Home / ಕವನ / ಕವಿತೆ / ಬೇಕಾಗಿತ್ತೆ ಈ ದೂರದ ಹಾದಿ

ಬೇಕಾಗಿತ್ತೆ ಈ ದೂರದ ಹಾದಿ

ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು
ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ
ಎಲ್ಲೋ ಬುಲ್‌ಡೋಜರ್‌ದ ಸದ್ದು
ಜಾಲಾಡಿಸಿದ ಅನುಭವ
ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು
ಗಗನಸಖಿಯ ಒಂದೇ ಸಮನದ ಉಲಿತ
“ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ”

ಕಣ್ಣು ಬಿಟ್ಟದ್ದಷ್ಟೇ, ಉಸಿರು ನೆತ್ತಿಗೆ ಏರಿ
ಸಾವಿನಂಚಿಗೆ ಕರೆಯುವ ಎದೆ ಬಡಿತ
ಕಿಡಕಿಯಾಚೆ ಆನೆ ಐರಾವತ ಕರಿಮೋಡಗಳ
ಘರ್ಜನೆ ದಟೈಸಿದ ಕಪ್ಪು ಛಾಯೆ
ಉಸಿರುಗಟ್ಟಿ ಕಿತ್ತೋಡುವ
ನೊರೆನೊರೆಯ ಬಿಳಿಮೋಡ ಮೊಲಗಳು
ಬಿಟ್ಟೂಬಿಡದೆ ಎಗ್ಗರಿಸಿ
ಹೆದರಿಸುವ ಡೈನಾಸೋರುಗಳು

ಸಾವಿರಾರು ಮೈಲು ಹಿಂದೆ ಬಿಟ್ಟು ಬಂದ
ಮಕ್ಕಳ ಮುಗ್ಧ ಮುಖ; ಮುಂದೆ
ಸಾವಿರಾರು ಮೈಲಿನಲಿ ಕಾತರಿಸಿ ಕಾಯುತಿರುವ
ಜೀವದ ಜೀವ
ಒಬ್ಬೊಂಟಿ ಪಯಣಿಗಳು ಕಣ್ತುಂಬ ನೀರು.

ಮತ್ತೆ ಮತ್ತೆ ಅದೇ ಉಲಿತ
(ಏಳದಿರಿ ಸೀಟುಬಿಟ್ಟು, ನಡೆದಾಡದಿರಿ,
ಹೊರಗಡೆ ಭಾರಿ ಮೋಡಗಳು, ಗುಡುಗುಮಿಂಚು
ಬಿಗಿಯಾಗಿರಲಿ ಸೊಂಟಪಟ್ಟಿ ಎದೆಗುಂದದಿರಿ)

ಅಜ್ಜಿಯ ಪ್ರೀತಿ ಅಮ್ಮ ಅಪ್ಪನ ಬಾಳದೋಣಿ
ಸಾಧನೆಯ ಕನಸಿಗೆ ಕಾಲುಹಾದಿಯಲಿ
ಓಡಾಡಿ ದಕ್ಕಿಸಿಕೊಂಡ ಹೆಮ್ಮೆ
ಈತ ಒಮ್ಮೊಮ್ಮೆ ಸೂರ್ಯ ಚಂದ್ರ
ಎಲ್ಲರ ಮುಖಗಳು ಕಣ್ಣಿಗೆ ಕಟ್ಟುತ್ತವೆ
ದುಗುಡಿನ ಸವಾರಿಗರು
ಕಾಣದ ದೇವರಿಗೆ ಹರಕೆ ಹೊರುವ ಸಮಯ

ಬೇಕಾಗಿತ್ತೆ ಈ ದೂರದ ಹಾದಿ,
ಹಣದ ಬೆನ್ನೇರಿಕೆಗೇನಾದರು ಒಳಸಂಚೆ…..
ಕನವರಿಕೆ ಕಳವಳ ತಳಮಳ
ಬಿಕ್ಕಳಿಕೆ ಅಸಹಾಯಕತೆ
ಕಿಡಕಿಯಾಚೆ ಆನೆಗಳ ಗುದ್ದಾಟ
ಸೀಳಿ ಹೊರಟಿರುವ ಈ ಜಂಬೋಸವಾರಿ…..
ಸಾವಿಗೆ ಕ್ಷಣ ಗಣನೆ ಇದ್ದೀತೆ?
ಅಯ್ಯೋ ದೇವರೆ ಬೇಕಾಗಿತ್ತೆ…..
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...