Home / ಕವನ / ಕವಿತೆ / ಕರ್ಪುರದಾರುತಿ ಬೆಳಗಿರೆ ಹರಗೆ

ಕರ್ಪುರದಾರುತಿ ಬೆಳಗಿರೆ ಹರಗೆ

ಕರ್ಪುರದಾತಿ ಬೆಳಗಿರೆರ ಹರಗೆ
ಕಾಮಿನಿಯಿರೆಲ್ಲಾ ಕರುಣಸಾಗರಗೆ || ಪ ||

ಅಪ್ಸರ ಸ್ತ್ರೀಯರು ಹರುಷಮನಸದಿ
ರೂಪ ಲಕ್ಷಣವಂತರೆಲ್ಲರು
ಮುಪ್ಪರ ಮನ ಮುಂದಿಟ್ಟು ಮಹಾಗುರು
ಸರ್ಪಭೂಷಣ ಸಾಂಬಗೆ || ಅ. ಪ. ||

ವಾರಿನೋಟದ ವನಜಾಕ್ಷಿಯರು
ಚಾರುತರದ ಚನ್ನಿಗ ಪ್ರಾಯದವರು
ತೋರುತಿರ್ಪ ಒಳ್‍ಕಮಲಗಂಧಿಯರು
ಸಾರಸಾಕ್ಷಿಯರು ಮದಗಜಗಮನಿಯರು
ನಾರಿಯರು ನಯನದಿಂದ ನಿರ್ಮಲಾಕಾರ
ಕಣ್ಮನ ದಣಿಯದೆ ನಿಜ ರಾಗದಲಿ
ಸರಿಗಮವ ಪಾಡುತ ಮಾರಮಹೇಶನಿಗೆ || ೦ ||

ಬಾಲಕೀರ ವಾಣಿಯರು ಭಕ್ತಿಯಲಿ
ನೀಳಕುಂತಳೆಯರು ನಿರುತದಲಿ
ವಾಲಿ ಬುಗುಡಿ ಬಾವುಲಿ ಕರ್ಣದಲಿ
ಮೇಲು ಮುತ್ತಿನ ಹಾರ ಕೊರಳಿನಲಿ
ಕೀಲಗಡಗವು ಹರಡಿ ಹಸ್ತದಿ
ಮೇಳೈಸಿ ಕೊಂಡಾರುತಿಯ ಪಿಡಿದು ಶುಭ
ಸಾಲ ದೀವಿಗಿ ಬೆಳಕಿನೊಳು
ಸುಶೀಲೆಯರು ಪ್ರಭುಲಿಂಗಗೆ || ೨ ||

ಚೆನ್ನಚಲುವ ಚಿತ್ರದ ಗೊಬೆಯ ತೆರದಿ
ಕನ್ನೆಯರು ಕೂಡಿ ವತ್ತರದಿ
ರನ್ನ ಕಲಶಗಿಂಡಿಗಳ ವಿಸ್ತರದಿ
ಹೊನ್ನು ತಳಗಿಗಳ ಪಿಡಿದೆತ್ತಿ ಕರದಿ
ಎನ್ನೊಡೆಯ ಶಿಶುನಾಳಕೊಪ್ಪುವ
ಶೂನ್ಯ ಸಿಂಹಾಸನದಿ ಸದ್ಗುರು
ಸನ್ನಿಧಾನಕೆ ಬಂದು ಸಖಿಯರು
ಓಂ ನಮಃ ಶಿವ ಎನ್ನುತಲಿ || ೩ ||
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...