Home / ಕವನ / ಕವಿತೆ / ವೇಮುಲನಿಗೊಂದು ಪ್ರಶ್ನೆ

ವೇಮುಲನಿಗೊಂದು ಪ್ರಶ್ನೆ

ಜಗದೊಳಗೆ ಹುಟ್ಟಿಬೆಳೆದರೂ
ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ.

ಇಲ್ಲದ ಮೂಲದಲ್ಲೇ ಹುಟ್ಟಿದರೂ
ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು
ಇದ್ದರಮನೆಯ ಮಾರಿ ತಿಂದವರು ಇಹರು
ಪರಿಪರಿಯ ಪಂಡಿತರು, ಪಾಮರರು,
ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದು
ನಮ್ಮತನದ ಮೂಲ ಮಂತ್ರ. ವಿವಿಧತೆಯಲ್ಲಿ ಏಕತೆ
ರಾಷ್ಟ್ರ ಭಾವೈಕ್ಯತೆ
ಅಂಬೇಡ್ಕರ ನನಸಾದ ಕನಸಲ್ಲವೇ ಸಂವಿಧಾನ

ಓದಿಕೊಂಡಿರಲಿಲ್ಲವೇ ವೇಮುಲ
ನೀನು ಬಾಬಾ ಸಾಹೇಬರ?
ಓದಿದಿದ್ದರೆ ಓಡಿಹೋಗುತ್ತಿರಲಿಲ್ಲ
ಹೀಗೆ ಹೇಡಿಯಾಗಿ.
ಹೆತ್ತ ಹೊಟ್ಟೆಗೆ ಉರಿ‌ಅಟ್ಟಿ
ಬೇಯಿಸಿಕೊಳ್ಳುವುದಾದರೂ
ಏನಿತ್ತು ನಿನಗೆ?
ಹೆಸರಿಗಷ್ಟೇ ನೀನು ಹೋರಾಟಗಾರ ಅಂಬೇಡ್ಕರರಂತೆ ಎನಿಸಿಕೊಂಡೆ.
ಅವರ ನೋವಿನ ಹನಿ ರವವಷ್ಟೇ ಇರಬೇಕು
ನಿನಗೆ ತಗುಲಿದ ನೋವು
ಇರಲಿಲ್ಲ ಬಿಡು ನಿನ್ನಲ್ಲಿ ತಾಳಿಕೊಳ್ಳುವ
ತಾಕತ್ತು, ಅಪಮಾನ ಗೆಲ್ಲುವ ಗತ್ತು
ಇದ್ದರೆ ನೀನು ಮತ್ತೊಬ್ಬ ಬಾಬಾಸಾಹೇಬ ಆಗುತ್ತಿದ್ದೆ.
ಕೂಳನ್ನು ಕಸಿದುಕೊಂಡರಲ್ಲವೇ ಅವರು
ಅಸ್ಪೃಶ್ಯನೆಂದು ಕಪ್ಪು ಪಟ್ಟಿಯ ಸಿದ್ಧ ಮಾಡಿದರೆಂದೆ.
ಇತ್ತಿದ್ದರು ನೆಲೆ ನೀನು ಈ ನೆಲದ ಕುಡಿಯೆಂದು
ನಾಡ ಬೀಜವೆಂದು. ಉಗ್ರನಲ್ಲವೆಂದು
ವ್ಯಗ್ರನಾಗನೆಂದು.
ಹೊಟ್ಟೆಗೆ ಹಿಟ್ಟಿಲ್ಲದ ಹಟ್ಟಿಯಲ್ಲಿ ಹುಟ್ಟಿದೆ ನೀನು
ಹೋರಾಟದ ಬಿಂಬವ ಎದೆಯೊಳಗಿಟ್ಟುಕೊಂಡು
ತಣ್ಣೀರ ಬಟ್ಟೆ ಹೊಟ್ಟೆಗಿಟ್ಟು
ನಿನ್ನ ಮೆದುಳ ಪುಷ್ಟಿಗೊಳಿಸಬೇಕೆಂದರು ನಿನ್ನ
ಒಡಲಲ್ಲಿ ಹೊತ್ತವರು
ಅಡ್ಡಕಸುಬಿಗಳಿಗೆ ಅನುಯಾಯಿಯಾದೆ ನೀನು
ದೇಶ ಭಕ್ತಿಯ ಕುಡಿಗಳು ನೀವು
ದುಷ್ಟಸರ್ಪಗಳಿಗೇಕೆ ಹಾಲೆರೆದಿರಿ?
ಬದುಕಿದ್ದರೆ ಉತ್ತರಿಸುತ್ತಿದ್ದೆಯಾ?
ಅಥವಾ ಸರ್ಪಸಂಕುಲಕ್ಕೆ ಹಾಸುಗಂಬಳಿಯಾಗುತ್ತಿದ್ದೆಯಾ?
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...