Home / ಕವನ / ಕವಿತೆ / ಸರತಿಯಲಿ ನಿಂತವರು

ಸರತಿಯಲಿ ನಿಂತವರು

ಸಾವು ಮಾರಾಟಕ್ಕಿದೆ ಇಲ್ಲಿ
ಜಗದ ಮಾರುಕಟ್ಟೆಯಲ್ಲಿ
ತಕ್ಕಡಿಯ ಒಂದು ಬದಿ
ಹಸಿವು
ಕಲ್ಲಾಗಿದೆ
ಇನ್ನೊಂದು ಬದಿ
ಗ್ರೆನೇಡುಗಳು ಹಿಟ್ಟಿನ
ಮುದ್ದೆ!

ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ
ಸಣ್ಣ ಕಂದಮ್ಮಗಳ ಎದೆಯ
ಗೂಡಲ್ಲಿ
ಇನ್ನೂ ಜೀವವಿದೆ
ತೂರಿ
ಆಟವಾಡುತ್ತಿವೆ ಕೈ
ಬಾಂಬುಗಳನ್ನೇ ಚೆಂಡೆಂದು

ಬತ್ತಿದ ಮೊಲೆಯ ತಾಯಂದಿರು
ಬಂದೂಕುಗಳ ಹಿಡಿದು
ಒಲೆ ಹಚ್ಚಿದರೆ
ಅನ್ನದ ಡಬರಿಯಲಿ ತಮ್ಮದೇ
ಕೂಸುಗಳು
ಕುದಿಯುತ್ತಿವೆ ಕೊತ ಕೊತ
ಸಣ್ಣ ಕರುಳು, ಬೋಟಿ, ಖಲೀಜ

ಅಂಗಳದಿ ಅಪ್ಪಂದಿರು ರಾತ್ರಿ
ಯ ಚಳಿ ಕಾಯಿಸಲು
ಹುಡುಕಬೇಕಿಲ್ಲ
ಯಾವ ಹುಲ್ಲಿನ ಬಣವೆಯನ್ನೂ
ಹಾರುವ ವಿಮಾನಗಳು ಖಂಡಿತ
ಉದುರಿಸುತ್ತವೆ ಮಿಸೈಲು
ಬಾಂಬು
ಬೆಂಕಿ ಸಹಿತ

ರಕ್ತದ ರುಚಿ ಹೊತ್ತ
ಸಾವು
ತೂಗುವ ತಕ್ಕಡಿಗೆ
ಗೆದ್ದಲು ಹಿಡಿಯುವ ದಿನ
ದೂರವಿಲ್ಲ
ಸರತಿಯಲಿ ನಿಂತವರು
ನಾವೇ
ಕೊನೆಯಲ್ಲ!
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...