಂದರೆ ಭರ್ರೆಂದು ಎಲ್ಲಾ ಕೊಚ್ಚಿ
ರೊಚ್ಚಿ ಸೀಳಿ ಹಾಯ್ದು ಹರಿದು
ತಲ್ಲಣಗಳ ಬಂಡಾಟಗಳ ಕಳವಳ
ಸೊಂಯ್ಯ ಎಂದು ಸೆಳೆದು ಸಮುದ್ರ
ಅಲೆಗಳ ಅಬ್ಬರಿಕೆ ಹೆಚ್ಚುವ ಬಿಂದುಗಳು.

ಮಳೆ ಎಂದರೆ ಸಣ್ಣಗೆ ಒಡಲು
ಕಂಪಿಸಿ ಬೀಜಗಳ ಮರ್ಮರ ಎದೆಗೆ
ಹಾಯಿಸಿ ಒಳಗೊಳಗೆ ಕುದಿದ ಕಾವಿಗೆ ಸ್ಪರ್ಶ
ಕೊಟ್ಟು ರೆಂಬೆ ಕೊಂಬೆಗಳ ಬೇರುಗಳಿಗೆ
ಹಸಿರು ಉಸಿರು ಹಾಯಿಸಿದ ಜೀವ ಪದಗಳು

ಮಳೆ ಎಂದರೆ ಭೂಗರ್ಭದ ತುಂಬಿದ
ಜೀವ ಜಲಕೆ, ಮೆಲ್ಲಗೆ ಮುಲಕಾಡುವ
ರಸಚೇತನ ಸುರಿಸಿ ಅಲ್ಲೊಂದು ಹುಟ್ಟು
ಸ್ಪುರಿಸಿ ಮೆದು ಹಾಲು ತುಂಬಿದ ಎದೆ
ಕಾಳುಗಳು ಒಡಲು ತುಂಬಿದ ಸಿರಿ ರಾಗಗಳು.

ಮಳೆ ಎಂದರೆ ತೇಲಿ ತೇಲಿ ಮೋಡಗಳು
ಕನಸು ತುಂಬಿದ ಪಡಸಾಲೆ ಜೋಕಾಲಿ ಜೀಕಿ
ಒಲೆಯ ಮುಂದೆ ಅರಳಿದ ರಂಗೋಲಿ ಕುದಿದ
ಗಂಜೀ ಸುವಾಸನೆ, ಅಂಗಳದಲ್ಲಿ ಬಿದ್ದ ಹೊಂಡಗಳ
ಗುರುತು, ಆತ್ಮಕೆ ಅಮರುವ ತಂಪು ಹನಿಗಳು.

ಮಳೆ ಎಂದರೆ ಇಳಿದ ಬಿಂದುಗಳು
ರಾಗಗಳು ಹನಿಗಳು ಪದಗಳು
ಅವಿರ್ಭವಿಸಿ ಅಂತರಂಗದಲಿ ಮರುಹುಟ್ಟು
ಮೋಡಗಳಾಗಿ ಬದುಕು ಬಯಲ ಬಾನ ತುಂಬಾ
ಹರಡಿ ಹಸಿರಾಗಿ, ನೀಲಿಯಾಗಿ, ಖುಷಿಯಾಗಿ, ಮತ್ತೆ
ಹೊಯ್ಯುವ ಅಮೃತ ವಾಹಿನಿಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...