Home / ಕವನ / ಕವಿತೆ / ವೇಮುಲನಿಗೊಂದು ಪ್ರಶ್ನೆ

ವೇಮುಲನಿಗೊಂದು ಪ್ರಶ್ನೆ

ಜಗದೊಳಗೆ ಹುಟ್ಟಿಬೆಳೆದರೂ
ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ.

ಇಲ್ಲದ ಮೂಲದಲ್ಲೇ ಹುಟ್ಟಿದರೂ
ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು
ಇದ್ದರಮನೆಯ ಮಾರಿ ತಿಂದವರು ಇಹರು
ಪರಿಪರಿಯ ಪಂಡಿತರು, ಪಾಮರರು,
ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದು
ನಮ್ಮತನದ ಮೂಲ ಮಂತ್ರ. ವಿವಿಧತೆಯಲ್ಲಿ ಏಕತೆ
ರಾಷ್ಟ್ರ ಭಾವೈಕ್ಯತೆ
ಅಂಬೇಡ್ಕರ ನನಸಾದ ಕನಸಲ್ಲವೇ ಸಂವಿಧಾನ

ಓದಿಕೊಂಡಿರಲಿಲ್ಲವೇ ವೇಮುಲ
ನೀನು ಬಾಬಾ ಸಾಹೇಬರ?
ಓದಿದಿದ್ದರೆ ಓಡಿಹೋಗುತ್ತಿರಲಿಲ್ಲ
ಹೀಗೆ ಹೇಡಿಯಾಗಿ.
ಹೆತ್ತ ಹೊಟ್ಟೆಗೆ ಉರಿ‌ಅಟ್ಟಿ
ಬೇಯಿಸಿಕೊಳ್ಳುವುದಾದರೂ
ಏನಿತ್ತು ನಿನಗೆ?
ಹೆಸರಿಗಷ್ಟೇ ನೀನು ಹೋರಾಟಗಾರ ಅಂಬೇಡ್ಕರರಂತೆ ಎನಿಸಿಕೊಂಡೆ.
ಅವರ ನೋವಿನ ಹನಿ ರವವಷ್ಟೇ ಇರಬೇಕು
ನಿನಗೆ ತಗುಲಿದ ನೋವು
ಇರಲಿಲ್ಲ ಬಿಡು ನಿನ್ನಲ್ಲಿ ತಾಳಿಕೊಳ್ಳುವ
ತಾಕತ್ತು, ಅಪಮಾನ ಗೆಲ್ಲುವ ಗತ್ತು
ಇದ್ದರೆ ನೀನು ಮತ್ತೊಬ್ಬ ಬಾಬಾಸಾಹೇಬ ಆಗುತ್ತಿದ್ದೆ.
ಕೂಳನ್ನು ಕಸಿದುಕೊಂಡರಲ್ಲವೇ ಅವರು
ಅಸ್ಪೃಶ್ಯನೆಂದು ಕಪ್ಪು ಪಟ್ಟಿಯ ಸಿದ್ಧ ಮಾಡಿದರೆಂದೆ.
ಇತ್ತಿದ್ದರು ನೆಲೆ ನೀನು ಈ ನೆಲದ ಕುಡಿಯೆಂದು
ನಾಡ ಬೀಜವೆಂದು. ಉಗ್ರನಲ್ಲವೆಂದು
ವ್ಯಗ್ರನಾಗನೆಂದು.
ಹೊಟ್ಟೆಗೆ ಹಿಟ್ಟಿಲ್ಲದ ಹಟ್ಟಿಯಲ್ಲಿ ಹುಟ್ಟಿದೆ ನೀನು
ಹೋರಾಟದ ಬಿಂಬವ ಎದೆಯೊಳಗಿಟ್ಟುಕೊಂಡು
ತಣ್ಣೀರ ಬಟ್ಟೆ ಹೊಟ್ಟೆಗಿಟ್ಟು
ನಿನ್ನ ಮೆದುಳ ಪುಷ್ಟಿಗೊಳಿಸಬೇಕೆಂದರು ನಿನ್ನ
ಒಡಲಲ್ಲಿ ಹೊತ್ತವರು
ಅಡ್ಡಕಸುಬಿಗಳಿಗೆ ಅನುಯಾಯಿಯಾದೆ ನೀನು
ದೇಶ ಭಕ್ತಿಯ ಕುಡಿಗಳು ನೀವು
ದುಷ್ಟಸರ್ಪಗಳಿಗೇಕೆ ಹಾಲೆರೆದಿರಿ?
ಬದುಕಿದ್ದರೆ ಉತ್ತರಿಸುತ್ತಿದ್ದೆಯಾ?
ಅಥವಾ ಸರ್ಪಸಂಕುಲಕ್ಕೆ ಹಾಸುಗಂಬಳಿಯಾಗುತ್ತಿದ್ದೆಯಾ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...