Home / ಕವನ / ಕವಿತೆ / ಕಾರಂಜಿ ಕೆರೆಯ ಬಳಿ

ಕಾರಂಜಿ ಕೆರೆಯ ಬಳಿ

ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ
ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ
ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ
ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ
ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ
ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ
ಅಲಗುವುದೊ, ಮಲಗಿಹುದೊ, ಎನುವಂತೆ ಸುಳಿಯುತಿಹ
ಮೆಲ್ಲಲೆಗಳಾಳದಲಿ ನೆರಳುಗಳು ನಡುಗುತಿವೆ!
ಅವು ತೊಟ್ಟ ನೀರಂಗಿಯಲಿ ಕಾಲ ಮಾಡಿಟ್ಟ
ಹರುಕಿನಲಿ, ತಾರೆಗಳ ಛಾಯೆ ಅಲ್ಲಲ್ಲಿರಲು,
ದೂರದಲಿ, ಮೂಡಲಕೆ, ಕಂಬವೊಂದರ ಮೇಲೆ
ಮಂಕಡರಿ ಮಿಣುಕುತಿಹ ದೀಪದರೆನೆರಳೊಂದು
ಅಲೆಗಳಾಳದ ಇರುಳ ಭೇದಿಸುತ ಅತ್ತಿತ್ತ
ಒಸರುತಿದೆ. ಆ ಮೂಲೆಯೊಳಗೊಂದು ಬೆಳ್ವಕ್ಕಿ
ನೀರೊಳಗ ಮೀನುಗಳ ಸಂಸಾರವನು ಹೊಂಚಿ
ಕಾಯುತಿದೆ. ಇತ್ತ ಮೃಗಶಾಲೆಯಲಿ, ಬಂಧನದ
ಕೂಳನುಣ್ಣುತ ಮರುಗಿ, ಬಿಡುಗಡೆಗೆ ಹಂಬಲಿಸಿ,
ಒಲ್ಲದೆಯೆ ಬಲ್ಲಿದರ ಬಿಲ್ಗಳಿಗೆ ನೇಣಾಗಿ,
ಕಾತರದಿ, ಸಂಕಟದಿ, ಇರುಳಲೇ ನರಳುತಿಹ
ಹಾರು ಹಕ್ಕಿಗಳೆದೆಯ ಕೊರಗ ದನಿಯೊಳು ದನಿಯ
ಕೂಡಿಸಿವೆ ಕಾಡ ಹುಲಿ ಸಿಂಹಗಳು, ಅದ ಕೇಳಿ
ಮಾರುದನಿ, ಆ ಕಡೆಗೆ, ಮಾನವನ ಮುಗಿಲಾಸೆ
ಬಿಂಬಿಸುತ, ಚಾಮುಂಡಿ ಬೆಟ್ಟ ನೆಟ್ಟನೆ ನಿಂತು
ಮುಗಿಲಿಗೀಟಿಯ ಹಾಕಲೆನುವಂತೆ ನಿಮಿರಿಹುದ
ಕಂಡು ಹಿಂದೆಗೆಯುತಿದೆ; ಮೌನಕ್ಕೆ ಶರಣಾಗಿ
ನೀರಿನಲ್ಲಿ ಮುಳುಗುತಿದೆ, ನೀರ ಪಕ್ಕದ ಹಾದಿ
ತುಳಿಯುತಿಹ ಗೆಳಯರಗೊ, ಕತ್ತಲಲಿ ಬರಿಯೆರಡು
ನೆರಳಾಗಿ ಸರಿದಿಹರು. ಅವರಲೊಬ್ಬನ ದನಿಯ
ಹೆಣ್ತನದ ಮಾಧುರ್ಯ, ಅಳಿದ ಬಾಳಿನ ಒಂದು
ಸವಿಗನಸ ನನಸಂತೆ, ಹೃದಯದೊಳ ಇಂಚರದಿ
ಹಾಸು ಹೊಕ್ಕಾಗುತಿರೆ, ಮೈ ಮನಸು ಮೇಲೇರಿ
ಆಗಸದ ಮಡಿಲಿನಲಿ ಉಯಾಲೆಯಾಡುತಿಹ
ಬಿಳಿ ಮೋಡದೊಳಗೊಂದು ಕಣವಾಗಿ ಇಣುಕುತಿದೆ.
ಕೇಳುತಿದೆ- ಸ್ವರ್ಗದೊಳಗಿಂತು ಆತ್ಮೀಯತೆಯ,
ಗೆಳೆತನದ, ನೆನಪುಗಳ, ಪ್ರೇಮದುನ್ಮಾದಗಳ
ನೋವು ನಲೆಗಳುಂಟೆ ?- ಇಲ್ಲಿರಲು ಅಲ್ಲೆಲ್ಲಿ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...